suddibindu.in
Kumta:ಕುಮಟಾ : ಕಳೆದ ವರ್ಷ 2023ರಲ್ಲಿ ನಡೆದ ವಿಧಾನಸಭಾ ಚುನಾವಣಾ ವೇಳೆ ಪಕ್ಷ‌ ವಿರೋಧಿ ಚಟುವಟಿಕೆ ಮಾಡಿದ್ದಾರೆನ್ನಲಾದ‌ ಆರೋಪದ ಮೇಲೆ ಮೂವರನ್ನ ಕಾಂಗ್ರೆಸ್ ನಿಂದ ಅಮಾನತು ಮಾಡಲಾಗಿತ್ತು. ಆದರೆ ಇದೀಗ ಆ ಮೂವರ ಅಮಾನತ್ತು ಆದೇಶವನ್ನ ಕೆಪಿಸಿಸಿಯಿಂದ ವಾಪಸ್ ಪಡೆಯಲಾಗಿದೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕುಮಟಾ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಶಾಸಕಿ ಶಾರದಾ ಶೆಟ್ಟಿ ಅವರಿಗೆ ಟಿಕೆಟ್ ಕೈ ತಪ್ಪಿರುವ ಕಾರಣ ಅವರು ತಮ್ಮ ರಾಜಕೀಯ‌ ನಿವೃತ್ತಿ ಪಡೆದಿದ್ದರು, ಕಾಂಗ್ರೆಸ್ ‌ನಿಂದ ಸ್ಪರ್ಧೆ ‌ಮಾಡಿದ ಅಭ್ಯರ್ಥಿ ಸೋತ್ತಿದ್ದರು‌. ಇದಾದ ಬಳಿಕ ತಮ್ಮ ಸೋಲಿಗೆ ರವಿಕುಮಾ‌ ಮೋಹನ್ ಶೆಟ್ಟಿ, ಸಂದೇಶ ಶೆಟ್ಟಿ ಹಾಗೂ ಸಂತೋಷ ನಾಯ್ಕ ಬರ್ಗಿ ಎಂಬುವವರನ್ನ ಪಕ್ಷದಿಂದ ಉಚ್ಚಾಟನೆ ಮಾಡಲಾಗಿತ್ತು.

ಇದನ್ನೂ ಓದಿ

ಇದೀಗ ಲೋಕಸಭಾ ಚುನಾವಣಾ ಸಮಯದಲ್ಲಿ ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಅವರು ಕಾಂಗ್ರೆಸ್‌ನಲ್ಲಿಯೇ ಮುಂದುವರೆದ್ದು, ಇದರ ಬೆನ್ನಲೆ ಇದೀಗ ಈ ಹಿಂದೆ ಅಮಾನತು ‌ಮಾಡಲಾಗಿದ್ದ‌ ಮೂವರ. ಅಮಾನತು ಆದೇಶವನ್ನ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ ಅವರ ಸೂಚನೆ ಮೇಲೆ‌ ಈ ಹಿಂದೆ ಮಾಡಿರುವ ಅಮಾನತು ಆದೇಶ ಹಿಂದಕ್ಕೆ ಪಡೆದಿದ್ದು,‌ಈ ಕ್ಷಣದಿಂದ ಪಕ್ಷದ ಸಂಘಟನೆಯಲ್ಲಿ ಸಕ್ರಿಯವಾಗುವಂತೆ ಲಿಖಿತ ಪತ್ರದಲ್ಲಿ ಉಲ್ಲೇಖ ಮಾಡಲಾಗಿದೆ.