ಕಾರವಾರ : ಪರೇಶಮೆಸ್ತಾ ಸಾವಿನ ಪ್ರಕರಣದಲ್ಲಿ  ಕಾರ್ಯಕರ್ತರನ್ನ  ಮೇಲೆ ದಾಖಲಾಗಿರುವ ಕೇಸ್ ನ್ನ ಹಿಂಪಡೆಯದೆ ತನ್ನ ಮೇಲಿನ ಕೇಸನಷ್ಟೆ ಸ್ಥಳೀಯ ಶಾಸಕರು ವಾಪಸ್ ಪಡೆದುಕೊಂಡಿದ್ದಾರೆಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಶಾಸಕರಿಗೆ ತರಾಟೆಗೆ ತೆಗೆದುಕೊಂಡ ಆಡಿಯೋ ಇದೀಗ ವೈರಲ್ ಆಗಿದೆ.

ಹೊನ್ನಾವರದ ಪರೇಶಮೆಸ್ತಾ ಅನುಮಾನಾಸ್ಪದ ಸಾವಿನ ಬಳಿಕ ಕುಮಟ ಹಾಗೂ ಹೊನ್ನಾರವರ ಭಾಗದಲ್ಲಿ ದೊಡ್ಡ ಪ್ರತಿಭಟನೆಗಳು ನಡೆದು ನೂರಾರು ಜನರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅದೆಷ್ಟೊ ಮಂದಿ ಬಿಜೆಪಿ ಕಾರ್ಯಕರ್ತರು ಜೈಲಿಗೂ ಕೂಡ ಹೋಗಿ ಬರುವಂತಾಗಿತ್ತು. ಈ ವೇಳೆ ಸ್ಥಳೀಯ ಶಾಸಕ ದಿನಕರ ಶೆಟ್ಟಿ ವಿರುದ್ಧವು ಕೂಡ ಪ್ರಕರಣ ದಾಖಲಾಗಿತ್ತು. ಸದ್ಯ ಪರೇಶಮೆಸ್ತಾ ಸಾವಿ‌‌ನ ಪ್ರಕರಣದಲ್ಲಿ ತನಿಖೆ ನಡೆಸಿದ ತಂಡ ನ್ಯಾಯಾಲಯಕ್ಕೆ ಬಿ ರಿಪೋರ್ಟ್ ಸಲ್ಲಿಸಿದೆ ಆದರೆ ಅಂದು ಯಾರೇಲ್ಲಾ ಮೇಲೆ ಪ್ರಕರಣ ದಾಖಲಾಗಿದೆ ಅವರೆಲ್ಲಾ ಇಂದಿಗೂ ಕುಮಟ ತಾಲೂಕು ದಂಡಾಧಿಕಾರಿಗಳ ನ್ಯಾಯಾಲಯಕ್ಕೆ ತಿರುಗಬೇಕಾದ ಪರಿಸ್ಥಿತಿ ಇದೆ.

ಈ ನಡುವೆ ಸ್ಥಳೀಯ ಶಾಸಕ ದಿನಕರ ಶೆಟ್ಟಿ ಪಕ್ಷಕ್ಕಾಗಿ ದುಡಿದು ತನ್ನನ್ನು ಗೆಲ್ಲಿಸಿದ ಕಾರ್ಯರ್ತರ ಮೇಲೆ ಇರುವ ಪ್ರಕರಣನ್ನ ಹಿಂದಕ್ಕೆ ಪಡೆಯದೆ .ತನ್ನ ಅಧಿಕಾರವನ್ನ ಬಳಸಿಕೊಂಡು ಅಧಿಕಾರಿಗಳ ಮೇಲೆ ಒತ್ತಡ ತಂದು ತನ್ನ ಮೇಲಿನ ಕೇಸ್ ಮಾತ್ರ ಹಿಂದಕ್ಕೆ ಪಡೆದುಕೊಂಡಿದ್ದಾರೆ ಎಂದು ಪಕ್ಷದ ಕಾರ್ಯಕರ್ತರೆ ಇದೀಗ ಶಾಸಕ ದಿನಕರ ಶೆಟ್ಟಿ ವಿರುದ್ಧ ಗರಂ ಆಗಿದ್ದಾರೆ.

ಮಾರ್ಚ 02ರಂದು ನಡೆದ ಬಿಜೆಪಿ ಸಭೆಯಲ್ಲಿ ಈ ವಿಚಾರಕ್ಕೆ ಸಂಬಂಧಿಸಿ ಸಭೆಯಲ್ಲಿ ಸೇರಿದ್ದ ಪಕ್ಷದ ಕಾರ್ಯಕರ್ತರು, ಶಾಸಕರನ್ನ ತರಾಟೆಗೆ ತೆಗೆದುಕೊಂಡಿದ್ದಾರೆ. ಕಾರ್ಯಕರ್ತರು ಶಾಸಕರನ್ನ ತರಾಟೆಗೆ ತೆಗೆದುಕೊಂಡ ಆಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗತ್ತಾ ಇದೆ.

ಜೆಡಿಎಸ್ ನಾಯಕ ಸೂರಜ್ ಸೋನಿ ತಮ್ಮ ಆಪ್ತರ ಪರ ಹೋರಾಟ ನಡೆಸಿ ನ್ಯಾಯಾಲಯದಲ್ಲಿ ತಮ್ಮ ಆಪ್ತರ ಪರ ನ್ಯಾಯವಾದಿಗಳನ್ನು ನೇಮಿಸಿ ಕಾನೂನು ಹೋರಾಟಕ್ಕೆ  ಸೂರಜ್ ಸೋನಿ ಮುಂದಾಗಿದ್ದಾರೆ. ಆದರೆ ಸ್ಥಳೀಯ ಶಾಸಕರು ತಮ್ಮ ಪಕ್ಷ ಆಡಳಿತದಲ್ಲಿ ಇದ್ದರೂ ಸಹ ಕಾರ್ಯಕರ್ತ ಮೇಲಿನ ಇರುವ ಪ್ರಕರಣವನ್ನ ಹಿಂದೆಕ್ಕೆ ಪಡೆಯಲು ಪ್ರಯತ್ನಿಸಿಲ್ಲ ಎನ್ನುವುದು ಬಿಜೆಪಿ ಕಾರ್ಯಕರ್ತರ ಆರೋಪವಾಗಿದೆ.