ಸುದ್ದಿಬಿಂದು ಬ್ಯೂರೋ ವರದಿ(suddibindu digital news)
ಹುಬ್ಬಳ್ಳಿ :ಯಾವುದೇ ದಾಖಲೆಗಳು ಇಲ್ಲದೆ ತಂದು ಪೊಲೀಸರಿಗೆ ಸಿಕ್ಕಿಬಿದ್ದ ಒಂದು ಕೋಟಿ ಸಮೀಪದ ಹಣ ಯಾರಿಗೆ ಸೇರಿದ್ದು, ಎನ್ನುವ ಬಗ್ಗೆ ತನಿಖೆ ನಡೆಸಿದ ಪೊಲೀಸರಿಗೆ ಆ ಹಣ ಯಾರಿಗೆ ಸೇರಿದ್ದು, ಎನ್ನುವ ಬಗ್ಗೆ ಪಕ್ಕಾ ಮಾಹಿತಿ ಸಿಕ್ಕಿದೆ..
ದಾಖಲೆ ಇಲ್ಲದ ಹಣ ಇರುವ ಬಗ್ಗೆ ಖಚಿತ ಮಾಹಿತಿ ಸಿಕ್ಕ ಹಿನ್ನಲೆಯಲ್ಲಿ ಪೊಲೀಸರು ತನಿಖೆ ನಡೆದಿದ್ದ ಪೊಲೀಸರಿಗೆ ದಾಖಲೆ ಇಲ್ಲದ ಸರಿಸುಮಾರು 90ಲಕ್ಷ ಹಣವನ್ನ ವಕ್ಕೆ ಪಡೆಯಲಾಗಿತ್ತು. ಈ ಬಗ್ಗೆ ಕೇಶ್ವಾಪುರ ಠಾಣೆ ಪೊಲೀಸರು ಹಣವನ್ನ ವಶಕ್ಕೆ ಪಡೆದುಕೊಂಡು ಕಾನೂನು ಕ್ರಮವನ್ನ ಜರುಗಿಸಿದ್ದಾರೆ.
ಹುಧಾ ಪೊಲೀಸ್ ಕಮೀಷನರ್ ಎನ್. ಶಶಿಕುಮಾರ್ ಈ ಕುರಿತು ಮಾಹಿತಿ ನೀಡಿದ್ದು, ನಿವೃತ್ತ ನೌಕರರಾದ ಪಾಂಡುರಂಗಪ್ಪ, ಕಮಲಾ, ಬಾಲಕೃಷ್ಣ ಹಣವನ್ನ ಶಿವಮೊಗ್ಗದಿಂದ ತಂದಿದ್ರು. ಹುಬ್ಬಳ್ಳಿ ಮೂಲದ ಸತೀಶ್ ಶೇಜವಾಡಕರ್ ಅವರಿಗೆ ಹಣ ಸೇರಿದ್ದು ಎಂದು ವಶಕ್ಕೆ ಪಡೆದವರು ಹೇಳಿದ್ದಾರೆ. ಹೀಗಾಗಿ ನಾಲ್ವರ ವಿರುದ್ದ ಕೇಸ್ ದಾಖಲು ಮಾಡಿಕೊಂಡು ತನಿಖೆ ಮಾಡಲಾಗುತ್ತಿದೆ.
ಪ್ರಾಪರ್ಟಿ ವಿಚಾರವಾಗಿ ಹಣ ಸಾಗಾಟ ಎಂದು ಹೇಳಿದ್ದಾರೆ. ಆದ್ರೆ, ಇದೊಂದು ಗಂಭೀರ ಪ್ರಕರಣ. ಹೀಗಾಗಿ ನಾವು ವಿಚಾರಣೆ ಮಾಡುತ್ತೇವೆ. IT ಅಧಿಕಾರಿಗಳಿಗೂ ಮಾಹಿತಿ ನೀಡುತ್ತೇವೆ ಎಂದು ಕಮೀಷನರ್ ತಿಳಿಸಿದ್ದಾರೆ.
ಇದನ್ನೂ ಓದಿ
- ಕರ್ನಾಟಕದ ಬರದ ಸಂಕಷ್ಟಕ್ಕೆ ಕೇಂದ್ರದ ನೆರವು ಕೋರಿದ ಸಿಎಂ ಡಿ ಕೆ ಶಿವಕುಮಾರ : ಪ್ರಧಾನಿ ಮೋದಿಗೆ ಪತ್ರ
- “ಶಿರಸಿ–ಮುಂಡಗೋಡ–ಸೌವದತ್ತಿ ನೂತನ ಬಸ್ ಸೇವೆಗೆ ಶಾಸಕ ಶಿವರಾಮ ಹೆಬ್ಬಾರ್ ಚಾಲನೆ
- ಬಿಜೆಪಿ ಆರೋಪಗಳು ರಾಜಕೀಯ ಪ್ರೇರಿತ; ಅಕ್ರಮ ವಲಸಿಗರ ವಿಷಯದಲ್ಲಿ ಕೇಂದ್ರದ ವೈಫಲ್ಯ ಮುಚ್ಚಿಹಾಕುವ ಪ್ರಯತ್ನ: ಪ್ರಸನ್ನ ನಾಯ್ಕ್
- “ಮಂಕಾಳ್ ವೈದ್ಯ ಮನವಿಗೆ ಸಿ.ಎಂ. ಡಿ.ಕೆ. ಶಿವಕುಮಾರ್ ಸ್ಪಂದನೆ; ಮಹಾಬಲೇಶ್ವರ ದೇವಾಲಯದ ಕೊಳಚೆ ನೀರಿನ ಸಮಸ್ಯೆಗೆ ಕ್ರಮಕ್ಕೆ ಅಧಿಕಾರಿಗಳಿಗೆ ಸೂಚನೆ

