ಹುಬ್ಬಳ್ಳಿ: ಇತ್ತೀಚೆಗೆ ಕೊಡಗು ಜಿಲ್ಲೆಯ ಸೋಮವಾರ ಪೇಟೆಯ ಸೂರ್ಲಬ್ಬಿಯಲ್ಲಿ ನಡೆದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಕು.ಮೀನಾಳ ಕೊಲೆಯನ್ನು ಖಂಡಿಸಿ ಧಾರವಾಡ ಜಿಲ್ಲಾ ಅಹಿಂದ ಸಂಘಟನೆಯ ಆಶ್ರಯದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.

ನಗರದ ಕಿತ್ತೂರು ಚೆನ್ನಮ್ಮ ವೃತ್ತದಿಂದ ತಹಸೀಲ್ದಾರ್ ಕಚೇರಿ ವರೆಗೆ ಹೊರಟ ಪ್ರತಿಭಟನಾ ಮೆರವಣಿಗೆಯು ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ರಸ್ತೆ ಮಧ್ಯ ಕುಳಿತು ಹತ್ಯೆಯನ್ನು ಖಂಡಿಸಿ ತೀವ್ರ ಆಕ್ರೋಶ ವ್ಯಕ್ತಪಡಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರುಗಳು ಏಳಿ ಎದ್ದೇಳಿ ಹಿಂದು ಬಂಧುಗಳೇ ನತದೃಷ್ಟ ಮೀನಾ ಮದುವೆ ಮುಂದೂಡಿದಕ್ಕೆ ಇಂಥ ಕ್ರೂರ ಸಾವೆ.? ಈಗತಾನೆ ಎಸ್ ಎಸ್ ಎಲ್ ಸಿ ಯಲ್ಲಿ ಪಾಸಾದ ಸಂತೋಷದಲ್ಲಿದ್ದ ಮೀನಾಳ ಕೊಲೆ ಖಂಡಿಸಿದರಲ್ಲದೆ ಅಪ್ರಾಪ್ತ ಯುವತಿಯ ಕತ್ತು ಕತ್ತರಿಸಿ ಹೀನವಾಗಿ ಕೊಲೆಗೈದ ಪಾಪಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಅಕ್ರೋಶ ವ್ಯಕ್ತಪಡಿಸಿದರು,

ಕೊಲೆ ಯಾರೆ ಮಾಡಿರಲಿ ತಪ್ಪು ತಪ್ಪೇ ಅಮಾಯಕ 15 ವರ್ಷದ ಬಾಲಕಿ ಮೀನಾ ಎಂಬ ವಿದ್ಯಾರ್ಥಿನಿಯನ್ನು ಪ್ರಕಾಶ್ ಎಂಬ ಯುವಕ ಕ್ರೂರವಾಗಿ ಕೊಲೆ ಮಾಡಿ ರುಂಡವನ್ನು ತೆಗೆದುಕೊಂಡು ಬಿಸಾಡಿ ಹೋಗಿದ್ದಾನೆ. ಅವನಿಗೆ ರಾಜ್ಯ ಸರ್ಕಾರವು ಕಠಿಣವಾದ ಉಗ್ರ ಶಿಕ್ಷೆಯನ್ನು ವಿಧಿಸುವಂತೆ ನೋಡಿಕೊಳ್ಳಬೇಕು ಅಥವಾ ಎನ್ ಕೌಂಟರ್ ಮಾಡಬೇಕು ಮತ್ತು ಮಿನಾಳ ಕುಟುಂಬದ ಸದಸ್ಯರುಗಳಿಗೆ ಸೂಕ್ತ ಬಂದೋಬಸ್ತು ಒದಗಿಸಬೇಕೆಂದು ರಾಜ ಸರ್ಕಾರಕ್ಕೆ ಒತ್ತಾಯಿಸಿದರಲ್ಲದೆ ಈ ಕುರಿತು ಇಲ್ಲಿವರೆಗೂ ಧ್ವನಿ ಯತ್ತದೆ ಬಿಜೆಪಿ ಹಾಗೂ ಹಿಂದು ಪರ ಸಂಘಟನೆಗಳ ಧೋರಣೆಯನ್ನು ಕಟುವಾಗಿ ಟೀಕಿಸಿದರು.

ಈ ಸಂದರ್ಭದಲ್ಲಿ ಅಹಿಂದ ಸಂಘಟನೆಯ ಜಿಲ್ಲಾಧ್ಯಕ್ಷ ಮುತ್ತಣ್ಣ ಶಿವಳ್ಳಿ ಮಹಾನಗರ ಜಿಲ್ಲಾಧ್ಯಕ್ಷ ಬಾಬಾಜಾನ ಮುಧೋಳ ಸಾಮಾಜಿಕ ಹೋರಾಟಗಾರ ರಾಜಶೇಖರ್ ಮೆಣಸಿನಕಾಯಿ ಸೇರಿದಂತೆ ಮುಂತಾದ ನೂರಾರು ಕಾರ್ಯಕರ್ತ ಬಂಧುಗಳು ಉಪಸ್ಥಿತರಿದ್ದರು.