ಕಾರವಾರ : ಶಿರೂರು ಗುಡ್ಡಕುಸಿತ‌ ಘಟನೆಯಲ್ಲಿ ನಾಪತ್ತೆ ಯಾಗಿರುವ ಕೇರಳ ಮೂಲದ ಭಾರತ್ ಬೆಂಜ್ ಲಾರಿ‌ ಗಂಗಾವಳಿ ನದಿಯ 20 ಅಡಿ ಆಳದಲ್ಲಿ ಇರುವ ಬಗ್ಗೆ ಬಲ್ಲ ಮೂಲಗಳಿಂದ ತಿಳಿದಿ ಬಂದಿದ್ದು,‌ಜಿಲ್ಲಾಡಳಿತ ಖಾತ್ರಿ ಪಡಿಸಬೇಕಿದೆ.

ಇಂದು ಬೆಳಿಗ್ಗೆಯಿಂದ ನದಿಯಲ್ಲಿ ನಾಪತ್ತೆಯಾಗಿರುವ ನಾಲ್ವರು ಹಾಗೂ ಲಾರಿಗಾಗಿ ತೀವ್ರ ಶೋಧ ನಡೆಸಲಾಗಿತ್ತು. ದ್ರೋಣ್ ಹಾಗೂ ಹೆಲಿಕಾಪ್ಟರ್ ‌ಮೂಲಕ ಕೂಡ ಕಾರ್ಯಚರಣೆ ನಡೆಸಲಾಗಿತ್ತು. ಆದರೆ ಸದ್ಯ ‌ಘಟನೆಯಲ್ಲಿ ಸಿಲುಕಿರುವ ಲಾರಿ ನದಿಯಲ್ಲಿ‌ ಹೂತು ಹೋಗಿದೆ ಎನ್ನಲಾಗಿದೆ. ಗಂಗಾವಳಿ ನದಿ‌ ನೀರಿನ ಹರಿವು ವೇಗವಾಗಿರುವದರಿಂದ ಲಾರಿ ಇದ್ದ ಸ್ಥಳಕ್ಕೆ ಹೋಗಲು ನೌಕಾ ಸೇನಾ ಮುಳುಗು ತಜ್ಞರಿಗೆ ಸಾಧ್ಯವಾಗುತ್ತಿಲ್ಲ.

ಸದ್ಯದ ಪರಿಸ್ಥಿತಿಯಲ್ಲಿ ಗಂಗಾವಳಿ ನದಿಯಲ್ಲಿ ನೀರಿನ ವೇಗ ಕಡಿಮೆ ಆದ ಹೊರತು ಯಾವುದೆ ಕಾರಣಕ್ಕೂ ಲಾರಿ ಮೇಲೆತ್ತಲು ಅಸಾಧ್ಯ ವಾಗದಂತಿದೆ. ಬೆಳಿಗ್ಗೆಯಿಂದ ಕಾರ್ಯಾಚರಣೆ ನಡೆಸಿದ ನೌಕಾಪಡೆಯ ಎಕ್ಸಪರ್ಟ್ ಗಳು. ವಾಪಾಸ್ ಆಗಿದ್ದಾರೆ ಎನ್ನಲಾಗಿದೆ.