suddibindu.in
ಶಿರಸಿ:ಗಾಂಜಾ ಸೇವನೆ ಮಾಡಿ ನಶೆಯಲ್ಲಿ ತೇಲಾಡುತ್ತಿದ್ದ ಇಬ್ಬರನ್ನ ನಗರ ಠಾಣೆ ಪೊಲೀಸರು ಬಂಧಿಸಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಶಿರಸಿ ನಗರದ ಮುರುಡೇಶ್ವರ ಕಾಲೋನಿ ಬಳಿ ನಡೆದಿದೆ.
ನಗರದ ಮಾರುತಿಗಲ್ಲಿ ನಿವಾಸಿಯಾಗಿರುವ ನಾಗರಾಜ ರಾಜು ಹರಿಜನ, ವಿನಯ ಗಣಪತಿ ಹರಿಜನ ಕೊರ್ಟ ರಸ್ತೆ ದೇವಿಕೆರೆ ಶಿರಸಿ ಇವರಿಬ್ಬರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇಬ್ಬರನ್ನ ವಶಕ್ಕೆ ಪಡೆದ ಪೊಲೀಸರು ಅವರನ್ನ ವೈದ್ಯಕೀಯ ಪರೀಕ್ಣೆಗೆ ಒಳಪಡಿಸಿದ್ದು ಈ ವೇಳೆ ಅವರು ಮಾದಕ ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದೆ. ಇಬ್ಬರ ವಿರುದ್ದವೂ ಶಿರಸಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ
- School holiday/ ಭಾರೀ ಮಳೆ : ಉತ್ತರಕನ್ನಡ ಜಿಲ್ಲೆಯ 2ತಾಲೂಕಿನಲ್ಲಿ ಶಾಲೆಗಳಿಗೆ ರಜೆ
- School holiday/ಭಾರೀ ಮಳೆ ಆತಂಕ : ಜು.23ಕ್ಕೆ ಶಾಲೆಗಳಿಗೆ ರಜೆ ಘೋಷಣೆ
- ಸಾರಿಗೆ ಬಸ್ ಪಲ್ಟಿ: ವೃದ್ಧೆ ಸಾವು, 20ಕ್ಕೂ ಹೆಚ್ಚು ಮಂದಿಗೆ ಗಾಯ : ಮೂವರು ಗಂಭೀರ
ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಎನ್ ವಿಷ್ಣುವರ್ಧನ್, ಹೆಚ್ಚುವರಿ ಪೊಲೀಸ್ ಅಧಿಕ್ಷಕರಾದ ಸಿ.ಟಿ ಜಯಕುಮಾರ್, ಶಿರಸಿ ಉಪ ವಿಭಾಗದ ಡಿಎಸ್ಪಿ ಗಣೇಶ ಕೆಎಲ್,ಶಿರಸಿ ವೃತ್ತ ನಿರೀಕ್ಷಕ ಶಶಿಕಾಂತ ವರ್ಮಾ ರವರ ಮಾರ್ಗದರ್ಶನದಲ್ಲಿ ಶಿರಸಿ ನಗರ ಠಾಣೆಯ ಪಿಎಸ್ಐ ನಾಗಪ್ಪ ಬಿ ನೇತೃತ್ವದಲ್ಲಿ ಸಿಬ್ಬಂದಿಗಳಾದ ಹನುಮಂತ ಕಬಾಡಿ,ಪ್ರಶಾಂತ ಪಾವಸ್ಕರ್,ನಾಗಪ್ಪ ಲಮಾಣಿ,ಸದ್ದಾಂ ಹುಸೇನ್,ಮಂಜುನಾಥ ಕಾಶಿಕೋವಿ ಪ್ರವೀಣ್ ಎನ್ ರವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.




