ಸುದ್ದಿಬಿಂದು ಬ್ಯೂರೋ ವರದಿ
ಸಿದ್ದಾಪುರ: ತಾಲೂಕಿನ ಕೋಲಸಿರ್ಸಿ ಗ್ರಾಮದ ಮಾರುತಿ ಗಲ್ಲಿಯಲ್ಲಿ ನಾಗರಾಜ ಗೌಡರ ಮನೆಯಿಂದ ಇದೇ ಫೆ.5ರ ರಾತ್ರಿ ಸುಮಾರು 45ಕೆಜಿ ಅಡಿಕೆ ಕಳ್ಳತನ ಮಾಡಿದ್ದ ಅರೋಪಿ ಕೋಲಸಿರ್ಸಿ ಗುಡ್ಡೆಕೇರಿಯ ಕಾಶಿನಾಥ ಕೃಷ್ಣ ನಾಯ್ಕ ಎಂಬಾತನನ್ನು ಪೋಲಿಸರು ಕದ್ದ ಅಡಿಕೆ ಸಮೇತವಾಗಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮನೆಯ ಅಂಗಳದಲ್ಲಿ ದಾಸ್ತಾನು ಮಾಡಿದ್ದ ಅಡಿಕೆ ಕಳ್ಳತನವಾಗಿದ್ದು ಈ ಸಂಬಂಧ ಮಾಲೀಕ ನಾಗರಾಜ ಗೌಡ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಕಳ್ಳತನದ ದೂರು ಸಲ್ಲಿಸಿದ್ದರು.
ಎಸ್ಪಿ ನಾರಾಯಣ ಎಂ ಮಾರ್ಗದರ್ಶನ ಡಿವೈಎಸ್ಪಿ ಗಣೇಶ ಕೆ ಎಲ್ ಮತ್ತು ಜೆ ಬಿ ಸೀತಾರಾಮ ನೇತ್ರತ್ವದಲ್ಲಿ ನಡೆದ ಕಾರ್ಯಚರಣೆಯಲ್ಲಿ ಪಿಎಸ್ಐಗಳಾದ ಅನಿಲ ಬಿ.ಎಂ, ಗೀತಾ ಸಿರ್ಸಿಕರ್ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿದ್ದರು.
ಇದನ್ನೂ ಓದಿ
- ಅಕ್ರಮ ವಲಸಿಗರಿಗೆ ಪ್ರಮಾಣಪತ್ರ ರಾಷ್ಟ್ರೀಯ ಭದ್ರತೆಗೆ ಆತಂಕ: ಜಾತಿ ಗಣತಿ ವರದಿಯನ್ನೂ ಬಹಿರಂಗಪಡಿಸಿ ಎಂದ ರೂಪಾಲಿ ನಾಯ್ಕ
- ಎಸ್ಐಆರ್ ಪ್ರಕ್ರಿಯೆ ಹಾದಿತಪ್ಪಿಸಲು ಕಾಂಗ್ರೆಸ್ ಸರ್ಕಾರ ಯತ್ನ: ಶಾಸಕ ದಿನಕರ ಶೆಟ್ಟಿ ಆರೋಪ
- “RSS ಚರ್ಚೆ ಬಿಟ್ಟು ಕಲಬುರುಗಿ ಶಿಕ್ಷಣದತ್ತ ಗಮನ ಹರಿಸಿ: ಖರ್ಗೆಗೆ ಯಶ್ಪಾಲ್ ಸುವರ್ಣ ಸಲಹೆ”
- ಮಾದನಗೇರಿಯಲ್ಲಿ ಅಪರೂಪದ ದೈತ್ಯ ಏಡಿ ಪತ್ತೆ : ವಿದೇಶಿ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ

