ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ :ಇಲ್ಲಿನ ತಹಶೀಲ್ದಾರ ಕಚೇರಿಯ ಆವರಣದಲ್ಲಿ ನಡೆ ಅಕ್ಕ ಕೆಫೆ ನಿರ್ಮಾಣ ಕಾಮಗಾರಿ ಶಂಕು ಸ್ಥಾಪನೆಗೆ ಆಹ್ವಾನ ನೀಡದೆ ಇರುವ ಬಗ್ಗೆ ಸ್ಥಳೀಯ ಶಾಸಕ ಸತೀಶ್ ಸೈಲ್ ಅಧಿಕಾರಿಗಳನ್ನ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಕಾರವಾರ ಇವರ ಸಂಯುಕ್ತ ಆಶ್ರಯದಲ್ಲಿ ಉತ್ತರ ಕನ್ನಡ ಜಿಲ್ಲೆ ಕಾರವಾರ ತಾಲೂಕಿನ ತಹಶೀಲ್ದಾರ ಕಛೇರಿಯ ಆವರಣದಲ್ಲಿ ಎನ್. ಆರ್. ಎಲ್.ಎಂ ಸಂಜೀವಿನಿ ಯೋಜನೆ ಅಕ್ಕ ಕೆಫೆ ನಿರ್ಮಾಣ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಅವರು ಗುದ್ದಲಿ ಪೂಜೆ ನೆರವೇರಿಸಿದರು.
ಕೆಡಿಪಿ ಸಭೆಯಲ್ಲಿ ಭಾಗವಹಿಸಿಲು ಶಾಸಕ ಸತೀಶ ಸೈಲ್ ಅವರು ಸಚಿವರ ಕಾರನಲ್ಲಿ ಪ್ರವಾಸಿಮಂದಿರದಿಂದ ಸಚಿವರ ಜೊತೆಯಲ್ಲೆ ಅಗಮಿಸಿದರು. ಆದರೆ ಈ ವೇಳೆ ಕೆಡಿಪಿ ಸಭೆ ನಡೆಯುವ ಜಿಲ್ಲಾ ಪಂಚಾಯತ ಕಚೇರಿಯ ಪಕ್ಕದಲ್ಲೆ ತಹಶೀಲ್ದಾರ ಕಚೇರಿ ಕಡೆ ಸಚಿವರ ಕಾರು ಹೋಗುತ್ತಿದ್ದಂತೆ ಶಾಸಕರೆ ಒಮ್ಮೆ ಆಶ್ಚರ್ಯಕ್ಕೆ ಒಳಗಾಗಿದ್ದಾರೆ. ಸಚಿವರ ಕಾರು ಇಳಿದ ಮೇಲೆಯೆ ಅಕ್ಕ ಕೆಫೆ ನಿರ್ಮಾಣದ ಕಾಮಗಾರಿಗೆ ಶಂಕು ಸ್ಥಾಪನೆ ಇದೆ ಎನ್ನುವುದು ಶಾಸಕ ಸತೀಶ್ ಸೈಲ್ ಅವರ ಅರಿವೆ ಬಂದಿದೆ..ಕಾಮಗಾರಿ ಶಂಕು ಸ್ಥಾಪನೆಗಾಗಿ ಪಕ್ಕದಲ್ಲೇ ಬ್ಯಾನರ್ನಲ್ಲಿ ಹಾಕಲಾಗಿದ್ದು, ಅದರಲ್ಲಿ ಸೈಲ್ ಅವರ ಪೊಟೋ ಹಾಕಲಾಗಿದೆ. ಆದೆ
ಬಳಿಕ ಶಾಸಕ ಸೈಲ್ ಶಂಕು ಸ್ಥಾಪನೆಯಿಂದ ಸ್ವಲ್ಪವೇ ದೂರ ಉಳಿದು ಅಧಿಕಾರಿಗಳ ನಡೆಯ ಬಗ್ಗೆ ಅಸಮಧಾನಗೊಂಡ ಶಾಸಕರು ಅಲ್ಲೆ ಇದ್ದ ಅಧಿಕಾರಿಗಳನ್ನ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಪ್ರಸಂಗ ಸಹ ನಡೆದಿದೆ.
ಇದನ್ನೂ ಓದಿ
- ಮೂರು ವರ್ಷದಲ್ಲೇ ಜನಪ್ರಿಯ ನಾಯಕನಾಗಿ ಹೊರಹೊಮ್ಮಿದ ಮಂಕಾಳ್ ವೈದ್ಯ
- ಮೊರಬಾದಲ್ಲಿ ಭಾರೀ ಗಾಳಿಗೆ ತೆಂಗಿನ ಮರ ಬಿದ್ದು ಮನೆ ಜಖಂ: ಪ್ರಾಣಾಪಾಯದಿಂದ ಪಾರು
- ಕರಾವಳಿಯ ಅಭಿವೃದ್ಧಿಗೆ ಮತ್ತೊಂದು ಹೆಜ್ಜೆ: ಡಿಕೆಶಿ ಸಚಿವ ಸಂಪುಟದಲ್ಲಿ ಮಾಂಕಾಳ ವೈದ್ಯರಿಗೆ ಹೊಸ ಜವಾಬ್ದಾರಿ..!
- 11 ಮಂದಿಯ ದುರಂತದ ಸೂತಕದಲ್ಲೂ ಬಿಜೆಪಿ ರಾಜಕೀಯ; ಕಾಂಗ್ರೇಸ ಜಿಲ್ಲಾ ವಕ್ತಾರ ಪ್ರಸನ್ನ ನಾಯ್ಕ ಆಕ್ರೋಶ

