ಸುದ್ದಿಬಿಂದು ಬ್ಯೂರೋ ವರದಿ
ಗೋಕರ್ಣ : ಪೊಲೀಸ್ ವ್ಯವಸ್ಥೆ ಬಗ್ಗೆ ಜನರಲ್ಲಿ ಉತ್ತಮ ಭಾವನೆ ಮೂಡಿಸಿ ಜನಸ್ನೇಹಿಯಾಗಿ ಕರ್ತವ್ಯ ನಿರ್ವಹಿಸಲು,ಪೊಲೀಸ್ ಇಲಾಖೆ ಪದೆ ಪದೆ ಎಚ್ಚರಿಕೆ ನೀಡತ್ತಾನೆ ಬರತ್ತಿದೆ. ಆದರೆ ಗೋಕರ್ಣ ಠಾಣೆಯ ಪಿಎಸ್ಐ ತಮ್ಮ ಇಲಾಖೆಯ ಹೆಡ್ ಕಾನ್ಸ್ಟೇಬಲ್ ಒಬ್ಬರಿಗೆ ಸಾರ್ವಜನಿಕವಾಗಿ ಕಪಾಳ ಮೋಕ್ಷ ಮಾಡಿ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ದಕ್ಷೀಣಕಾಶಿಯೆಂದೆ ಪ್ರಸಿದ್ದಿ ಪಡೆದರುವ ಶಿವನ ಕ್ಷೇತ್ರ ಗೋಕರ್ಣದಲ್ಲಿ ಭಕ್ತ ಸಾಗರ ಶಿವರಾತ್ರಿಯ ಭಕ್ತಿಯಲ್ಲಿ ತಲ್ಲೀನರಾಗಿರುವ ಸಂದರ್ಭದಲ್ಲಿ ಹಿಂದೂಗಳ ಅತ್ಯಂತ ಪವಿತ್ರ ಕ್ಷೇತ್ರ ಹಾಗೂ ಸಾಕ್ಷಾತ್ ಶಿವನ ಆತ್ಮಲಿಂಗವೇ ಇರುವ ಗೋಕರ್ಣ ಮಹಾಬಲೇಶ್ವರ ದೇವಾಲಯದ ಆವರಣದಲ್ಲಿ ಮಹಿಳಾ ಕಾನ್ಸ್ಟೇಬಲ್ವೊಬ್ಬರ ಕೋಪತಾಪಕ್ಕೆ ಗುರಿಯಾದ ಭಕ್ತರೊಬ್ಬರಿಗೆ ಗೋಕರ್ಣ ಠಾಣೆಯ ಪಿಎಸ್ಐ ಖಾದರ ಬಾಷಾ ಅವರು ದೇವಾಲಯದ ಆವರಣದಲ್ಲೇ ಕಪಾಳ ಮೋಕ್ಷ ಮಾಡಿದ್ದಾರೆ.
ಪಿಎಸ್ ಖಾದರ್ ಬಾಷ್ ಸಾಹೇಬ್ರು ಕಪಾಳ ಮೋಕ್ಷ ಮಾಡಿದ್ದು ಬೇರೆಯಾರಿಗೂ ಅಲ್ಲ. ತಮ್ಮ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರೋ ಭಟ್ಕಳ ನಗರ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಆಗಿರುವ ಹಾಗೂ ಹೊಸಕಟ್ಟಾ ನಿವಾಸಿಯಾಗಿರುವ ಜೈರಾಮ್ ಹೊಸ್ಕಟ್ಟಾ ಎಂಬುವವರ ಮೇಲೆ. ಇವರು ತನ್ನ ಕುಟುಂಬದ ಸಹಿತ ಮಹಾಬಲೇಶ್ವರನ ದರ್ಶನಕ್ಕೆ ಬಂದಿದ್ದರು. ಆದರೆ ಇವರು ಎಲ್ಲಿಯೂ ತಾನು ಪೊಲೀಸ್ ಕಾನ್ಸ್ಟೇನಲ್ ಅಂತಾ ಹೇಳಿಕೊಳ್ಳದೆ ಸಾಮಾನ್ಯರಂತೆ ಬೆಳಿಗ್ಗೆ ಆರು ಗಂಟೆಯಿಂದ ಸರತಿ ಸಾಲಿನಲ್ಲಿ ನಿಂತು ದರ್ಶನಕ್ಕಾಗಿ ಕಾಯ್ಯುತ್ತಿದ್ದರು.ಈ ಮಧ್ಯೆ ಸಾಲಿನಲ್ಲಿದ್ದ ಜನ ನಿಧಾನವಾಗಿ ಮುಂದಕ್ಕೆ ಹೋಗುತ್ತಿದ್ದ, ಅಲ್ಲೆ ಕರ್ತವ್ಯದಲ್ಲಿದ್ದ ಮಹಿಳಾ ಕಾನ್ಸ್ಟೇಬಲ್ಗೆ ತ್ವರಿತವಾಗಿ ಜನರನ್ನು ಮುಂದೆ ಬಿಡುವಂತೆ ಹೇಳಿದ್ದಾರೆನ್ನಲಾಗಿದೆ.ಇಷ್ಟಕ್ಕೆ ಕೋಪಗೊಂಡ ಮಹಿಳಾ ಸಿಬ್ಬಂದಿ ಅವರೊಂದಿಗೆ ಮಾತಿಗೆ ಇಳಿದಿದ್ದು,ಈ ವೇಳೆ ಇಬ್ಬರ ನಡುವೆ ಮಾತಿಗೆ ಮಾತು ನಡೆದಿದೆ.
ಇನ್ನೂ ಗಲಾಟೆ ಆಗತ್ತಿದೆ ಎಂದು ಮಹಿಳಾ ಸಿಬ್ಬಂದಿ ಪಿಎಸ್ಐ ಖಾದರ್ ಬಾಷ್ ಅವರಿಗೆ ದೂರವಾಣಿ ಮೂಲಕ ತಿಳಿಸಿದ್ದಾರೆನ್ನಲಾಗಿದೆ. ತಕ್ಷಣ ಖದರ್ನಲ್ಲೆ ಬಂದ ಖಾದರ್ ಬಾಷ್ ಅವರು ನಡೆದ ಘಟನೆ ಬಗ್ಗೆ ಸರಿಯಾದ ಮಾಹಿತಿಯನ್ನ ಕೂಡ ಪಡೆಯದೆ ತನ್ನದೇ ಇಲಾಖೆಯ ಹೆಡ್ ಕಾನ್ಸ್ಟೇಬಲ್ ಜೈರಾಮ್ ಹೊಸ್ಕಟ್ಟಾ ಅವರಿಗೆ ಸಾರ್ವಜನಿಕರ ಎದುರೆ ಅವಾಚ್ಯ ಪದ ಬಳಕೆ ಮಾಡಿ ಕಪಾಳ ಮೋಕ್ಷ ಮಾಡಿದ್ದಾರೆನ್ನಲಾಗಿದೆ.
ಅಷ್ಟೇ ಅಲ್ಲದೆ ದರ್ಶನಕ್ಕಾಗಿ ಸರತಿ ಸಾಲಿನಲ್ಲಿ ಕುಟುಂಬ ಸಮೇತರಾಗಿ ನಿಂತಿದ್ದ ಜೈರಾಮ್ ಹೊಸ್ಕಟ್ಟಾ ಅವರಿಗೆ ಅವಾಚ್ಯ ಪದ ಬಳಕೆ ಮಾಡಿ ಅವರ ಸಾರ್ವಜನಿಕರ ಎದುರಲ್ಲೆ ಓರ್ವ ಹೆಡ್ ಕಾನ್ಸ್ಟೇಬಲ್ ಅವರನ್ನು ಕ್ಯೂ ನಿಂದಲೇ ಎಳೆದು ಹೊರಗೆ ಹಾಕಿದ್ದಾರೆ. ತಾನು ಸ್ಥಳೀಯ ಭಾಷೆಯಲ್ಲಿ ಮಾತನಾಡಿದ್ದೇನೆ ಹೊರತು ಏಕವಚನದಲ್ಲಿ ಮಾತನಾಡಿಲ್ಲ ಎಂದು ಹೆಡ್ ಕಾನ್ಸ್ಟೇಬಲ್ ಪಿಎಸ್ಐ ಅವರ ಎದರು ಎಷ್ಟೇ ಕೇಳಿಕೊಂಡು ಅವರು ಅದನ್ನ ಕೇಳೋ ಪರಿಸ್ಥಿತಿಯಲ್ಲಿ ಇರಲ್ಲಿವಂತೆ. ಗೋಕರ್ಣ ಪಿಎಸ್ಐ ಅವರು ಸಾರ್ವಜನಿಕವಾಗಿ ತಮ್ಮ ಇಲಾಖೆಯ ಹೆಡ್ ಕಾನ್ಸ್ಟೇಬಲ್ಗೆ ಕಪಾಳ ಮೋಕ್ಷ ಮಾಡಿರುವ ವಿಚಾರ ಇದೀಗ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಯಾಗತ್ತಿದ್ದು, ಹಿರಿಯ ಅಧಿಕಾರಿಗಳು ಈ ಬಗ್ಗೆ ಕ್ರಮ ಜರುಗಿಸಬೇಕು ಎನ್ನುವ ಮಾತು ಜೋರಾಗಿ ಕೇಳಿ ಬರತ್ತಿದೆ.
ಶಾಂತಿ ಸುವ್ಯವಸ್ಥೆಯನ್ನ ಕಾಪಾಡಬೇಕಾದ ಪೊಲೀಸ್ ಇಲಾಖೆಯ ಅಧಿಕಾರಿಗಳು ಘಟನೆ ಬಗ್ಗೆ ಸರಿಯಾಗಿ ಅರಿತುಕೊಳ್ಳದೆ ಈ ರೀತಿ ತಮ್ಮ ಇಲಾಖೆಯ ಸಿಬ್ಬಂಧಿಗಳ ಮೇಲೆ ಸಾರ್ವಜನಿಕವಾಗಿ ಕಪಾಳ ಮೋಕ್ಷ ಮಾಡಿ ಅವಮಾನ ಮಾಡಿದ್ರೆ ಜನಸಾಮಾನ್ಯರ ಕತೆ ಏನಾಗಬೇಡ ಹೇಳಿ. ಇನ್ನಾದರು ಹಿರಿಯ ಅಧಿಕಾರಿಗಳು ಹಾಗೂ ಸರಕಾರ ಇಂತಹ ಅಧಿಕಾರಿಗಳ ನಡೆಗೆ ಬ್ರೇಕ್ ಹಾಕತ್ತಾ ಎನ್ನುವುದನ್ನ ಕಾದು ನೋಡಬೇಕಿದೆ..
ಇದನ್ನೂ ಓದಿ