ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ : ಪಟ್ಟಣದ ಮಣಕಿ ಮೈದಾನದ ಚರ್ಚ್ ಎದುರಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಖಾಸಗಿ ಬಸ್ ಮತ್ತು ಆಟೋ ರಿಕ್ಷಾ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಆಟೋದಲ್ಲಿದ್ದ ಪ್ರಯಾಣಿಕ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಚಾಲಕ ಗಂಭೀರ ಗಾಯಗೊಂಡಿದ್ದಾನೆ.
ಧಾರೇಶ್ವರ ಮಠದ ಕೇರಿ ನಿವಾಸಿ ದಿನೇಶ ಗೋವಿಂದ ಮುಕ್ರಿ (30) ಸ್ಥಳದಲ್ಲೆ ಮೃತಪಟ್ಟ ಪ್ರಯಾಣಿಕ. ಈತ ತನ್ನ ಸ್ನೇಹಿತನಾದ ಧಾರೇಶ್ವರದ ಭಾಸ್ಕರ್ ರಾಮ ಪಟಗಾರ ಎಂಬುವವರ ಆಟೋ ಮೇಲೆ ಕುಮಟಾಕ್ಕೆ ಬಂದಿದ್ದು, ರಿಟರ್ನ್ ಧಾರೇಶ್ವರಕ್ಕೆ ತೆರಳಲು ಮಾಸ್ತಿಕಟ್ಟೆ ಸರ್ಕಲ್ನಿಂದ ಗಿಬ್ ಸರ್ಕಲ್ ಕಡೆಗೆ ಸಾಗುತ್ತಿರುವಾಗ ಮಂಗಳೂರಿನಿಂದ ಮುಂಬೈ ಕಡೆಗೆ ತೆರಳುತ್ತಿದ್ದ ಖಾಸಗಿ ಬಸ್ ಆಟೋಗೆ ಡಿಕ್ಕಿ ಹೊಡೆದಿದೆ.
ಅಪಘಾತದ ರಭಸಕ್ಕೆ ಆಟೋದಲ್ಲಿದ್ದ ಪ್ರಯಾಣಿಕ ದಿನೇಶ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ, ಆಟೊ ಚಾಲಕ ಭಾಸ್ಕರ್ ಪಟಗಾರ ಗಂಭೀರ ಗಾಯಗೊಂಡಿದ್ದಾನೆ. ಗಾಯಾಳುವಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ರವಾನಿಸಲಾಗಿದೆ.ಅಪಘಾತದಲ್ಲಿ ಆಟೋ ಸಂಪೂರ್ಣ ನುಜ್ಜುಗುಜ್ಜಾಗಿದ್ದು, ಕೆಲ ಸಮಯ ಹೆದ್ದಾರಿಯಲ್ಲಿ ಎದುರಾದ ಟ್ರಾಫಿಕ್ ಸಮಸ್ಯೆಯನ್ನು ಕುಮಟಾ ಪೊಲೀಸರ್ ಕ್ಲೀಯರ್ ಮಾಡಿದ್ದಾರೆ. ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ.
ಗಮನಿಸಿ