ಕಾರವಾರ:ಉತ್ತರಕನ್ನಡ ಜಿಲ್ಲೆಯ ಕೆಲವೆಡೆ ಭೂಮಿ ಕಂಪಿಸಿದ ಅನುಭವವಾಗಿದ್ದು,ಮನೆಯೊಳಗಿದ್ದ ಜನ ಮನೆ ಬಿಟ್ಟು ಓಡಿ ಹೋಗಿರುವ ಘಟನೆ ಸಿದ್ದಾಪುರದ ಹೆಗ್ಗರಣಿ,ಹೆರೂರು, ಗೋಳಿಮಕ್ಕಿ ಭಾಗ ಸೇರಿ ಕುಮಟಾ ಸುತ್ತಮುತ್ತ ಉಂಟಾಗಿದೆ.

ಗುಡುಗಿನ ರೀತಿಯಲ್ಲಿ ಸದ್ದಿನೊಂದಿಗೆ ಸಣ್ಣ ಪ್ರಮಾಣದಲ್ಲಿ ಭೂಮಿ ಕಂಪಿಸಿದ್ದು, ಸುಮಾರು 12ಗಂಟೆ ವೇಳೆ ಗುಡುಗಿದ ಶಬ್ದದೊಂದಿಗೆ ಕಂಪಿಸಿದೆ. ಮನೆಯಲ್ಲಿದ್ದವರಿಗೆ ಈ ಕಂಪಿಸಿದ ಅನುಭವದಿಂದ ಮನೆಯಿಂದ ಹೊರಗಡೆ ಓಡಿದ್ದಾರೆ.‌ಮನೆಯಲ್ಲಿದ್ದ, ಸೋಪಾ ಕೂಡ ಅಲುಗಾಡಿರುವ ಬಗ್ಗೆ ಜನ ಅನುಭವ ಹಂಚಿಕೊಂಡಿದ್ದಾರೆ. ತಗಡಿನ ಮನೆಯಲ್ಲಿ ಕಂಪನವಾಗಿರುವ ಸದ್ದು ಸ್ಪಷ್ಟವಾಗಿ ಕೇಳಿಬಂದಿದೆ ಎನ್ನಲಾಗಿದೆ. ಈ ವಿಚಾರಿಸಿದಾಗಿ ಸುದ್ದಿ ಬಿಂದು ಅನೇಕರನ್ನ ಸಂಪರ್ಕಿಸಿ ವಿಚಾರಿಸಿದ್ದು ಬಹುತೇಕ ಜನ್ರು ಕಂಪನದ ಅನುಭವ ಹಂಚಿಕೊಂಡಿದ್ದಾರೆ.

ಇನ್ನಷ್ಟು ಸುದ್ದಿಗಾಗಿ ಈ ಕೆಳಗಿನ ಸುದ್ದಿ ಕ್ಲಿಕ್ ಮಾಡಿ