suddibindu.in
ಕಾರವಾರ: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy murder case) ಬಂಧನಕ್ಕೆ ಒಳಗಾಗಿರುವ ನಟ ದರ್ಶನ (actor Darshan ಪೊಲೀಸ ತನಿಖೆ ಎದುರಿಸುತ್ತಿದ್ದು ಈ ನಡುವೆ ಅವರ ಕುಟುಂಬಸ್ಥರು ಸಂಕಷ್ಟ ಪರಿಹಾರಕ್ಕಾಗಿ ದೇವರ ಮೊರೆ ಹೋಗಿದ್ದಾರೆ.ದರ್ಶನ ಅವರ ಸಹೋದರಿ ದಿವ್ಯಾ ಅವರ ಪತಿ ಮಂಜುನಾಥ ಉತ್ತರ ಕನ್ನಡದ ಕೈಗಾದಲ್ಲಿ ವಿಶೇಷ ಪೂಜೆ (puje) ಸಲ್ಲಿಸಿದ್ದಾರೆ.
ಕೈಗಾದ ಟೌನ್ಶಿಪ್ನಲ್ಲಿರು kaiga township ರಾಮಲಿಂಗೇಶ್ವರ, ಶನೇಶ್ವರ ದೇವಸ್ಥಾನದಲ್ಲಿ ದರ್ಶನ್ ಹೆಸರಿನಲ್ಲಿ ನವಗ್ರಹ ಪೂಜೆ, ಶನಿಶಾಂತಿ ಪೂಜೆ ಹಾಗೂ ವಿಶೇಷ ಹೂವಿನ ಅಲಂಕಾರ ಪೂಜೆ ನೆರವೇರಿಸಿದ್ದಾರೆ. ದರ್ಶನ್ ಆದಷ್ಟು ಬೇಗ ಆರೋಪ ಮುಕ್ತರಾಗಿ ಹೊರಬರಲಿ ಎಂದು ದೇವರಲ್ಲಿ ಬೇಡಿಕೊಂಡಿದ್ದಾರೆ.
ಇದನ್ನೂ ಓದಿ
- ಕಾಸರಗೋಡು ಬಳಿ ಪ್ಲೈವುಡ್ ಕಾರ್ಖಾನೆಯಲ್ಲಿ ಭಾರೀ ಸ್ಫೋಟ – ಓರ್ವ ಕಾರ್ಮಿಕ ಸಾವು, ಹಲವರಿಗೆ ಗಾಯ
- ಕರ್ನಾಟಕದಲ್ಲಿ ಬಿಜೆಪಿ ಹೊಸ ರಾಜಕೀಯ ಸಮೀಕರಣ: ಕುಮಾರಸ್ವಾಮಿ ಸುಪ್ರಿಂ
- ಹಳಿಯಾಳದಲ್ಲಿ ಕಬ್ಬು ಬೆಳೆಗಾರರ ಬೃಹತ್ ಪ್ರತಿಭಟನೆ — ಹೆದ್ದಾರಿ ತಡೆದು ಆಕ್ರೋಶ
ಬಳಿಕ ಮಾತನಾಡಿದ ಸಹೋದರಿಯ ಪತಿ ಮಂಜುನಾಥ ಘಟನೆ ನಡೆಸಿರುವುದು ಮನಸ್ಸಿಗೆ ನೋವಾಗಿದೆ. ದರ್ಶನ್ ಅವರು ತಮ್ಮ ಸಂಪಾದನೆ ಮಾಡಿರುವ ಕೋಟ್ಯಾಂತರ ರೂಪಾಯಿ ಹಣದಲ್ಲಿ ಮುಕ್ಕಾಲು ಭಾಗವನ್ನು ದಾನ, ಧರ್ಮ ಮಾಡಿದ್ದಾರೆ. ಅವರಷ್ಟಕ್ಕೆ ಅವರು ಸುಮ್ಮನಿದ್ದರೂ ಇರೋದಕ್ಕೆ ಕೊಡುವುದಿಲ್ಲ. ದರ್ಶನ ಅವರು ಜೀವನದಲ್ಲಿ ಮಾಡಿರುವ ಒಳ್ಳೆಯ ಕೆಲಸದಿಂದ, ಒಳ್ಳೆಯ ಕೆಲಸ ದರ್ಶನ್ ಅವರನ್ನು ಕಾಪಾಡುತ್ತಿದೆ. ದರ್ಶನ ಅವರಿಗೆ ಒಳ್ಳೆಯ ಗುಣ ಇದೆ ಎಂದಿದ್ದಾರೆ.






