ಸುದ್ದಿಬಿಂದು ಬ್ಯೂರೋ ವರದಿ
ಹೊನ್ನಾವರ : ಯಾರೇ ಒಳ್ಳೆ ಕೆಲಸ ಮಾಡಿದ್ದರು ಒಬ್ಬರನ್ನೊಬ್ಬರು ಹೊಗಳುವುದು ಸರ್ವೆ ಸಾಮಾನ್ಯ. ಆದರೆ ರಾಜಕೀಯದಲ್ಲಿ ಒಂದು ಪಕ್ಷದ ಸಚಿವ ಅಥವಾ ಶಾಸಕ ಎಷ್ಟೆ ಒಳ್ಳೆ ಕೆಲಸ ಮಾಡಿದ್ದರು.ವಿರೋಧ ಪಕ್ಷದವರು ಹೊಗಳೋದು ತುಂಬಾ ಅಪರೂಪ.ಆದರೆ ಕುಮಟಾ ಕ್ಷೇತ್ರದ ಬಿಜೆಪಿ ಶಾಸಕರಾಗಿರುವ ದಿನಕರ ಶೆಟ್ಟಿ ಅವರು ಸಚಿವರಾಗಿರುವ ಮಂಕಾಳ್ ವೈದ್ಯ ಅವರನ್ನ ಹೀರೋ ಎಂದು ಹೊಗಳುವ ಮೂಲಕ ರಾಜಕೀಯವಾಗಿ ಅಚ್ಚರಿ ಮೂಡಿಸಿದ್ದಾರೆ.
ಹೊನ್ನಾವರದ ಆದಿಚುಂಚನಗಿರಿ ಶಾಖಾ ಮಠದ ಉದ್ಘಾಟನಾ ಕಾರ್ಯಕ್ರಮದಲ್ಲಿ ಶಾಸಕ ದಿನಕರ ಶೆಟ್ಟಿ ಅವರು ಮಂಕಾಳ್ ವೈದ್ಯ ಅವರು ಮಠದ ಹಾಗೂ ಸಭಾಭವನ ನಿರ್ಮಾಣದಲ್ಲಿ ತುಂಬಾ ಶ್ರೀಗಳು ನೀಡಿದ ಜವಾಬ್ದಾರಿಯನ್ನ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ ಎಂದರು . ಶಾಸಕರು ಮಾತನಾಡಿದ ಹೆಚ್ಚಿನ ಸಮಯ ಸಚಿವರ ಬಗ್ಗೆ ಹೆಚ್ಚಿನ ಸಮಯ ಹಾಡಿ ಹೊಗಳಿದ್ದಾರೆ.ಮುಂದುವರೆದು ಮಾತ್ನಾಡಿ ಶಾಸಕರು ನಿಜವಾದ ಹೀರೋ ಅಂದರೆ ಮಂಕಾಳ್ ವೈದ್ಯ ಎಂದಿದ್ದಾರೆ.
ಶಾಸಕರ ಈ ಎಲ್ಲಾ ಮಾತುಗಳನ್ನ ಕೇಳಿದವರು ರಾಜಕೀಯವಾಗಿ ಸಾಕಷ್ಟು ಚರ್ಚೆಗಳ ಸಹ ಮಾಡುವಂತಾಗಿದೆ.ಈಗಾಗಲೇ ರಾಜ್ಯ ರಾಜಕಾರಣದಲ್ಲಿ ಡಿಸಿಎಂ ಡಿಕೆ ಶಿವಕುಮಾರ ಎಬ್ಬಿಸಿರುವ ಬಿರುಗಾಳಿ ಸಾಕಷ್ಟು ಚರ್ಚೆಗಳು ಉಂಟಾಗತ್ತಿದೆ. ಡಿಕೆ ಶಿವಕುಮಾರ ಮಾತುಗಳನ್ನ ಗಮಸಿದರೆ ಎಲ್ಲೋ ಒಂದು ಕಡೆ ಡಿಕೆ ಶಿವಕುಮಾರ ಎಂಡ್ ಟಿಂ ಬಿಜೆಪಿ ಜೊತೆ ಸೇರಿ ಸರಕಾರ ನಡೆಸಲು ತಯಾರಿ ನಡೆಸುತ್ತಿದ್ದೆಯಾ ಎನ್ನುವ ಚರ್ಚೆ ಸಹ ಜೋರಾಗಿದೆ. ಇಷ್ಟು ದಿನ ಸಚಿವರ ಬಗ್ಗೆ ಅಷ್ಟಾಗಿ ಹೊಗಳದ ಶಾಸಕ ದಿನಕರ ಶೆಟ್ಟಿ ಅವರು ಕಳೆದ ಕೆಲ ದಿನಗಳಿಂದ ಹೊಗಳೊದಕ್ಕೆ ಆರಂಭಿಸಿದ್ದಾರೆ..
ಹೀಗಾಗಿ ಮಂಕಾಳ್ ವೈದ್ಯ ಅವರು ಸಹ ಡಿಕೆ ಶಿವಕುಮಾರ ಅವರ ಶಿಷ್ಯರಾಗಿರೋ ಕಾರಣ.ಜೊತೆಗೆ ಡಿಕೆ ಶಿವಕುಮಾರ ಅವರು ಬಿಜೆಪಿ ಜೊತೆ ಕೈ ಜೊಡಿಸಲಿದ್ದಾರೆ. ಎನ್ನುವ ಚರ್ಚೆ ಇರುವುದರಿಂದಾಗಿ ಒಂದು ವೇಳೆ ಡಿಕೆ ಶಿವಕುಮಾರ ಟೀಂನಲ್ಲಿರುವ ಮಂಕಾಳು ವೈದ್ಯರು ಸಹ ಬಂದರೆ ರಾಜಕೀಯವಾಗಿ ಮುಂದೆ ತಮ್ಮಗೂ ಒಳ್ಳೆಯದಾಗಬೇಕು ಎನ್ನುವ ಕಾರಣಕ್ಕೆ ರಾಜಕೀಯ ಲೆಕ್ಕಾರವನ್ನ ಇಟ್ಟುಕೊಂಡು ಹೊಗಳಲಾರಂಭಿಸಿರಬಹುದಾ ಎನ್ನುವ ಚರ್ಚೆಗಳು ರಾಜಕೀಯವಾಗಿ ಚರ್ಚೆಗಳು ಜೋರಾಗಿದೆ.
ಇದನ್ನೂ ಓದಿ