ಸುದ್ದಿಬಿಂದು ಬ್ಯೂರೋ ವರದಿ
ಯಲ್ಲಾಪುರ : ತಾಲೂಕಿನಲ್ಲಿ ಕಾಂಗ್ರೆಸ್ ಪಕ್ಷವು ದಿನದಿಂದ ದಿನಕ್ಕೆ ತನ್ನ ಶಕ್ತಿಯನ್ನು ಹೆಚ್ಚಿಸಿಕೊಳ್ಳುತ್ತಿದೆ ಸಂಘಟನೆಯಲ್ಲಿ ಒಂದು ಕೈ ಮುಂದಿರುವ ಕಾಂಗ್ರೆಸ್ ಪಕ್ಷವು ಕೆ.ಪಿ.ಸಿ.ಸಿ ಸದಸ್ಯರಾದ ವಿವೇಕ್ ಹೆಬ್ಬಾರ್ ಅವರ ನೇತೃತ್ವದಲ್ಲಿ ಘಟಕ ಮಟ್ಟದಲ್ಲಿ ಬೂತ್ ಹಾಗೂ ಘಟಕ ಸಮಿತಿಯ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು ಮಾಡುವ ಮೂಲಕ ಹೊಸ ಕಲ್ಪನೆಯ ರಾಜಕೀಯದ ಚಿಂತನೆಗೆ ನಾಂದಿ ಹಾಡಿದ್ದಾರೆ.
ತಾಲೂಕಿನ ಮಾವಿನಮನೆ ಶ್ರೀರಾಮಲಿಂಗೇಶ್ವರ ಸಭಾಂಗಣದಲ್ಲಿ ಆಯೋಜಿಸಿದ್ದ ವಜ್ರಳ್ಳಿ ಹಾಗೂ ಮಾವಿನಮನೆ ಘಟಕ ಸಮಿತಿಯ ಪದಾಧಿಕಾರಿಗಳು ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಪದಾಧಿಕಾರಿಗಳು ಪಕ್ಷದ ಧ್ವಜವನ್ನು ನೀಡಿ ಸಂಘಟನೆಯ ಜವಾಬ್ದಾರಿಯನ್ನು ನೀಡಿ ಮಾತನಾಡಿದ ಅವರು ಸಾಮಾಜಿಕ ನ್ಯಾಯ ಅಡಿಯಲ್ಲಿ ಕಾಂಗ್ರೆಸ್ ಪಕ್ಷವು ಕಾರ್ಯನಿರ್ವಹಿಸುತ್ತಿದೆ ಎಲ್ಲಾ ಸಮುದಾಯದವರನ್ನು ಒಳಗೊಂಡಿರುವ ಹಾಗೂ ಮಹಿಳೆಯರಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ಘಟಕ ಸಮಿತಿಯಲ್ಲಿ ನೀಡಲಾಗಿದೆ.
ರಾಜ್ಯ ಸರಕಾರದ ಪಂಚ ಗ್ಯಾರಂಟಿ ಯೋಜನೆಯಿಂದ ನಾಡಿನ ಜನಸಾಮಾನ್ಯರ ಬದುಕಿನಲ್ಲಿ ಹೊಸ ಚೈತನ್ಯ ಮೂಡಿದೆ ನಮ್ಮ ಸರಕಾರದ ಯೋಜನೆಗಳನ್ನು ಕಾರ್ಯಕರ್ತರು ಮನೆ ಮನೆಗಳಿಗೆ ತಲುಪಿಸಬೇಕು ಎಂದರು.
ಅಧ್ಯಕ್ಷತೆಯ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಎನ್.ಕೆ.ಭಟ್ ಅವರು ನಮ್ಮ ಪಕ್ಷದ ಕಾರ್ಯಕರ್ತರು ಸರಕಾರದ ಯೋಜನೆಗಳನ್ನು ಮತದಾರಿಗೆ ತಲುಪಿಸಿ ಅವರ ಮನಸ್ಸು ಪರಿವರ್ತನೆ ಮಾಡುವ ಕಾರ್ಯ ಮಾಡಬೇಕು ಸುಳ್ಳಿನ ಕಾರ್ಖಾನೆಯನ್ನು ಹೊಂದಿರುವ ಬಿಜೆಪಿ ಅವರ ನಿಜ ಬಣ್ಣ ಮತದಾರರ ಮುಂದೆ ತೇರೆದಿಡಬೇಕು.ಬೇರು ಮಟ್ಟದಲ್ಲಿ ಪಕ್ಷಕ್ಕೆ ಬಲ ತುಂಬುವಲ್ಲಿ ಕೆಪಿಸಿಸಿ ಸದಸ್ಯ ಯುವ ನಾಯಕ ವಿವೇಕ್ ಹೆಬ್ಬಾರ್ ದಿಟ್ಟ ಹೆಜ್ಜೆ ಪಕ್ಷಕ್ಕೆ ಮತ್ತಷ್ಟು ಗಟ್ಟಿತನ ತರುವಲ್ಲಿ ಸಹಕಾರಿಯಾಗಿದೆ ಎಂದರು.
ಮಾವಿನಮನೆ ಗ್ರಾಮ ಪಂಚಾಯತ ಅಧ್ಯಕ್ಷರಾದ ಸುಬಣ್ಣ ಕುಂಟೆಗಾಳಿ ಅವರ ಪ್ರಸ್ತಾಪಿಸಿ ಮಾತುಗಳನಾಡಿದರು. ಮಹಾಬಲೇಶ್ವರ ಭಟ್ ಅವರು ಸ್ವಾಗತಿಸಿದರು ಹಾಗೂ ಪಿ.ಎಲ್.ಡಿ.ಬ್ಯಾಂಕ್ ನಿರ್ದೇಶಕರಾದ ಸದಾನಂದ ಭಟ್ ಅವರು ವಂದನಾರ್ಪಣೆಯನ್ನು ಮಾಡಿದರು.
ಈ ಸಂದರ್ಭದಲ್ಲಿ ಮಾವಿನಮನೆ ಘಟಕಾಧ್ಯಕ್ಷರಾದ ಮಹಾಬಲೇಶ್ವರ ಭಟ್ ಹಲಗುಮನೆ, ವಜ್ರಳ್ಳಿ ಘಟಕಾಧ್ಯಕ್ಷರಾದ ಮಹೇಶ್ ಗಾಂವ್ಕರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿ.ಎಸ್.ಭಟ್, ಡಾ.ರವಿ ಭಟ್ ಬರಗದ್ದೆ, ಗ್ರಾಮ ಪಂಚಾಯತ ಅಧ್ಯಕ್ಷರಾದ ಸುಬ್ಬಣ್ಣ ಕುಂಟೆಗಾಳಿ, ಭಗೀರಥ ನಾಯ್ಕ, ಗ್ಯಾರಂಟಿ ಯೋಜನೆ ಸಮಿತಿಯ ತಾಲೂಕಾಧ್ಯಕ್ಷರಾದ ಉಲ್ಲಾಸ್ ಶಾನಭಾಗ,ಪ್ರಮುಖರಾದ ಪ್ರೇಮಾನಂದ ನಾಯ್ಕ, ಜಿಲ್ಲಾ ಸೇವಾದಳ ಸಮಿತಿಯ ಅಧ್ಯಕ್ಷರಾದ ಪ್ರಶಾಂತ ಸಭಾಹಿತ್, ಬ್ಲಾಕ ಕಾರ್ಯದರ್ಶಿ ಆರ್.ವಿ.ಹೆಗಡೆ, ಅನಿಲ ಮರಾಠಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಪೂಜಾ ನೆತ್ರೇಕರ್, ಮುಷರತ್ ಖಾನ್, ಯುವ ಕಾಂಗ್ರೆಸ್ ಅಧ್ಯಕ್ಷರಾದ ಗಣೇಶ ಹೆಗಡೆ, ಹಿರಿಯರಾದ ಟಿ.ಸಿ.ಗಾಂವ್ಕರ್, ಸುಬ್ಬಯ್ಯ ಧೋಗಳೆ ಸೇರಿದಂತೆ ಗ್ರಾಮ ಪಂಚಾಯತ ಸದಸ್ಯರು, ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.
ಇದನ್ನೂ ಓದಿ