ಸುದ್ದಿಬಿಂದು ಬ್ಯೂರೋ ವರದಿ
ಸಿದ್ದಾಪುರ : ಫಾಲ್ಸ್ನಲ್ಲಿ ಈಜಲು ಹೋಗಿದ್ದ ಇಬ್ಬರೂ ಯುವಕರು ನೀರು ಪಾಲಾಗಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ನಿಲ್ಕುಂದದ ವಾಟೇ ಹೊಳೆ ಫಾಲ್ಸ್ ನಲ್ಲಿ ನಡೆದಿದೆ.
ಆರು ಜನ ಸ್ನೇಹಿತರು ಸೇರಿ ಫಾಲ್ಸ್ ನೋಡಲು ಹೋಗಿದ್ದರು ಎನ್ನಲಾಗಿದ್ದು, ಈ ವೇಳೆ ಫಾಲ್ಸ್ನಲ್ಲಿ ಈಜಲು ಹೋದಾಗ ಘಟನೆ ನಡೆದಿದೆ. ಅಕ್ಷಯ ಭಟ್ ಹಾಗೂ ಸುಹಾಸ ಶೆಟ್ಟಿ ನೀರುಪಾಲಾಗಿರುವ ಯುವಕರು ಎಂದು ಗೊತ್ತಾಗಿದೆ..
ಸ್ಥಳಕ್ಕೆ ಡಿ.ಎಸ್.ಪಿ. ಕೆ.ಎಲ್ . ಗಣೇಶ, ಸಿದ್ದಾಪುರ ಇನಸ್ಪೇಕ್ಟರ್ ಜೆ.ಬಿ. ಸೀತಾರಾಮ ದೌಡಾಯಿಸಿದ್ದು, ಮುಳುಗುತಜ್ಞರು, ಮಾರಿಕಾಂಬಾ ಲೈಫ್ ಗಾರ್ಡ ಗೋಪಾಲ ಗೌಡ ತಂಡ ಸಹ ಕಾರ್ಯಚರಣೆ ನಡೆಸುತ್ತಿದ್ದೆ.
ಇದನ್ನೂ ಓದಿ