ಸುದ್ದಿಬಿಂದು ಬ್ಯೂರೋ
ಕುಮಟಾ : ಕಾಂಗ್ರೆಸ್ ಈಗಾಗಲೇ ರಾಜ್ಯದಲ್ಲಿ ಸ್ಪರ್ಧೆ ಮಾಡಲಿರುವ ಅಭ್ಯರ್ಥಿಗಳ ಹೆಸರನ್ನ ಎರಡು ಹಂತದಲ್ಲಿ ಘೋಷಣೆ ಮಾಡಿದೆ.ಆದರೆ ಕುಮಟಾ ಹೊನ್ನಾವರ ಕ್ಷೇತ್ರಕ್ಕೆ ಶಾರದಾ ಶೆಟ್ಟಿ ಅವರ ಹೆಸರನ್ನ ತಕ್ಷಣ ಘೋಷಣೆ ಮಾಡಬೇಕು ಎಂದು ಅಭಿಮಾನಿಗಳು ಆಗ್ರಹಿಸಿದ್ದಾರೆ.

ಮಾಜಿ ಶಾಸಕಿ ಶಾರದಾ ಮೋಹನ ಶೆಟ್ಟಿ ಅವರ ಮನೆಯಲ್ಲಿ ನೂರಾರು ಸಂಖ್ಯೆಯಲ್ಲಿ ಸೇರಿರುವ ಅಭಿಮಾನಿಗಳು ಸಭೆ ನಡೆಸಿದ್ದು, ಶಾರದಾ ಶೆಟ್ಟಿ ಅವರು ಶಾಸಕರಾಗಿದ್ದಾಗ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನ ಮಾಡಿದ್ದಾರೆ.ಹಾಗೂ ಪಕ್ಷವನ್ನ ತಳಮಟ್ಟದಿಂದ ಸಂಘಟನೆ ಮಾಡಿಕೊಂಡು ಬಂದಿದ್ದಾರೆ.
ಓರ್ವ ಮಹಿಳೆಯಾಗಿದ್ದು ಶಾಸಕರಾಗಿದ್ದ ಸಮಯದಲ್ಲಿ ಕ್ಷೇತ್ರದ ಜನರ ಸಮಸ್ಯೆಗೆ ಸ್ಪಂಧಿಸಿದ್ದಾರೆ.ಪಕ್ಷ ಸ್ಥಳೀಯ ಹಾಗೂ ರಾಜ್ಯ ನಾಯಕರ ಜೊತೆ ಕೂಡ ಉತ್ತಮ ಸ್ನೇಹದಿಂದ ಒಗ್ಗೂಡಿಕೊಂಡು ಬರುತ್ತಿದ್ದಾರೆ. ಕಳೆದ ಬಾರಿ ಪರೇಶಮೇಸ್ತಾ ಸಾವಿನ ಪ್ರಜರಣದಿಂದ ಹಿನ್ನಡೆ ಉಂಟಾಗಿದೆ ಬಿಟ್ಟರೆ ಬೇರೆ ಯಾವ ಕಾರಣ ಇಲ್ಲ. ಇನ್ನೂ ಕಳೆದ ಚುನಾವಣೆಯಲ್ಲಿ ಹಿನ್ನಡೆಯಾದ್ರೂ ಸಹ ಪಕ್ಷದ ಯಾವುದೆ ಕಾರ್ಯಚಟುವಟಿಕೆಯಿಂದ ದೂರ ಉಳಿದಿಲ್ಲ

ಆದರೂ ಕೂಡ ಇದುವರಗೆಗೂ ಶಾರದಾ ಶೆಟ್ಟಿ ಅವರ ಹೆಸರನ್ನ ಪಕ್ಷದ ಹೈಕಮಾಂಡ ಘೋಷಣೆ ಮಾಡಿಲ್ಲ.ಅದು ಯಾಕೆ ಎಂಬುದು ಅರ್ಥವಾಗುತ್ತಿಲ್ಲ. ಅದು ಏನೆ ಇದ್ದರೂ ಕೂಡ ಪಕ್ಷದ ಹೈಕಮಾಂಡ ತಕ್ಷಣ ಕುಮಟಾ ಕ್ಷೇತ್ರಕ್ಕೆ ಶಾರದಾ ಶೆಟ್ಟಿ ಅವರ ಹೆಸರನ್ನ ಘೋಷಣೆ ಮಾಡಬೇಕು ಎಂದು ಅಭಿಮಾನಿಗಳು ಆಗ್ರಹಿಸಿದ್ದಾರೆ.