ಸುದ್ದಿಬಿಂದು ಬ್ಯೂರೋ ವರದಿ
ಸಿದ್ದಾಪುರ : ಫಾಲ್ಸ್ನಲ್ಲಿ ಈಜಲು ಹೋಗಿದ್ದ ಇಬ್ಬರೂ ಯುವಕರು ನೀರು ಪಾಲಾಗಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ನಿಲ್ಕುಂದದ ವಾಟೇ ಹೊಳೆ ಫಾಲ್ಸ್ ನಲ್ಲಿ ಇಂದು ನಡೆದಿದ್ದು, ನಾಪತ್ತೆಯಾದ ಇಬ್ಬರೂ ಯುವರ ಶವ ಪತ್ತೆಯಾಗಿದೆ.
ಶಿರಸಿ ತಾಲೂಕಿನ ಅಕ್ಷಯ್ ಪರಮೇಶ್ವರ ಭಟ್(22) ಹಾಗೂ ಮರಾಠಿಕೊಪ್ಪದ ಜೋಡಕಟ್ಟೆ ನಿವಾಸಿಯಾಗಿದ್ದ ಸುಹಾಸ ಶೆಟ್ಟಿ (22) ಮೃತಪಟ್ಟ ದುರ್ಧೈವಿಗಳಾಗಿದ್ದಾರೆ.
ಆರು ಜನ ಸ್ನೇಹಿತರು ಸೇರಿ ಫಾಲ್ಸ್ ನೋಡಲು ಹೋಗಿದ್ದರು, ಈ ವೇಳೆ ಫಾಲ್ಸ್ನಲ್ಲಿ ಈಜಲು ಹೋದಾಗ ಘಟನೆ ಅಕ್ಷಯ ಭಟ್ ಹಾಗೂ ಸುಹಾಸ ಶೆಟ್ಟಿ ನೀರುಪಾಲಾಗಿದ್ದರು.
ಸ್ಥಳಕ್ಕೆ ಡಿ.ಎಸ್.ಪಿ. ಕೆ.ಎಲ್ . ಗಣೇಶ, ಸಿದ್ದಾಪುರ ಇನಸ್ಪೇಕ್ಟರ್ ಜೆ.ಬಿ. ಸೀತಾರಾಮ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮುಳುಗುತಜ್ಞರು, ಮಾರಿಕಾಂಬಾ ಲೈಫ್ ಗಾರ್ಡ ಗೋಪಾಲ ಗೌಡ ತಂಡ ಸಹ ಕಾರ್ಯಚರಣೆ ನಡೆಸಿದ್ದು ಇದೀಗ ಇಬ್ಬರೂ ಯುವರು ಶವವಾಗಿ ಪತ್ತೆಯಾಗಿದ್ದಾರೆ.
ಇದನ್ನೂ ಓದಿ