ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ : ಬೇಲೆಕೇರಿ ಅದಿರು ಪ್ರಕರಣದಲ್ಲಿ ಹಾಲಿ ಶಾಸಕ ಸತೀಶ್ ಸೈಲ್ ದೋಷಿ ಎಂದು ನ್ಯಾಯಾಲಯ ತೀರ್ಪು ನೀಡಿದ್ದು,ಇನ್ನೂ ಶಿಕ್ಷೆ ಪ್ರಮಾಣ ಘೋಷಣೆ ಆಗಿಲ್ಲ. ಈ ನಡುವೆ ವಾಟ್ಸಾಪ್ ವೀರರು ( ಆನಂದ ಅಸ್ನೋಟಿಕರ್ ಬೆಂಬಲಿಗರು) ಕ್ಷೇತ್ರಕ್ಕೆ ಉಪಚುನಾವಣೆ ಘೋಷಣೆ ಆಗಿದೆ ಎನ್ನುವ ರೀತಿಯಲ್ಲಿ ಪೊಸ್ಟ್ ಮಾಡುತ್ತಿದ್ದಾರೆ.
ಕಾರವಾರ ವಿಧಾನಸಭಾ ಕ್ಷೇತ್ರದಲ್ಲಿ ಸತೀಶ್ ಸೈಲ್ ಅವರು ಹಾಲಿ ಕಾಂಗ್ರೆಸ್ ಶಾಸಕರಾಗಿದ್ದಾರೆ.ಬೇಲೆಕೇರಿ ಅದಿರು ನಾಪತ್ತೆ ಪ್ರಕರಣದಲ್ಲಿ ನ್ಯಾಯಾಲಯ ನಿನ್ನೆಯಷ್ಟೆ ಶಾಸಕ ಸತೀಶ್ ಸೈಲ್ ದೋಷಿ ಅಂತಾ ತೀರ್ಪು ನೀಡಿದೆ.ಆದರೆ ಇನ್ನೂ ಶಿಕ್ಷೆ ಪ್ರಮಾಣ ಘೋಷಣೆಯಾಗಿಲ್ಲ.ಒಂದು ವೇಳೆ ಶಾಸಕ ಸೈಲ್ ಅವರಿಗೆ ಮೂರು ವರ್ಷಕ್ಕಿಂತ ಹೆಚ್ಚು ಕಾಲ ಶಿಕ್ಷೆ ಪ್ರಕಟವಾದಲ್ಲಿ ಮಾತ್ರ ಅವರು ಶಾಸಕ ಸ್ಥಾನದಿಂದ ಅನರ್ಹವಾಗಬಹುದು ಎನ್ನಲಾಗುತ್ತಿದೆ.. ಇಲ್ಲ ಕೆಳ ನ್ಯಾಯಾಲಯದ ತೀರ್ಪಿನ ವಿರುದ್ಧ ಹೈಕೋರ್ಟ್ ಮೊರೆ ಹೋಗುವ ಸಾಧ್ಯತೆ ಇದೆ. ಆದರೆ ಯಾವುದು ಇನ್ನೂ ಸ್ಪಷ್ಟವಾಗಿಲ್ಲ. ಆಗಲೆ ವಾಟ್ಸಾಪ್ ವೀರರು ಚುನಾವಣಾ ಆಯೋಗಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿ ಕಾರವಾರ ಕ್ಷೇತ್ರಕ್ಕೆ ಉಪ ಚುನಾವಣೆ ಘೋಷಣೆ ಮಾಡಿಕೊಂಡಿದ್ದಾರೆ.
ಇನ್ನೂ ಲೋಕಸಭಾ ಚುನಾವಣೆ ಸಮಯದಲ್ಲಿ ರಾಜ್ಯದಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಮಾಡಿಕೊಂಡಿದ್ದು, ರಾಜ್ಯದಲ್ಲಿ ಇದೀಗ ನಡೆಗುವ ಉಪಚುನಾವಣೆಯಲ್ಲಿಯೂ ಬಿಜೆಪಿ-ಜೆಡಿಎಸ್ ಹೊಂದಾಣಿಕೆ ಮುಂದುವರೆದಿದೆ. ಈ ನಡುವೆ ಕಾರವಾರದಲ್ಲಿ ಜೆಡಿಎಸ್ಗಿಂತಲ್ಲೂ ಬಿಜೆಪಿ ಸಂಘಟನೆಯಲ್ಲಿ ಪ್ರಭಲವಾಗಿದೆ. ಹೀಗಿರುವಾಗ ಕಾರವಾರ ಕ್ಷೇತ್ರದಲ್ಲಿ ಉಪಚುನಾವಣೆಯಲ್ಲಿ ಆನಂದ ಅಸ್ನೋಟಿಕರ್ ಅವರೇ ಅಭ್ಯರ್ಥಿಯಾಗಲಿದ್ದು ಘೋಷಣೆ ಮಾತ್ರ ಬಾಕಿ ಇದೆ ಎಂದು ಆನಂದ ಅಸ್ನೋಟಿಕರ್ ಅವರ ಬೆಂಬಲಿಗರು ಎನಿಸಿಕೊಂಡವರು ಸಾಮಾಜಿಕ ಜಾಲತಾಣದಲ್ಲಿ ಪೊಸ್ಟ್ ಮಾಡುತ್ತಿದ್ದಾರೆ.
ಇವರ ಪೊಸ್ಟ್ ನೋಡಿದರೆ ಕಾರವಾರ ಕ್ಷೇತ್ರದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಯಲ್ಲಿ ಬಿಜೆಪಿ ಅಭ್ಯರ್ಥಿ ಬದಲು ಜೆಡಿಎಸ್ನಿಂದ ಅಸ್ನೋಟಿಕರ್ ಅವರಿಗೆ ಟಿಕೆಟ್ ಕೊಡಬೇಕು ಎಂದು ಈನಿಂದಲ್ಲೆ ಆಗ್ರಹಿಸುತ್ತಿರುವಂತಿದೆ.
ಇದನ್ನ ನೋಡಿದರೆ ಕೂಸು ಹುಟ್ಟುವ ಮೊದಲೇ ಕೂಲಾವಿ ಹೊಲಿಸಿದಂತಾಗಿದೆ.
ಗಮನಿಸಿ