ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ: ಗಾಂಜಾ ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ನಗರದ ಧೋಬಿಘಾಟ್ ರಸ್ತೆಯ ಸ್ಮಶಾನದ ಬಳಿ ದಾಳಿ ನಡೆಸಿದ ಪೊಲೀಸರು ಆರೋಪಿ ಸಹಿತ ಗಾಂಜಾವನ್ನು ವಶಕ್ಕೆ ಪಡೆದುಕೊಂಡ ಘಟನೆ ನಡೆದಿದೆ.
ನಗರದ ಕೋಡಿಭಾಗದ ಪಂಚರಾಷಿವಾಡ ನಿವಾಸಿ ಆಟೋ ಚಾಲಕ ನಾಗರಾಜ ಸಿರ್ಸಿಕರ್(34) ಬಂಧಿತ ಆರೋಪಿತನಾಗಿದ್ದಾನೆ.
ಗಾಂಜಾ ಮಾರಾಟದ ಖಚಿತ ಮಾಹಿತಿ ಆಧರಿಸಿ ನಗರ ಠಾಣೆಯ ಪಿಎಸ್ಐ ರವೀಂದ್ರ ಬಿರಾದರ್, ಸಿಬ್ಬಂದಿ ಮತ್ತು ನಿಯೋಜಿತ ಅಧಿಕಾರಿಯೊಂದಿಗೆ ಸ್ಥಳಕ್ಕೆ ತೆರಳಿ ದಾಳಿ ನಡೆಸಿದ್ದರು. ಈ ವೇಳೆ ಆರೋಪಿತನ ಬಳಿ ಸುಮಾರು 20,000 ಮೌಲ್ಯದ 976 ಗ್ರಾಂ ಗಾಂಜಾ ಹಾಗೂ 22 ಸಣ್ಣ ಪ್ಲ್ಯಾಸ್ಟಿಕ್ ಕವರ್ಗಳು ಮತ್ತು ಆಟೋರಿಕ್ಷಾ ಸೇರಿ ಸುಮಾರು 2,20,000 ಮೌಲ್ಯದ ಸ್ವತ್ತುಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಸಂಬಂಧ ಕಾರವಾರ ಶಹರ ಠಾಣೆಯಲ್ಲಿ ಎನ್ಡಿಪಿಎಸ್ ಆ್ಯಕ್ಟ್ 1985ರನ್ವಯ ಸೆಕ್ಷನ್ ,8(ಸಿ), 20(ಬಿ), ಮತ್ತು ii(ಎ) ಅಡಿಯಲ್ಲಿ ಪೊಲೀಸ್ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ಮುಂದುವರೆದಿದೆ.
ಈ ಕಾರ್ಯಾಚರಣೆಯು ಎಸ್ಪಿ ಎಂ.ನಾರಾಯಣ್, ಎಎಸ್ಪಿ ಜಗದೀಶ್ ಎಂ, ಮತ್ತು ಡಿವೈಎಸ್ಪಿ ಎಸ್.ವಿ.ಗಿರೀಶ್ ಇವರ ಮಾರ್ಗದರ್ಶನದಲ್ಲಿ ನಡೆಯಿತು. ಪಿಎಸ್ಐ ರವೀಂದ್ರ ಬಿರಾದರ್ ಮತ್ತು ಪಿಎಸ್ಐ ಕುಮಾರ್ ಕಾಂಬ್ಳೆ ಅವರ ನೇತೃತ್ವದ ತಂಡದಲ್ಲಿ ಸೂರಜ್ ಕೊಠಾರಕರ್, ಮುತ್ತು ಮಸಾಬ್ ಪತ್ತೆಖಾನ, ಸುರೇಶ್ ಮರಾಠ್, ಚಂದನ್ ಆರ್. ರಾಜೇಶ್ ನಾಯಕ್, ಗೌತಮ್ ರೊಡ್ಡಣ್ಣವರ್, ಗಿರಿಶಯ್ಯ, ದೇವೇಂದ್ರಪ್ಪ ಮತ್ತು ಇತರ ಸಿಬ್ಬಂದಿ ಸದಸ್ಯರು ಪ್ರಮುಖ ಪಾತ್ರ ವಹಿಸಿದ್ದರು.
ಈ ಯಶಸ್ವಿ ಕಾರ್ಯಾಚರಣೆ ಮತ್ತು ಪ್ರಕರಣ ಪತ್ತೆಹಚ್ಚಿದ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕರು ಶ್ಲಾಘಿಸಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ