ಸುದ್ದಿಬಿಂದು ಬ್ಯೂರೋ ವರದಿ
ಮುಂಡಗೋಡ :ಅಂಗನವಾಡಿಗೆ ಹೋಗಿದ್ದ ವೇಳೆ ಮೂತ್ರ ವಿಸರ್ಜನೆಗೆ ಹೋಗಿದ್ದ 4ವರ್ಷದ ಬಾಲಕಿಗೆ ಹಾವು ಕಚ್ಚಿ ಬಾಲಕಿ ಮೃತ ಪಟ್ಟಿರುವ ಘಟನೆ ಪಟ್ಟಣದ ಮಾರಿಕಾಂಬಾ ನಗರದಲ್ಲಿ ನಡೆದಿದೆ.
ಮಯೂರಿ ಸುರೇಶ ಕುಂಬ್ಳೆಪ್ಪನವರ್ ಎಂಬಾಕೆಯೇ ಮೃತಪಟ್ಟ ಬಾಲಕಿಯಾಗಿದ್ದಾಳೆ. ಅಂಗನವಾಡಿಗೆ ಹೋಗಿದ್ದ ಮಯೂರಿ ಮೂತ್ರ ವಿಸರ್ಜನೆಗೆಂದು ಹೋಗಿದ್ದ ಸಮಯದಲ್ಲಿ ಬಾಲಕಿಗೆ ಹಾವು ಕಚ್ಚಿದೆ. ಚಿಕಿಸ್ಸೆಗಾಗಿ ತಕ್ಷಣ ಬಾಲಕಿಗೆ ತಾಲೂಕ ಆಸ್ಪತ್ರೆಗೆ ದಾಖಲೆ ದಾಖಲಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಯ ಕಿಮ್ಸ್ ಗೆ ಕರೆದೊಯ್ಯಲಾಗುತ್ತಿತ್ತು. ಆದರೆ ಮಾರ್ಗ ಮಧ್ಯೆ ಬಾಲಕಿ ಮೃತಪಟ್ಟಿದ್ದಾಳೆ.ಕಿಮ್ಸ್ನಲ್ಲಿ ವೈದ್ಯರು ಬಾಲಕಿ ಪಟ್ಟಿರುವದನ್ನು ದೃಢಪಡಿಸಿದ್ದಾರೆ.
ಗಮನಿಸಿ