ಸುದ್ದಿಬಿಂದು ಬ್ಯೂರೋ ವರದಿ
ಮುಂಡಗೋಡ: ದುಷ್ಕರ್ಮಿಗಳಿಂದ ಅಪಹರಣಕ್ಕೆ ಒಳಗಾಗಿದ್ದ ಮುಂಡಗೋಡದ NMD ಗ್ರೂಪ್‌ನ ಮಾಲೀಕ ಜಮೀರ್ ಅಹ್ಮದ್ ದರ್ಗಾವಲೆ ಸುರಕ್ಷಿತರಾಗಿದ್ದಾರೆ. ಅವರನ್ನು ಹೊಳೆಯ ಬಿಳಿ ಕಾರಿನಲ್ಲಿ ಕರೆದೊಯ್ದು ಹುಬ್ಬಳ್ಳಿಯ ಗದಗ ರಸ್ತೆಯ ರಿಂಗ್ ರೋಡನ್‌ನಲ್ಲಿ ಜಮೀರ್ ಅಹ್ಮದ್ ದರ್ಗಾವಲೆ ಅವರನ್ನು ಬಿಟ್ಟು ಹೋಗಿದ್ದಾರೆನ್ನಲಾಗಿದೆ.ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ ಬಂಧಿಸಿದ್ದಾರೆ.

ನಿನ್ನೆ ಸಂಜೆ ಮುಂಡಗೋಡದ ಸಂತೆ ಮಾರ್ಕೆಟ್ ರಸ್ತೆ ಮೂಲಕ ಬರುತ್ತಿದ್ದ ದರ್ಗಾವಲೆ ಅವರ ಸ್ಕೂಟಿಗೆ ಕಾರು ಡಿಕ್ಕಿ ಹೊಡೆದು ಕೆಡವಿದ ಅಪಹರಣಕಾರರು. ನಂತರ, ಅವರನ್ನು ಕಾರಿನಲ್ಲಿ ಅಪಹರಿಸಿ ಪರಾರಿಯಾಗಿದ್ದರು..

ಹಣಕ್ಕಾಗಿ ನಡೆದಿದೆಯೆ..?
ಅಪಹರಣ ಪ್ರಕರಣವನ್ನು ನೋಡಿದರೆ, ಹಣಕ್ಕಾಗಿ ನಡೆದ ಕೃತ್ಯ ಎಂಬ ಅನುಮಾನ ಮೂಡಿದೆ. ಯುವ ಉದ್ಯಮಿಯನ್ನು ಹಣಕ್ಕಾಗಿ ಅಪಹರಿಸಿದ್ದಾರೆಯೆ ಎಂಬ ಅನುಮಾನಗಳು ವ್ಯಕ್ತವಾಗಿವೆ. ಅದೇ ವೇಳೆ, ಅಪಹರಣಕಾರರು ಹುಬ್ಬಳ್ಳಿಯ ಗದಗ‌ ರಿಂಗ್ ರೋಡ್ ಬಳಿ ಬಿಟ್ಟು ಪರಾರಿಯಾಗಿದ್ದು, ಒಂದು ಸಂದೇಶವನ್ನು ಬಿಟ್ಟುಹೋದರು ಘಟನೆ ನಡೆದ ಕ್ಷಣದಿಂದಲೇ ಮುಂಡಗೋಡದ ಪೊಲೀಸರು ತಕ್ಷಣವೇ ಐದು ತಂಡ ರಚಿಸಿ ಕಾರ್ಯಚರಣೆಗೆ ಇಳಿದಿದ್ದರು. ರಾತ್ರಿ ಸುಮಾರು 11 ಗಂಟೆಗೆ, ಹುಬ್ಬಳ್ಳಿಯ ಗದಗ ರಿಂಗ್ ರಸ್ತೆಯಲ್ಲಿಯೇ ಜಮೀರ್ ಅಹ್ಮದ್ ದರ್ಗಾವಲೆ ಅವರನ್ನು ಬಿಟ್ಟುಹೋಗಿರುವ ಮಾಹಿತಿ ದೊರೆಯಿತು. ಅಂತೆಯೇ, ಚಿಕ್ಕೋಡಿಯ ಹತ್ತಿರ ಮುಂಡಗೋಡ ಪೊಲೀಸರು ಐದು ಆರೋಪಿಗಳನ್ನು ಬಂಧಿಸಿದ್ದಾರೆ.

ಖಾಸಗಿ ಆಸ್ಪತ್ರೆಗೆ ದಾಖಲು..!
ಬಚಾವಾಗಿ ಬಂದಿರುವ ಜಮೀರ್ ಅಹ್ಮದ್ ಅವರನ್ನು ಅಪಹರಣಕಾರರು ದಾಳಿ ಮಾಡಿದ ನಂತರ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮುಂಡಗೋಡ ಪೊಲೀಸರು ಅಪಹರಣ ಆರೋಪಿಗಳನ್ನು ಹಿಡಿದು ನಗರಕ್ಕೆ ಕರೆತರುವ ಸಾಧ್ಯತೆ ಇದೆ. ಒಟ್ಟಿನಲ್ಲಿ ಬೃಹತ್ ಚಿಂತೆಗೊಳಗಾಗಿದ್ದ ಈ ಅಪಹರಣ ಪ್ರಕರಣಕ್ಕೆ ಹಾರ್ದಿಕ ಅಂತ್ಯ ಕಂಡುಬಂದಂತೆ ಕಾಣುತ್ತಿದೆ.

ಗಮನಿಸಿ