ಸುದ್ದಿಬಿಂದು ಬ್ಯೂರೋ
ಕಾರವಾರ : ರಾಜ್ಯದ ಶಿಕ್ಷಣ ಸಚಿವರಾಗಿರುವ ಮಧು ಬಂಗಾರಪ್ಪ ಅವರು ಪ್ರಣವನಾಂದ ಸ್ವಾಮೀಜಿ ಅವರು ತಮ್ಮ ಸಮಾಜದ‌ ಸ್ವಾಮೀಗಳೇ ಅಲ್ಲ.ಅವರೊಬ್ಬ ತಲೆಹರಟೆ ಎಂದಿರುವುರು ಅವರ ಗೌರವಕ್ಕೆ ಶೋಭೆ ತರುವಂತದಲ್ಲ ಎಂದು ರಾಷ್ಟ್ರೀಯ ಈಡಿಗ ರಾಜೇಂದ್ರ ನಾಯ್ಕ ಖಂಡಿಸಿದ್ದಾರೆ
.

ಉತ್ತರಕನ್ನಡ ಜಿಲ್ಲೆಯ ಕಾರವಾರದ ಜಿಲ್ಲಾ ಪತ್ರಿಕಾಭನದಲ್ಲಿ ನಡೆದ ಸುದ್ದಿಗೋಷ್ಟೀಯನ್ನ ಉದ್ದೇಶಿ ಮಾತನಾಡಿದ ರಾಜೇಂದ್ರ ನಾಯ್ಕ ಮದು ಬಂಗಾರಪ್ಪ ಅವರು ಪ್ರಣವನಂಂದ ಸ್ವಾಮೀಜಿ ತಲೆ ಹರಟೆ ಸ್ವಾಮೀಜಿ ಎಂದಿರುವ ಹೇಳಿಕೆಯನ್ನ ತೀವ್ರವಾಗಿ ಖಂಡಿಸಿದ್ದಾರೆ.

ತಲೆ ಹರಣೆ ಅರ್ಥವೇನು,? ಮಧು ಬಂಗಾರಪ್ಪ ಅವರಿಗೆ ಸ್ವಾಮೀಜಿ ಅವರು ಏನಾದ್ರೂ ತೊಂದರೆ ಕೊಟ್ಟಿದ್ದರಾ‌‌. ಅಥವಾ ಸ್ವಾಮೀಜಿಗಳು ನಡೆಸುವ ಹೋರಾಟಗಳಿಗೆ ನಿಮ್ಮ ಬಳಿ ಭೀಕ್ಷೆ ಬೇಡಿದ್ದರಾ.ಇಲ್ಲ ನಿಮ್ಮ ಸಂಸ್ಥೆಯಲ್ಲಿ ಪಾಲುದಾರಾಗುತ್ತೇವೆ ಅಂತಾ ಹೇಳಿದ್ದರಾ..? ನಿಮ್ಮನ್ನ ಮಂತ್ರಿ ಮಾಡದೆ ತಮ್ಮಗೆ ಮಂತ್ರಿ ಸ್ಥಾನ ಕೊಡಿ ಎಂದು ಸ್ವಾಮೀಜಿ ಕೇಳಿದ್ದರಾ‌.

ಶಿಕ್ಷಣ ಸಚಿವರಾಗಿರುವ ಮಧು ಬಂಗಾರಪ್ಪ ಅವರಿಗೆ ಮಾತಿನಲ್ಲಿ ಹಿಡಿತ ಇರಬೇಕು. ಶಿಕ್ಷಣ ಸಚಿವರಾಗಿರುವ ತಾವು ಶಿಕ್ಷಣ ಕ್ಷೇತ್ರದಲ್ಲಿ ಕಾಂತ್ರಿ ಮಾಡುವಂತ ಕೆಲಸ ಮಾಡಲಿ ಅದನ್ನ ಬಿಟ್ಟು ಸ್ವಾಮೀಜಿಗಳ ವಿರುದ್ಧ ಇಲ್ಲ ಸಲ್ಲದ ಮಾತುಗಳನ್ನ ಆಡುವುದು ಸರಿಯಲ್ಲ.

ಜನವರಿಯಲ್ಲಿ ಉಡುಪಿಯಲ್ಲಿ ರಾಷ್ಟೀಯ ಈಡಿಗ ಮಹಾಮಂಡಳಿಯಿಂದ ಉಡುಪಿಯಲ್ಲಿ ಬೃಹತ್ ಸಮಾವಶ‌ ನಡೆಯಲಿದೆ. ಈ ಹಿನ್ನಲೆಯಲ್ಲಿ ಸೆ 9ರಂದು ಬೆಂಗಳೂರಿನ ಫ್ರೀಡಮ್ ಪಾರ್ಕ್‌ ನಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಸೇರಿರುವ ಬೃಹತ್ ಜನಸಂಖ್ಯೆಯನ್ನ‌ ನೋಡಿ ಸಹಿಸಿಕೊಳ್ಳಲಾಗದೆ. ಪ್ರಣವಾನಂದ ಸ್ವಾಮೀಜಿ ‌ಅವರ ವಿರುದ್ಧ‌ ಕುತಂತ್ರಗಳನ್ನ ನಡೆಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಇನ್ನೂ ತಿಮ್ಮೆ ಗೌಡರು ಪ್ರಣವನಾಂದ‌ ಸ್ವಾಮೀಜಿ ನಮ್ಮ‌ಸಮಾಜದ ಸ್ವಾಮೀಜಿ ಅಲ್ಲ ಎಂದು ಹೇಳುತ್ತಾರೆ.ಇವರೆ ಬೇರೆ ಯಾರೋ ಸ್ಕ್ರಿಪ್ಟ್ ಬರೆದುಕೊಟ್ಟಿದ್ದಾರೆ ಅದನ್ನ‌ನೋಡಿ ತಿಮ್ಮೆ ಗೌಡರು ಓದಿದ್ದಾರೆ ಅಷ್ಟೆ. ಈ ತಿಮ್ಮೆ ಗೌಡ ರಾಜ್ಯದಲ್ಲಿ ಕಷ್ಟದಲ್ಲಿ ಇರುವ ನಮ್ಮ ಸಮಾಜದವರ ಬೆಂಬಲಕ್ಕೆ ನಿಂತಿದ್ದಾರೆ ಎನ್ನುವುದನ್ನ ಮೊದಲು ತಿಳಿಸಿಲಿ ಎಂದರು.