ಸುದ್ದಿಬಿಂದು ಬ್ಯೂರೋ ವರದಿ
ಗೋಕರ್ಣ: ಇಲ್ಲಿನ ಕುಡ್ಲೇ ಬೀಚಿನಲ್ಲಿ ಈಜಲು ಹೋಗಿದ್ದ ವೇಳೆ ಸಮುದ್ರದ ಅಲೆಯಲ್ಲಿ ಸಿಲುಕಿದ ಉತ್ತರ ಪ್ರದೇಶ್ ಮೂಲದ ಪ್ರವಾಸಿಗನ ರಕ್ಷಣೆ ಮಾಡಿರುವ ಘಟನೆ ನಡೆದಿದೆ.
ಉತ್ತರ ಪ್ರದೇಶ ಬನಾರಸ್ ಮೂಲದ ರಾಹುಲ್ ಕುಮಾರ್ (28)ರಾಮಕಥ ಕೇಳಲು ಬಂದ ಪ್ರವಾಸಿಗ ಕುಡ್ಲೆ ಬೀಚಿನಲ್ಲಿ ಈಜಲು ತೆರಳಿದ್ದಾಗ ಸಮುದ್ರ ಸುಳಿಗೆ ಸಿಲುಕಿದ್ದು ಜೀವ ರಕ್ಷಣೆಗಾಗಿ ಕೂಗಿದ್ದಾನೆ ಅದನ್ನು ಗಮನಿಸಿದ ಲೈಫ್ ಗಾರ್ಡ್ ಸಿಬ್ಬಂದಿ ಮಂಜುನಾಥ ಹರಿಕಂತ್ರ .ಪ್ರದೀಪ್ ಅಂಬಿಗ್ ಮತ್ತು ಮಿಸ್ಟೇಕ್ ಗೋಕರ್ಣ ಅಡ್ವೆಂಚರ್ಸ್ ಸಿಬ್ಬಂದಿಗಳು ತಕ್ಷಣ ಜೆಟ್ ಸ್ಕಿ ಮೂಲಕ ರಕ್ಷಣೆಗೆ ತೆರಳಿದ್ದಾರೆ.
ಸಮುದ್ರದ ಅಲೆಗಳು ರಭ ಸವಾಗಿದ್ದು ಹರಸಾಸಪಟ್ಟು ಜೆಸ್ಕಿ (ವಾಟರ್ ಬೈಕ್) ಮೂಲಕ ಪ್ರವಾಸಿಗನ ಜೀವ ರಕ್ಷಣೆ ಮಾಡಿದ್ದಾರೆ…
ಗಮನಿಸಿ