ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ:ಉತ್ತರಕನ್ನಡ ಜಿಲ್ಲೆಯ ಕಾರವಾರದ ನೌಕಾನೆಲೆಯ ಸಿಬ್ಬಂದಿ ಕುಡಿದು ರಸ್ತೆ ಬದಿಯೇ ಅವಾಚ್ಯವಾಗಿ ಬೈದುಕೊಂಡು ನೂಕಾಟ ತಳ್ಳಾಟ ನಡೆಸಿದ ಘಟನೆ ಕಾರವಾರ ನಗರದಲ್ಲಿ ನಡೆದಿದೆ.
ಕಾರವಾರ ನಗರದಲ್ಲಿರುವ ಖಾಸಗಿ ರೆಸ್ಟೋರೆಂಟ್ನಲ್ಲಿ ಪಾರ್ಟಿ ಮಾಡಿರುವ ನೌಕಾನೆಲೆಯ ಸಿಬ್ಬಂದಿ, ಕುಡಿದ ಮತ್ತಿನಲ್ಲಿ ಯಾವುದೋ ಕಾರಣಕ್ಕೆ ಬೈಯುತ್ತಾ ಕಿತ್ತಾಡಿಕೊಂಡಿದ್ದಾರೆ. ಇತರರಿಗೆ ಆದರ್ಶವಾಗಿರಬೇಕಾಗಿದ್ದ ನೇವಿಯ ಸಿಬ್ಬಂದಿ, ರಸ್ತೆ ಬದಿ ರಂಪಾಟ ನಡೆಸಿದ್ದು,ರೆಸ್ಟೋರೆಂಟ್ ಬಳಿಯೇ ಕಿತ್ತಾಡಿಕೊಳ್ತಿದ್ದ ನೇವಿಯ ಸಿಬ್ಬಂದಿಯ ಜಗಳ ಬಿಡಿಸಲು ಸೆಕ್ಯೂರಿಟಿ ಗಾರ್ಡ್ ಹರಸಾಹಸಪಡಬೇಕಾದ ಸ್ಥಿತಿ ಎದುರಾಯಿತು. ಕೊನೆಗೂ ಬೈದಾಡಿಕೊಂಡು, ನೂಕಾಟ- ತಳ್ಳಾಟ ನಡೆಸಿಕೊಂಡು ನೇವಿಯ ಸಿಬ್ಬಂದಿ ಸ್ಥಳದಿಂದ ತೆರಳಿದ್ದು, ನೇವಿ ಸಿಬ್ಬಂದಿ ಕಿತ್ತಾಡಿಕೊಳ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ…
ಗಮನಿಸಿ
- Teacher suspended/ವಿದ್ಯಾರ್ಥಿಗೆ ಥಳಿಸಿದ ಪ್ರಕರಣ : ಶಿಕ್ಷಕಿ ಅಮಾನತು.
- Varamahalakshmi Festival, ಶ್ರಾವಣದ ಶುಕ್ರವಾರ, ಮನೆ ಮನೆಗಳಲ್ಲಿ ವರಮಹಾಲಕ್ಷ್ಮಿ ಭಕ್ತಿ ಸಡಗರ
- Teacher/ಪಾಠ ಕಲಿಯಲಿಲ್ಲ ಎಂಬ ಕಾರಣಕ್ಕೆ ವಿದ್ಯಾರ್ಥಿಗೆ ಥಳಿತ : ಬಾಸುಂಡೆ ಮೂಡಿಸಿದ ಶಿಕ್ಷಕಿ
- ಭಟ್ಕಳದ ಹಳೆಯ ಕಾಲ ಮುಕ್ತಾಯ – ನಗರಸಭೆಯ ಹೊಸ ಯುಗ ಆರಂಭ ! ಮಂಕಾಳು ವೈದ್ಯ ಸಚಿವರಾದ ಬಳಿಕ ಭಟ್ಕಳಿಗರ ಕನಸು ನನಸು
- ಅನಂತಮೂರ್ತಿ ಹೆಗಡೆ ನೇತೃತ್ವದಲ್ಲಿ ಜನಪರ ಹೋರಾಟ: ಎಸಿ ಕಚೇರಿಯವರೆಗೆ ಪಾದಯಾತ್ರೆ