ಸುದ್ದಿಬಿಂದು ಬ್ಯೂರೋ
ಹೊನ್ನಾವರ :ವಸತಿ ನಿಲಯದಲ್ಲಿನ ಮಹಿಳೆಗೆ ಅದೇ ಶಾಲೆಯ ವಾರ್ಡನ್ ಲೈಂಗಿಕ ಕಿರುಕುಳ ನೀಡುತ್ತಾರೆ ಎನ್ನವ ಮಹಿಳೆಯ ಆರೋಪದ ವಿಚಾರಕ್ಕೆ ಸಂಬಂಧಿಸಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಅವರು ಮಹಿಳೆಯರಿಗೆ ಗೌರವ ಕೊಡ ಯಾವುದೇ ವ್ಯಕ್ತಿ ಇದ್ದರು ಅಂತವರ ವಿರುದ್ಧ ನಿಷ್ಠುರ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಉತ್ತರಕನ್ನಡ ಜಿಲ್ಲೆಯ ಕುಮಟಾದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಮಹಿಳಾ ಸಿಬ್ಬಂದಿ ಓರ್ವಳಿಗೆ ಅಲ್ಲಿನ ವಾರ್ಡನ್ ಲೈಂಗಿಕ ಕಿರುಕುಳ ನೀಡುತ್ತಿರುವ ಬಗ್ಗೆ ಮಹಿಳೆ ಸ್ಥಳೀಯ ಜನಪ್ರತಿನಿಧಿ ಹಾಗೂ ಮಹಿಳಾ ಸಾಂತ್ವಾನ ಕೇಂದ್ರಕ್ಕೆ ದೂರು ನೀಡಿದ ಬಳಿಕ ಮಾಧ್ಯಮಗಳ ಎದುರು ವಾರ್ಡನ್ನಿಂದ ತನಗಾಗುತ್ತಿರುವ ಲೈಂಗಿಕ ಕಿರುಕುಳದ ಬಗ್ಗೆ ತನ್ನಗೆ ರಕ್ಷಣೆ ಬೇಕು ಎಂದು ಮಾಧ್ಯಮದ ಎದುರು ಕಣ್ಣೀರು ಹಾಕಿದ್ದಳು.
ಅದೆ ವಿವಾರವಾಗಿ ಇಂದು ಹೊನ್ನಾವರವಲ್ಲಿ ಸಚಿವ ಮಂಕಾಳು ವೈದ್ಯವರನ್ನ ಮಾಧ್ಯಮ ವರದಿಗಾರು ಘಟನೆ ಕುರಿತಾಗಿ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಸಚಿವರು ಮಾಧ್ಯಮದಲ್ಲಿ ಸುದ್ದಿ ಬಂದ ಬಳಿಕ ವಿಚಾರ ಗೊತ್ತಾಗಿದೆ.ಈಗಾಗಲೇ ಜಿಲ್ಲಾಧಿಕಾರಿ ಹಾಗೂ ಸಿ ಓ ಅವರಿಗೆ ತನಿಖೆ ಮಾಡುವಂತೆ ಸೂಚಿಸಲಾಗಿದೆ. ಘಟನೆಯಲ್ಲಿ ಸತ್ಯಾಂಶ ಕಂಡುಬಂದಲ್ಲಿ ಅಂತ ಅವರನ್ನ ತಕ್ಷಣದಲ್ಲಿ ಕ್ರಮ ಜರುಗಿಸಲಾಗುವುದು.
ಮಹಿಳೆಯರಿಗೆ ಕಿರುಕುಳ ನೀಡುವಂತವರು ಯಾವತ್ತ ಇರಬಾರದು.ಯಾವ ಅಧಿಕಾರಿಯಾಗಲಿ, ಜನಪ್ರತಿನಿಧಿಯಾಗಲಿ ಅಥವಾ ಜನಸಾಮಾನ್ಯರೆ ಆಗಿದ್ದರು ಅಂತಹವರ ವಿರುದ್ದ ಮುಲ್ಲಾಜಿಲ್ಲದೆ ಕ್ರಮ ಜರುಗಿಸುತ್ತೇವೆ.ಮುನಿರತ್ನಗೆ ಬಿಟ್ಟಿಲ್ಲ ಇವರು ಯಾರ್ರೀ.ಎನ್ನುವ ಮೂಲಕ ಲೈಂಗಿಕ ಕಿರುಕಿಳ ನೀಡಿದ ವಾರ್ಡ್ ವಿರುದ್ಧ ತನಿಖೆ ಚುಟುಕುಗೊಳಿಸುವಂತೆ ಈ ಮೂಲಕ ಸಚಿವರು ಸೂಚಿಸಿದ್ದಾರೆ.
ಇದನ್ನೂ ಓದಿ