ಸುದ್ದಿಬಿಂದು ಬ್ಯೂರೋ ವರದಿ
ಅಂಕೋಲಾ: ಶಿರೂರು ಗುಡ್ಡಕುಸಿತ ಘಟನೆಗೆ ಸಂಬಂಧಿಸಿ ನಡೆಸಲಾಗುತ್ತಿದ್ದ ಮೂರನೇ ಹಂತದ ಕಾರ್ಯಚರಣೆ ವೇಳೆ ನದಿಯ ನೀರಿನ ಮಟ್ಟ ಕಡಿಮೆಯಾದ ಹಿನ್ನಲೆಯಲ್ಲಿ ಗಂಗಾವಳಿ ನದಿಯಲ್ಲಿ ಡ್ರೆಜ್ಜರ್ ಕಾರ್ಯಚರಣೆಯನ್ನ ಸ್ಥಗಿತ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಲಕ್ಷ್ಮೀ ಪ್ರೀಯಾ ಅವರು ಮಾಹಿತಿ ನೀಡಿದ್ದಾರೆ.
ಜುಲೈ 16ರಂದು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಶಿರೂರು ಬಳಿ ಭಾರೀ ಪ್ರಮಾಣದಲ್ಲಿ ಗುಡ್ಡಕುಸಿತ ಉಂಡಾಗಿ 11ಮಂದಿ ಸಾವನ್ನಪ್ಪಿದ್ದು, ಇದುವರೆಗೆ 9ಮಂದಿಯ ಶವ ಪತ್ತೆಯಾಗಿದೆ.ಸ್ಥಳೀಯರಾದ ಜಗನ್ನಾಥ ನಾಯ್ಕ ಹಾಗೂ ಲೋಕೇಶ ನಾಯ್ಕ ಅವರ ಪತ್ತೆಯಾಗಿ ತೀವ್ರ ಕಾರ್ಯಚರಣೆ ನಡೆಸಲಾಗುತ್ತಿದೆ. ಶಾಸಕ ಸತೀಶ್ ಸೈಲ್ ಅವರು ಹೆಚ್ಚಿನ ಮುತುವರ್ಜಿ ವಹಿಸಿ ಗೋವಾದ ಪಣಿಯಿಂದ ಡ್ರೇಜ್ಜರ್ ಯಂತ್ರವನ್ನ ತರೆಸಿ ಕಾರ್ಯಚರಣೆ ನಡೆಸಲಾಗುತ್ತಿತ್ತು. 13ದಿನ ನಡೆದ ಈ ಕಾರ್ಯಚರಣೆಯಲ್ಲಿ ಅರ್ಜುನ್ ಚಲಿಸುತ್ತಿದ್ದ ಲಾರಿ ಹಾಗೂ ಆತನ ಶವ ಸೇರಿದಂತೆ ಕೆಲವೊಂದು ವಸ್ತುಗಳು ಹಾಗೂ ಮೂರು ದಿನಗಳ ಹಿಂದಷ್ಟೆ ಮನುಷ್ಯನ ಎರಡು ಮೂಳೆಗಳು ಪತ್ತೆಯಾಗಿದೆ.
ಸಿಕ್ಕಿರುವ ಈ ಎರಡು ಮೂಳೆಯನ್ನ ಈಗಾಗಲೇ ಡಿಎನ್ಎ ತಪಾಸಣೆಗಾಗಿ ಕಳುಹಿಸಿಸಲಾಗಿದೆ. ಅದರ ವರದಿ ಇಂದು ಸಂಜೆ ಇಲ್ಲವೆ ನಾಳೆ ಬರುವ ನಿರೀಕ್ಷೆ ಇದೆ.ಇದರ ನಡುವೆ ಗಂಗಾವಳಿ ನದಿಯಲ್ಲಿನ ನೀರಿನ ಮಟ್ಟ ತುಂಬಾ ಇಳಿಮುಖವಾದ ಕಾರಣ ನದಿಯಲ್ಲಿ ಕಳೆದ 13 ದಿನಗಳಿಂದ ಡ್ರೆಜ್ಜರ್ ಯಂತ್ರದ ಮೂಲಕ ನಡೆಸಲಾಗುತ್ತಿದ್ದ ಕಾರ್ಯಚರಣೆಯನ್ನ ಬಂದ್ ಮಾಡಲಾಗಿದೆ.
ನದಿ ಪಕ್ಕದಲ್ಲಿ ಹಿಟಾಚಿಯಿಂದ ಕಾರ್ಯಚರಣೆ
ಗುಡ್ಡಕುಸಿತ ಉಂಟಾಗಿ ಹೆದ್ದಾರಿ ಪಕ್ಕದಲ್ಲಿದ್ದ ಲಕ್ಷ್ಮಣ ನಾಯ್ಕ ಹೊಟೇಲ್ ಹಾಗೂ ಮನೆ ಇದ್ದ ಕೆಳ ಭಾಗದ ನದಿಯಲ್ಲಿ ಕಳೆದ ಮೂರು ದಿನಗಳ ಹಿಂದೆ ಎರಡು ಮೂಳೆ ಪತ್ತೆಯಾಗಿದೆ. ಹೀಗಾಗಿ ಲಕ್ಷ್ಮಣ ನಾಯ್ಕ ಕುಟುಂಬಸ್ಥರು ಸಹ ಹೊಟೇಲ್ ಇದ್ದ ಸ್ಥಳದಲ್ಲೇ ಕಾರ್ಯಚರಣೆ ಮಾಡುವಂತೆ ಸಹ ಒತ್ತಾಯಿಸಿದ್ದರು. ಆ ಕಾರಣಕ್ಕೆ ಐಆರ್ಬಿ ಕಂಪನಿಯ ಹಿಟಾಚಿಯಿಂದ ಲಕ್ಷ್ಮಣ ನಾಯ್ಕ ಹೊಟೇಲೆ ಇರುವ ಸ್ಥಳದಲ್ಲಿ ಕಾರ್ಯಚರಣೆ ನಡೆಸಲಾಗುತ್ತಿದ್ದು, ಈ ವೇಳೆ ಹೊಟೇಲ್ನಲ್ಲಿದ್ದ ಕೆಲವು ಪಾತ್ರೆಗಳು ಹಾಗೂ ನೆಲಕ್ಕೆ ಅಳವಡಿಸಲಾಗಿದ್ದ ಗ್ರೇನೆಟ್ ಕಲ್ಲುಗಳು ಸಹ ಪತ್ತೆಯಾಗಿದ್ದು, ಮನೆ ಇರುವ ಸ್ಥಳದ ಕುರುಹು ಪತ್ತೆಯಾಗಿದಂತಾಗಿದೆ. ಅದೆ ಸ್ಥಳದಲ್ಲಿಯೇ ಹಿಟಾಚಿ ಮೂಲಕ ಕಾರ್ಯಚರಣೆ ಮುಂದುವರೆಸಲಾಗಿದೆ.
ಗಮನಿಸಿ