ಸುದ್ದಿಬಿಂದು ಬ್ಯೂರೋ ವರದಿ (Suddibindu digital news)
ಹಾವೇರಿ :(Haveri) ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಮೃತದೇಹವನ್ನ ಅಂಬ್ಯುಲೆನ್ಸ್ನಲ್ಲಿ ಊರಿಗೆ ತರುತ್ತಿದ್ದ ವೇಳೆ ಪತ್ನಿ ಗೋಳಾಡುತ್ತಿದ್ದಾಗ ಮೃತ ವ್ಯಕ್ತಿಗೆ ಮರುಜೀವ ಬಂದಿರುವ ಘಟನೆ ಹಾವೇರಿ ಜಿಲ್ಲೆಯ ಬಂಕಾಪುರದಲ್ಲಿ ನಡೆದಿದೆ.
ಆಂಬ್ಯುಲೆನ್ಸ್ನಲ್ಲಿ ಮೃತದೇಹದ ಪಕ್ಕದಲ್ಲಿ ಕೂತಿದ್ದ ಪತ್ನಿ “ಡಾಬಾ ಬಂದಿದೆಯಾ, ನೋಡು, ಊಟ ಮಾಡ್ತಿದಿಯಾ?” ಎಂದು ಅಳುತ್ತಿರುತ್ತಿದ್ದಳು. ಅದೇ ವೇಳೆ, ಮೃತ ಪತಿ ಉಸಿರಾಡುತ್ತಿರುವುದನ್ನ ಗಮನಿಸಿದ್ದಾಳೆ.ಆಗ ಮೃತ ದೇಹವನ್ನ ವಾಪಸ್ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ವೇಳೆ ತಪಾಸಣೆ ನಡೆಸಿ ವೈದ್ಯರು ಆತ ಜೀವಂತವಾಗಿರುವುದನ್ನ ಖಚಿತಪಡಿಸಿದ್ದಾರೆ.
45 ವರ್ಷದ ಬಿಷ್ಣಪ್ಪ ಅಶೋಕ ಗುಡಿಮನಿ ಅಲಿಯಾಸ್ ಮಾಸ್ತಪ ಎಂಬಾತನೆ ಬದುಕಿ ಬಂದ ವ್ಯಕ್ತಿಯಾಗಿದ್ದಾನೆ. ಬಿಷ್ಣಪ್ಪ ಬಂಕಾಪುರದ ಮಂಜುನಾಥ ನಗರ ನಿವಾಸಿ. ಅವರು ಮೂರು-ನಾಲ್ಕು ದಿನಗಳಿಂದ ಅನಾರೋಗ್ಯದಿಂದಾಗಿ ಧಾರವಾಡದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅಲ್ಲಿನ ವೈದ್ಯರು, ಉಸಿರಾಟ ಇಲ್ಲದೆ ಹೋದ ಕಾರಣ, ಅವರನ್ನು ಮೃತರೆಂದು ಘೋಷಿಸಿದರು. ಹೀಗಾಗಿ, ಅವರ ಮೃತದೇಹವನ್ನು ಬಂಕಾಪುರಕ್ಕೆ ಕರೆತರಲಾಗಿತ್ತು.
ಬಂಕಾಪುರ ಹತ್ತಿರ ಬಂದಾಗ, ಪತ್ನಿ “ಡಾಬಾ ಬಂದಿದೆಯಾ, ನೋಡು, ಊಟ ಮಾಡ್ತಿದಿಯಾ?” ಎಂದು ಅಳುತ್ತಿದ್ದ ವೇಳೆ, ಅತ ಉಸಿರಾಡುತ್ತಿರುವುದು ಗಮನಕ್ಕೆ ಬಂತು. ತಕ್ಷಣವೇ ಪತ್ನಿ ಹಾಗೂ ಕುಟುಂಬದವರು ಬಿಷ್ಣಪ್ಪನನ್ನು ಶಿಗ್ಗಾಂವಿ ಆಸ್ಪತ್ರೆಗೆ ಕರೆದೊಯ್ದರು. ವೈದ್ಯರು ಪರೀಕ್ಷಿಸಿದಾಗ, ಅವರು ಜೀವಂತನಾಗಿದ್ದಾರೆ ಎಂದು ದೃಢಪಡಿಸಿದರು. ಪ್ರಾಥಮಿಕ ಚಿಕಿತ್ಸೆ ನೀಡಿದ ನಂತರ, ಅದೇ ಆಂಬ್ಯುಲೆನ್ಸ್ನಲ್ಲಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಯಿತು.
ಸದ್ಯ ಕಿಮ್ಸ್ ತುರ್ತು ಚಿಕಿತ್ಸಾ ಘಟಕದಲ್ಲಿ ದಾಖಲಿಸಲಾಗಿದೆ. ಈ ನಡುವೆ, ಆತ ಮೃತಪಟ್ಟೊರುವ ಸುದ್ದಿ ಬಂದ ಹಿನ್ನೆಲೆಯಲ್ಲಿ ಕುಟುಂಬದವರು ಅಂತಿಮ ಸಂಸ್ಕಾರಕ್ಕೆ ಸಿದ್ಧತೆ ಮಾಡಿಕೊಂಡಿದ್ದರು. ಸ್ನೇಹಿತರು ನಗರದಲ್ಲಿ ಶೋಕದ ಬ್ಯಾನರ್ಗಳನ್ನು ಹಾಕಿದ್ದರು. ಅಲ್ಲದೆ, ಈ ಸುದ್ದಿ ವಾಟ್ಸಾಪ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹರಡಿತ್ತು. ಆದರೆ, ಈಗ ಬಂಕಾಪುರದಲ್ಲಿ ಹಾಕಿದ್ದ ಶೋಕ ಬ್ಯಾನರ್ಗಳನ್ನು ತೆಗೆದುಹಾಕಲಾಗಿದೆ. ಬಿಷ್ಣಪ್ಪ ಅವರು ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದನ್ನೂ ಓದಿ
- “ರೈತರನ್ನು ಮದುವೆಯಾಗುವ ಮಹಿಳೆಯರಿಗೆ ಪ್ರೋತ್ಸಾಹ ಧನ ನೀಡುವಂತೆ ಸಿಎಂಗೆ ಪತ್ರ ಬರೆದ ಶಾಸಕ
- Bjp/ಬಿಜೆಪಿ ಉತ್ತರಕನ್ನಡ ಜಿಲ್ಲಾ ರೈತಮೋರ್ಚಾ ಅಧ್ಯಕ್ಷರಾಗಿ ಅನಂತಮೂರ್ತಿ ಹೆಗಡೆ ನೇಮಕ
- Accident News/ಭೀಕರ ರಸ್ತೆ ಅಪಘಾತ, ಸ್ಥಳದಲ್ಲೆ ಓರ್ವ ಸಾವು
- Bhatkal Crime News/ ಭಟ್ಕಳದಲ್ಲಿ ಕಾಡುಪ್ರಾಣಿ ಹತ್ಯೆ ಶಂಕೆ: 21 ಕೆಜಿ ಮಾಂಸ, ಜಿಂಕೆ ಕೊಬ್ಬು, ಎರಡು ಏರ್ಗನ್ ವಶಕ್ಕೆ




