ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ:ಕನ್ನಡ ಶಾಲೆಗಳ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ಸರಕಾರ‌ ಹೆಚ್ಚಿನ ಉತ್ತೇಜನ ನೀಡುತ್ತಿದೆ.‌ಪ್ರತಿಯೊಬ್ಬ‌ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು.ಪಾಲಕರು ತಮ್ಮ ಮಕ್ಕಳಿಗೆ ಸರಕಾರಿ ಶಾಲೆಯಲ್ಲಿ ಶಿಕ್ಷಣ ಕೊಡಿಸುವ ಬಗ್ಗೆ ಆಲೋಚನೆ ಮಾಡಬೇಕೆಂದು ಕ್ಷೇತ್ರ ಶಿಕ್ಷಣಾಧಿಕಾರಿ ರಾಜೇಂದ್ರ ಭಟ್ ಸಲಹೆ ನೀಡಿದರು.

ಬರ್ಗಿಯ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆ ಬರ್ಗಿ ನಂ 1ರಲ್ಲಿ ನಡೆದ ವಾರ್ಷಿಕ ಸ್ನೇಹ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು..

ವಿಶೇಷ ಆಮಂತ್ರಿತರಾಗಿ ಆಗಮಿಸಿದ ಉದ್ಯಮಿ ಹಾಗೂ ಶಿಕ್ಷಣ ಪ್ರೇಮಿ ಮಂಜುನಾಥ ಎಲ್ ನಾಯ್ಕ ಅವರು ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪಠ್ಯದ ಜೊತೆಗೆ ಇಂತಹ ಸಾಂಸ್ಕ್ರತಿಕ ಕಾರ್ಯಕ್ರಮದಲ್ಲಿ ತೋಡಗಿಸಿಕೊಳ್ಳುವ ಮೂಲಕ ತಮ್ಮಲ್ಲಿರುವ ಪ್ರತಿಭೆಯನ್ನ ಬೆಳಸಿಕೊಳ್ಳುವಂತಾಗಬೇಕು.ಪಾಲಕರು ಸಹ ಪ್ರೋತ್ಸಾಹಿಸಬೇಕು ಎಂದು..

ಸೂರಜ್ ನಾಯ್ಕ ಸೋನಿ ಅವರು ಮಾತನಾಡಿ ಪ್ರತಿಯೊಬ್ಬ ಪಾಲಕರು ಮಕ್ಕಳಲ್ಲಿರುವ ಆಸಕ್ತಿಯನ್ನು ಅರಿತುಕೊಂಡು ಶಿಕ್ಷಣ ನೀಡಬೇಕು. ಆಗ ಅವರ ಭವಿಷ್ಯ ಉಜ್ವಲವಾಗುತ್ತದೆ. ಕೇವಲ ಡಾಕ್ಟರ್, ಎಂಜಿನಿಯರ್ ಆಗಿ ಎಂದು ಮಕ್ಕಳ ಮನಸ್ಸಿನ ಮೇಲೆ ಒತ್ತಡ ಹೇರಬಾರದು’ ಮೊದಲಿಗಿಂತ‌ ಈಗ ಶಿಕ್ಷಣಲ್ಲಿ ಸಾಕಷ್ಟು ಬದಲಾವಣೆ ಆಗಿದೆ.‌ಹಿಂದೆಲ್ಲಾ ಪಾಲಕರು ಮಕ್ಕಳ‌ ಶಿಕ್ಣಣ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸುತ್ತಿರಲಿಲ್ಲ.‌ ಆದರೆ ಈಗ ಮಕ್ಕಳಿಗಿಂತ‌ ಹೆಚ್ಚಾಗಿ ಪಾಲಕರೆ ಮುಂದೆ ಬಂದು ತಮ್ಮ‌ ಮಕ್ಕಳ‌ ಶಿಕ್ಷಣದ ಬಗ್ಗೆ ಕಾಳಜಿ‌ ವಹಿಸುತ್ತಿದ್ದಾರೆ, ಬರ್ಗಿ ಶಾಲೆಯಲ್ಲಿ ವಿದ್ಯಾರ್ಥಿಗಳ ಗುಣಮಟ್ಟ ಉತ್ತಮವಾಗಿದೆ ಎಂದರು..

ಜಿಲ್ಲಾ ಪಂಚಾಯತ ಮಾಜಿ ಸದಸ್ಯ ಪ್ರದೀಪ ಡಿ ನಾಯಕ ಅವರು ಮಾತನಾಡಿ, ‘ವಿದ್ಯಾರ್ಥಿಗಳು ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಬೇಕಿದ್ದರೆ ಅವರ ಪ್ರಾಥಮಿಕ ಶಿಕ್ಷಣದ ತಳಪಾಯ ಗಟ್ಟಿಯಾಗಿರಬೇಕು. ವಿದ್ಯಾರ್ಥಿಗಳು ಕಠಿಣ ಶ್ರಮವಹಿಸಿ ಅಭ್ಯಾಸ ಮಾಡಬೇಕು,ಅದಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ’ ಎಂದರು.

ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಭಾಸ್ಕರ ಪಟಗಾರ ಅವರು ಮಾತನಾಡಿ. ಪ್ರತಿಯೊಬ್ಬ ಪಾಲಕರು ತಮ್ಮ ಮಕ್ಕಳಿಗೆ ಕನ್ನಡ ಶಾಲೆಯಲ್ಲೆ ಶಿಕ್ಷಣ ನೀಡುವಂತಾಗಬೇಕು, ಕನ್ನಡ ಶಾಲೆಯಲ್ಲಿ ಶಿಕ್ಷಣ ಪಡೆದವರೆ ಇಂದು ಉನ್ನತ ಸ್ಥಾನದಲ್ಲಿದ್ದಾರೆ.‌ಕನ್ನಡ ಶಾಲೆಯಲ್ಲಿನ ವಿದ್ಯಾರ್ಥಿಗಳಲ್ಲಿ ಒಳ್ಳೆಯ ಸಂಸ್ಕೃತಿ, ಸಂಸ್ಕಾರವಿದೆ.ಸುಸಂಸ್ಕೃತರಾಗಿ ನಾಡಿನ ಸತ್ಪಜೆಗಳಾಗಿ ದೇಶದ ಪ್ರಗತಿಗೆ ಬೆನ್ನುಲುಬಾಗಿ ನಿಲ್ಲುತ್ತಾರೆ’ ಎಂದರು.

ಬರ್ಗಿ ಗ್ರಾಮ‌ ಪಂಚಾಯತ ಅಧ್ಯಕ್ಷರಾದ ಸಂತೋಷ‌ ಎಸ್ ಹರಿಕಾಂತ ಅವರು ಕಾರ್ಯಕ್ರಮದ ಬಗ್ಗೆ ಶುಭ ಹಾರೈಸಿದರು.

ವೇದಿಕೆಯಲ್ಲಿ ಗ್ರಾ.ಪಂ ಉಪಾಧ್ಯಕ್ಷೆ ಮಹಾಲಕ್ಷ್ಮಿ ಎಂ ಶೆಟ್ಟಿ, ಗ್ರಾ.ಪಂ ಸದಸ್ಯರಾದ ನವೀನ್ ಎಸ್ ಪಟಗಾರ, ರವಿಕುಮಾರ ಪಿ‌ ನಾಯ್ಕ, ಮಂಗಲಾ ಜಿ ನಾಯಕ, ಮಾಲತಿ ಆಗೇರ, ಶಿಕ್ಣಣ‌ ಸಂಯೋಜಕಿ ದೀಪಾ‌ ಕಾಮತ್, ಟೆಸ್ಟ್‌ಬುಕ್ ನೋಡಲ್ ಮಂಜುನಾಐ ನಾಯಕ, ಸಮೂಹ ಸಂಪನ್ಮೂಲ ವ್ಯಕ್ತಿ ಕಿಶೋರ ಭೋಮಕರ್, ತಾಲೂಕಾ ದಹಿಕ ಶಿಕ್ಷಣ ಪರಿವೀಕ್ಷಕರಾದ ಬಿ ಜಿ ನಾಯಕ,,ಶಿಕ್ಷಕಿ ಹಾಗೂ ಶಿಕ್ಷಕ‌ ಸಂಘದ ಸದಸ್ಯೆ ಕಲ್ಪನಾ ಬಿ ನಾಯಕ, ಉದ್ಯಮಿ ಉಮೇಶ ಗಾಂವಕರ, ಕುಮಾರ ಕೊಲಿನ್, ಬೆಂಗಳೂರಿ, ಕೊಲಿನ ಏರೋಸ್ಪೇಸ್ ಬೆಂಗಳೂರು, ಅಗ್ನಿಶಾಮಕ‌‌ದಳದ ನಿವೃತ್ತ ಅಧಿಕಾರಿ ಜಯಾನಂದ ಎನ್ ಪಟಗಾರ, ಬರ್ಗಿ,
ಎಸ್ ಡಿ ಎಂ ಸಿ ಅಧ್ಯಕ್ಷರಾದ ಸಂತೋಷ‌ ವಿ ಗುನಗಾ,ಹಳೆ ವಿದ್ಯಾರ್ಥಿಗಳ‌ ಸಂಘದ ಅಧ್ಯಕ್ಷ ಗಣಪತಿ ಬಿ ಪಟಗಾರ ವೇದಿಕೆಯಲ್ಲಿ ಉಪಸ್ಥಿತರಿದ್ದರು..

ಶಿಕ್ಷಕಿ‌ ಮಮತಾ ನಾಯಕ, ನಿರೂಪಿಸಿದರು,ಶಿಕ್ಷಕರಾದ‌‌ ರಾಮನಾಥ ನಾಯ್ಕ, ಸ್ವಾಗತಿಸಿದರು,‌‌ಶಿಕ್ಷಕಿ ವಿಜಯಲಕ್ಷ್ಮಿ ವರದಿ ವಾಚಿಸಿದರು..ಶಿಕ್ಷಕಿ‌ ಸ್ಮೀತಾ ಅವರು ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು, ಶಿಕ್ಷಕರಾದ ಶೋಭಾ ಯು ನಾಯ್ಕ, ಕ್ರೀಡಾಕೂಟದ ವಿದ್ಯಾರ್ಥಿಗಳ ಬಹುಮಾನ ವಿತರಸಿದರು,ಅತಿಥಿ ಶಿಕ್ಷಕಿ
ಗೌರಿ ಪಟಗಾರ ಸಹಕರಿಸಿದರು.ವೇದಿಕೆ ಕಾರ್ಯಕ್ರಮದ ಬಳಿಕ ಶಾಲಾ ವಿದ್ಯಾರ್ಥಿಗಳಿಂದ‌ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.

ಇದನ್ನೂ ಓದಿ