ಕುಮಟಾ : ಇಂದು ಕುಮಟಾದ ಮಣಕಿ ಮೈದಾನದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಆಗಮಿಸಬೇಕಿತ್ತು. ಆದರೆ ಪಕ್ಕದ ಶಿವಮೊಗ್ಗ ಜಿಲ್ಲೆಯಲ್ಲಿ ದಿನ ಪೂರ್ತಿ ಸಿ ಎಂ ವಿವಿಧ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದು,ಪಕ್ಕದ ಉತ್ತರಕನ್ನಡಕ್ಕೆ ಬರಲು ಸಿ ಎಂ ಹಿಂದೇಟು ಹಾಕಿರುವುದು ಜಿಲ್ಲೆಯ ಜನರ ಅಸಮಧಾನಕ್ಕೆ ಕಾರಣವಾಗಿದೆ. ಶಿವಮೊಗ್ಗ ಜಿಲ್ಲೆಯ ಯಾವೇಲ್ಲಾ ಕಾರ್ಯಕಮದಲ್ಲಿ ಸಿ ಎಂ ಪಾಲ್ಗೊಳ್ಳಲಿದ್ದಾರೆ ಎನ್ನುವ ವೇಳಾ ಪಟ್ಟಿ ಇಲ್ಲಿದೆ.

ಯಾವ್ಯಾವ ಕಾರ್ಯಕ್ರಮಗಳಲ್ಲಿ ಸಿ ಎಂ ಭಾಗಿ..?

ಇಂದು ಬೆಳಗ್ಗೆ 11.20 ಕ್ಕೆ ಶಿಕಾರಿಪುರ ಹೆಲಿಪ್ಯಾಡ್ ಆಗಮನ ಬಳಿಕ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಆಸ್ಪತ್ರೆ, ನೂತನ ಸರ್ಕಾರಿ ಬಸ್ ನಿಲ್ದಾಣದ ಉದ್ಘಾಟನೆ ಮಾಡುವರು. ಅಲ್ಲಿಂದ ಮಧ್ಯಾಹ್ನ 12 ಕ್ಕೆ ಶಿಕಾರಿಪುರದ ಸರ್ಕಾರಿ ಡಿಪೋ ಉದ್ಘಾಟಿಸುವರು.12.30ಕ್ಕೆ ರಸ್ತೆಯ ಮೂಲಕ ಉಡುತಡಿ ,ಉಡುಗಣಿಗೆ ತೆರಳಿ ಶಿವಶರಣೆ ಅಕ್ಕಮಹಾದೇವಿ ಪುತ್ಥಳಿ ಅನಾವರಣ ಹಾಗೂ ಅಕ್ಷರಧಾಮ ಮಾದರಿಯ ಯಾತ್ರಾ ಸ್ಥಳವನ್ನ ಉದ್ಘಾಟಿಸಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ/ಶಂಕುಸ್ಥಾಪನೆ ಮಾಡಲಿದ್ದಾರೆ.

ಮಧ್ಯಾಹ್ನ 2.15 ಕ್ಕೆ ಶಿಕಾರಿಪುರರಿಂದ ಹೆಲಿಕಾಪ್ಟರ್ ಮೂಲಕ ಹೊರಟು ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕು, ಎಚ್. ಕಡದಕಟ್ಟೆಗೆ ಪ್ರಯಾಣ ಎಂದು ಮುಖ್ಯಮಂತ್ರಿ ವಿಶೇಷ ಕರ್ತವ್ಯಾಧಿಕಾರಿ ತಿಳಿಸಿದ್ದಾರೆ.

ಸಿ ಎಂ ಅವರು ಕುಮಟಾಕ್ಕೆ ಬರಲಿದ್ದಾರೆಂದು ಸರಕಾರದ ಲಕ್ಷಾಂತರ ರೂಪಾಯಿ ಹಣ ಖರ್ಚು ಮಾಡಿ ಸಿದ್ದತೆ ಮಾಡಿಕೊಳ್ಳಲಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಅಷ್ಟೊಂದು ಕಾರ್ಯಕ್ರಮ ಇದ್ದರೂ ಸಹ ಕುಮಟಾದಲ್ಲಿ ಸಿ ಎಂ ಬರಲಿದ್ದಾರೆ ಎಂದು ಈ ರೀತಿ ಸಿದ್ದತೆ ಮಾಡಿಕೊಂಡಿದ್ದು ಯಾಕೆ ಎನ್ನುವ ಪ್ರಶ್ನೆ ಎದುರಾಗಿದೆ.

ಸರಕಾರಿ ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳನ್ನ ಕರೆತರುವ ಪ್ರಯತ್ನ..!

ಇಂದು ಕುಮಟಾದಲ್ಲಿ ವಿವಿಧ ಯೋಜನೆಗಳಿಗೆ ಚಾಲನೆ ಹಾಗೂ ಫಲಾನುಭವಿಗಳಿಗೆ ಸೌಲಭ್ಯ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಆದರೆ ಈ ಕಾರ್ಯಕ್ರಮಕ್ಕೆ ಫಲಾನುಭವಿಗಳನ್ನ ಸೇರಿಸುವುದರ ಜೊತಗೆ ಮೈದಾನದಲ್ಲಿ ಹಾಕಲಾಗಿರುವ ಕುರ್ಚಿಯನ್ನ ಭರ್ತಿ ಮಾಡಿ ಸಿಎಂ ಎದುರು ಒಂದು ರೀತಿಯಲ್ಲಿ ಪಕ್ಷದ ಬಲ ಪ್ರದರ್ಶಕ್ಕೆ ಮುಂದಾಗಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ. ಸರಕಾರಿ ಕಾರ್ಯಕ್ರಮವನ್ನ ಒಂದು ಪಕ್ಷದ ಕಾರ್ಯಕ್ರಮವಾಗಿ ಮಾರ್ಪಾಡು ಮಾಡಲು ಬಿಜೆಪಿ ಮುಂದಾಗತ್ತಾ ಇದೆಯಾ ಎನ್ನುವ ಪ್ರಶ್ನೆ ಎದುರಾಗಿದೆ..

ಫೇ ಸಿಎಂ ಅಭಿಯಾನದಿಂದ ಮುನಿಸಿಕೊಂಡರಾ..? ಬೊಮ್ಮಾಯಿ

ಇತ್ತಿಚೆಗೆ ಸಿ ಎಂ ಬಸವರಾಜ್ ಬೊಮ್ಮಾಯಿ ಅವರು ಸಿದ್ದಾಪುರ ಹಾಗೂ ಬನವಾಸಿಗೆ ಆಗಮಿಸಿದ ಸಮಯದಲ್ಲಿ ಸಿ ಎಂ ಸಂಚರಿಸುವ ಮಾರ್ಗದಲ್ಲಿ ಫೇ ಸಿ ಎಂ ಪೋಸ್ಟ್ ಅಂಟಿಸುವ ಮೂಲಕ ಸಿ ಎಂ ಅವರಿಗೆ ಮುಜುಗರ ಆಗುವಂತೆ ಮಾಡಿದ್ದರು. ಇನ್ನೂ ಬನವಾಸಿಯಲ್ಲಿ ಕದಂಬೋತ್ಸವದ ವೇದಿಕೆಗೆ ಸಿ ಎಂ ಬಸವರಾಜ್ ಬೊಮ್ಮಾಯಿ ಪ್ರವೇಶಿಸುವ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಸಿ ಎಂ ಅವರ ಕಾರ ತಡೆದು ಕದಂಬೋತ್ಸವವನ್ನ ಒಂದು ಪಕ್ಷದ ಕಾರ್ಯಕ್ರಮವನ್ನಾಗಿ ಮಾಡಲಾಗಿದೆ ಎಂದು ಅಂದು ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ಹೊರಹಾಕಿದ್ದರು. ಇವೇಲ್ಲದರಿಂದ ಮುಜುಗರಕ್ಕೆ ಒಳಗಾಗಿದ್ದ ಸಿ ಎಂ ಕುಮಟಾ ಕಾರ್ಯಕ್ರಮಕ್ಕೆ ಬರಲು ಹಿಂದೇಟು ಹಾಕಿದ್ದಾರಾ ಸಿಎಂ ಎನ್ನುವ ಮಾತುಗಳು ಕೂಡ ಕೇಳಿ ಬರುತ್ತಿದೆ.