ಸುದ್ದಿಬಿಂದು ಬ್ಯೂರೋ ವರದಿ
ಅಂಕೋಲಾ: ಪಾದಾಚಾರಿಯೋರ್ವನಿಗೆ ಕಾರು ಬಡಿದು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ತಾಲೂಕಿನ ಹಾರವಾಡಾ ರೈಲ್ವೆ ಬ್ರಿಜ್ ಬಳಿ ನಡೆದಿದೆ. ಅಮದಳ್ಳಿ ನಿವಾಸಿ ಸೋಮು ಗೌಡ ಮೃತಪಟ್ಟ ವ್ಯಕ್ತಿ.
ಮುರ್ಡೇಶ್ವರದಿಂದ ಕಾರವಾರಕ್ಕೆ ಹೋಗುತ್ತಿದ್ದ ಕಾರು ಹಾರವಾಡಾ ಬಳಿ ಚಾಲಕನ ನಿಯಂತ್ರಣ ತಪ್ಪಿ ಪಾದಾಚಾರಿಗೆ ಬಡಿದು ಪಕ್ಕದ ಕೃಷಿ ಜಮೀನಿನಲ್ಲಿ ತಲೆ ಕೆಳಗಾಗಿ ಬಿದ್ದಿದೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮುಂಬೈ ಮೂಲದ ಪ್ರಯಾಣಿಕರಾದ ದೀಪಕ ದೇಸಾಯಿ, ಪ್ರೀಯಾ ದೇಸಾಯಿ ಕಾರು ಚಾಲಕ ವಿಶಾಲ ದಾಮೋಧರ ಬಾನಾವಾಳಿಕರ ಎಂಬುವವರಿಗೆ ಗಾಯಗಳಾಗಿದೆ.
ಗಾಯಾಳುಗಳನ್ನು ಐಆರ್ಬಿ ಅಂಬ್ಯುಲೆನ್ಸ್ನಲ್ಲಿ ಅಂಕೋಲಾ ತಾಲೂಕಾಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಗಿದೆ. ಸ್ಥಳದಲ್ಲಿ ಐಆಬಿಯ ನಾಗರಾಜ ಐಗಳ, ಶಿವಾ ನಾಯ್ಕ ಪ್ರಥಮ ಚಿಕಿತ್ಸೆ ನೀಡಿದ್ದಾರೆ. ಈ ಕುರಿತು ಅಂಕೋಲಾ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಗಮನಿಸಿ
- ಡಿಜೆ ಬಳಕೆಗೆ ಸಂಪೂರ್ಣ ನಿಷೇಧ : ಶಬ್ದ ಮಾಲಿನ್ಯ ನಿಯಂತ್ರಣಕ್ಕೆ ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಆದೇಶ
- ಸಾಮಾಜಿಕ ಜಾಲತಾಣದಲ್ಲಿ ‘ರೇಟ್ರೋ ಜಾದು’ ಕ್ರೇಜ್; 80ರ ದಶಕಕ್ಕೆ ಮರಳುತ್ತಿದೆ ನೆಟ್ಟಿಗರು!
- ಉತ್ತರಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ನ್ಯಾಯವಾದಿ ಜಿ ಟಿ ನಾಯ್ಕ ನೇಮಕ
- ಕಾಂಗ್ರೆಸ್ ಸರ್ಕಾರದ ವಿರುದ್ದ ರೂಪಾಲಿ ನಾಯ್ಕ ವಾಗ್ದಾಳಿ ಬಳ್ಳಾರಿ ಬಿಜೆಪಿ ಪಾದಯಾತ್ರೆಯಲ್ಲಿ ಭಾಗಿ

