ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ : ಜಾನಪದ ಕೊಗಿಲೆ,ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಸುಕ್ರಿ ಗೌಡ ರವರ ಆರೋಗ್ಯದಲ್ಲಿ ಏರುಪೇರಾದ ಹಿನ್ನಲೆಯಲ್ಲಿ ಶಾಸಕ ಸತೀಶ ಸೈಲ್ ಅವರು ಸುಕ್ರಿ ಗೌಡ ಅವರನ್ನ ಮಣಿಪಾಲ ಆಸ್ಪತ್ರೆಗೆ ದಾಖಲಿಸಲು ಸಹಕರಿಸಿದ್ದು, ಚಿಕಿತ್ಸೆ ಪಡೆದ ಬಳಿಕ ಆರೋಗ್ಯದಲ್ಲಿ ಚೇತರಿಸಿಕೊಂಡ ಸುಕ್ರಿ ಗೌಡ ಅವರು ಮನೆಗೆ ವಾಪಸ್ ಆಗಿದ್ದಾರೆ.
ಸುಕ್ರಿ ಗೌಡ ಅವರ ಆರೋಗ್ಯದಲ್ಲಿ ಕಳೆದ ಕೆಲ ದಿನಗಳಿಂದ ಏರುಪೇರು ಉಂಟಾಗುತ್ತಿತ್ತು.ಈ ಬಗ್ಗೆ ಸುದ್ದಿ ತಿಳಿದ ಶಾಸಕ ಸತೀಶ್ ಸೈಲ್ ಅವರು ತಕ್ಷಣ ಮಣಿಪಾಲ ಆಸ್ಪತ್ರೆಯ ವೈದ್ಯರ ಜೊತೆ ದೂರವಾಣಿ ಮೂಲಕ ಮಾತಮಾಡಿದ್ದರು. ಬಳಿಕ ವೈದ್ಯರ ಸಲಹೆಯಂತೆ ಸುಕ್ರಿ ಗೌಡ ಅವರನ್ನ ಶಾಸಕ ಸತೀಶ ಸೈಲ್ ಮಣಿಪಾಲ ಆಸ್ಪತ್ರೆಗೆ ಕಳುಹಿಸಿ ಚಿಕಿತ್ಸೆ ಕೊಡಿಸಿದ್ದಾರೆ. ವೈದ್ಯರೊಂದಿದೆ ನಿರಂತರವಾಗಿ ಸಂಪರ್ಕದಲ್ಲಿ ಇದ್ದ ಶಾಸಕರು ಅಗತ್ಯ ಇರುವ ಎಲ್ಲಾ ಚಿಕಿತ್ಸೆಯನ್ನ ನೀಡುವಂತೆ ವೈದ್ಯರಿಗೆ ತಿಳಿಸಿದ್ದು ಅದರಂತೆ ವೈದ್ಯರು ಸುಕ್ರಿ ಗೌಡ ಅವರಿಗೆ ಚಿಕಿತ್ಸೆ ನೀಡಿ ಗುಣಮುಖರನ್ನಾಗಿ ಮಾಡಿ ಕಳುಹಿಸಿದ್ದಾರೆ.
ಪದ್ಮಶ್ರೀ ಪುರಸ್ಕೃತರಾಗಿರುವ ಸುಕ್ರಜ್ಜಿ ಅವರು ಸದಾ ಕಾಲ ಆರೋಗ್ಯವಾಗಿ ಇರಬೇಕು..ಅವರ ಜಾನಪದ ಹಾಡುಗಳ ಮೂಲಕ ಪದ್ಮಶ್ರಿ ಲಭಿಸಿದ್ದು, ನಮ್ಮೇಲ್ಲರ ಹೆಮ್ಮೆಯಾಗಿದೆ. ಅಂತಹ ಹಿರಿಯ ಜೀವದ ಬಗ್ಗೆ ಕಾಳಜಿ ವಹಿಸಬೇಕಿದೆ. ಹಾಲಕ್ಕಿ ಸಮಾಜದಲ್ಲಿ ಬೆಳೆದು ಬಂದ ಸುಕ್ರಜ್ಜಿ ನಮ್ಮೇಲ್ಲರ ದೊಡ್ಡ ಆಸ್ತಿ, ಅವರು ಸದಾ ಆರೋಗ್ಯವಂತರಾಗಿರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಕಾರವಾರ-ಅಂಕೋಲಾ ಕ್ಷೇತ್ರದ ಶಾಸಕ ಸತೀಶ ಸೈಲ್ ಹೇಳಿದ್ದಾರೆ.
ಇದನ್ನೂ ಓದಿ