ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ:ಉತ್ತರಕನ್ನಡ ಜಿಲ್ಲೆಯ ಕಾರವಾರದ ನೌಕಾನೆಲೆಯ ಸಿಬ್ಬಂದಿ ಕುಡಿದು ರಸ್ತೆ ಬದಿಯೇ ಅವಾಚ್ಯವಾಗಿ ಬೈದುಕೊಂಡು ನೂಕಾಟ ತಳ್ಳಾಟ ನಡೆಸಿದ ಘಟನೆ ಕಾರವಾರ ನಗರದಲ್ಲಿ ನಡೆದಿದೆ.
ಕಾರವಾರ ನಗರದಲ್ಲಿರುವ ಖಾಸಗಿ ರೆಸ್ಟೋರೆಂಟ್ನಲ್ಲಿ ಪಾರ್ಟಿ ಮಾಡಿರುವ ನೌಕಾನೆಲೆಯ ಸಿಬ್ಬಂದಿ, ಕುಡಿದ ಮತ್ತಿನಲ್ಲಿ ಯಾವುದೋ ಕಾರಣಕ್ಕೆ ಬೈಯುತ್ತಾ ಕಿತ್ತಾಡಿಕೊಂಡಿದ್ದಾರೆ. ಇತರರಿಗೆ ಆದರ್ಶವಾಗಿರಬೇಕಾಗಿದ್ದ ನೇವಿಯ ಸಿಬ್ಬಂದಿ, ರಸ್ತೆ ಬದಿ ರಂಪಾಟ ನಡೆಸಿದ್ದು,ರೆಸ್ಟೋರೆಂಟ್ ಬಳಿಯೇ ಕಿತ್ತಾಡಿಕೊಳ್ತಿದ್ದ ನೇವಿಯ ಸಿಬ್ಬಂದಿಯ ಜಗಳ ಬಿಡಿಸಲು ಸೆಕ್ಯೂರಿಟಿ ಗಾರ್ಡ್ ಹರಸಾಹಸಪಡಬೇಕಾದ ಸ್ಥಿತಿ ಎದುರಾಯಿತು. ಕೊನೆಗೂ ಬೈದಾಡಿಕೊಂಡು, ನೂಕಾಟ- ತಳ್ಳಾಟ ನಡೆಸಿಕೊಂಡು ನೇವಿಯ ಸಿಬ್ಬಂದಿ ಸ್ಥಳದಿಂದ ತೆರಳಿದ್ದು, ನೇವಿ ಸಿಬ್ಬಂದಿ ಕಿತ್ತಾಡಿಕೊಳ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ…
ಗಮನಿಸಿ
- “ರೈತರನ್ನು ಮದುವೆಯಾಗುವ ಮಹಿಳೆಯರಿಗೆ ಪ್ರೋತ್ಸಾಹ ಧನ ನೀಡುವಂತೆ ಸಿಎಂಗೆ ಪತ್ರ ಬರೆದ ಶಾಸಕ
- Bjp/ಬಿಜೆಪಿ ಉತ್ತರಕನ್ನಡ ಜಿಲ್ಲಾ ರೈತಮೋರ್ಚಾ ಅಧ್ಯಕ್ಷರಾಗಿ ಅನಂತಮೂರ್ತಿ ಹೆಗಡೆ ನೇಮಕ
- Accident News/ಭೀಕರ ರಸ್ತೆ ಅಪಘಾತ, ಸ್ಥಳದಲ್ಲೆ ಓರ್ವ ಸಾವು
- Bhatkal Crime News/ ಭಟ್ಕಳದಲ್ಲಿ ಕಾಡುಪ್ರಾಣಿ ಹತ್ಯೆ ಶಂಕೆ: 21 ಕೆಜಿ ಮಾಂಸ, ಜಿಂಕೆ ಕೊಬ್ಬು, ಎರಡು ಏರ್ಗನ್ ವಶಕ್ಕೆ
- Big Breaking /ಸುಂಕಸಾಳ ಬಳಿ ಸರಣಿ ಅಪಘಾತ : ಹಲವರಿಗೆ ಗಂಭೀರ ಗಾಯ




