suddibindu.in
ಕಾರವಾರ: ತಾಲೂಕಿನ ಅಮದಳ್ಳಿಯಲ್ಲಿ ರಾಷ್ಟ್ರೀಯ ಹೆದ್ದಾರಿ 66ರಕ್ಕೆ ಹೊಂದಿಕೊಂಡಿರುವ ಗಣಪತಿ ದೇವಸ್ಥಾನದಲ್ಲಿ ಭಾರೀ ಪ್ರಮಾಣದಲ್ಲಿ ಕಳ್ಳತನವಾಗಿದ್ದು, ದೇವರ ಬೆಳ್ಳಿ ಮುಖವಾಡವನ್ನೆ ಕಳ್ಳತನ ಮಾಡಲಾಗಿದೆ.
ದೇವಸ್ಥಾನದ ಬೀಗ ಮುರಿದು ಒಳನುಗ್ಗಿದ ಕಳ್ಳರು ಗಣಪತಿ ದೇವರಿಗೆ ಹಾಕಲಾಗಿದ್ದ ಬೆಳ್ಳಿಯ ಮುಖವಾಡವನ್ನೆ ಕದ್ದು ಪರಾರಿಯಾಗಿದ್ದಾರೆ. ಕಳ್ಳತನವಾಗಿರುವ ಗಣಪತಿ ದೇವರ ಮುಖವಾಡ ಸುಮಾರು 6ಕೆಜಿ ಬೆಳ್ಳಿಯ ಮುಖವಾಡವಾಗಿದೆ ಎನ್ನಲಾಗಿದೆ.ಅಂದಾಜು 6ರಿಂದ 7ಲಕ್ಷ ಬೆಲೆಬಾಳುವ ಬೆಳ್ಳಿಯ ಮುಖವಾಡ ಎನ್ನಲಾಗಿದೆ.
ಇದನ್ನೂ ಓದಿ
- ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದ ಕಾರು; ಕೆಪಿಸಿ ಉದ್ಯೋಗಿ ಸ್ಥಳದಲ್ಲೇ ಸಾವು
- ಉಪಸಭಾಧ್ಯಕ್ಷ ಸ್ಥಾನಕ್ಕೆ ಮಂಕಾಳ ವೈದ್ಯ ಹೆಸರು ಸೂಚಿಸಿ ಪ್ರಸ್ತಾವನೆ ಸಲ್ಲಿಸಿದ ಸಿಎಂ ಡಿಕೆಶಿ
- ಹೊನ್ನಪ್ಪ ನಾಯಕರಿಗೆ ಒಲಿಯುತ್ತಾ ನಿಗಮ ಮಂಡಳಿ ಸ್ಥಾನ?
ಈಗಾಗಲೇ ಸುದ್ದಿ ತಿಳಿದ ಅಂಕೋಲಾ ಪೊಲಿಸರು ಹಾಗೂ ಕಾರವಾರದಿಂದ ಬೆರಳಚ್ಚು ತಜ್ಞನರು ಕೂಡ ಘಟನಾ ಸ್ಥಳಕ್ಕೆ ಆಗಮಿಸಿದ್ದು ಪರಿಶೀಲನೆ ನಡೆಸುತ್ತಿದ್ದಾರೆ.ಈ ಬಗ್ಗೆ ಕಾರವಾರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




