ಸುದ್ದಿಬಿಂದು ಬ್ಯೂರೋ
ಹೊನ್ನಾವರ: ತಾಲೂಕಾದ್ಯಂತ ಅರಣ್ಯವಾಸಿಗಳಿಗೆ ಅರಣ್ಯ ಸಿಬ್ಬಂದಿಗಳಿಂದ ಕಿರುಕುಳ, ದೌರ್ಜನ್ಯ ಜರಗುತ್ತಿರುವ ಘಟನೆಗಳನ್ನ ಅರಣ್ಯವಾಸಿಗಳು ದಾಖಲೆ(Forest Department)ಸಹಿತ ಹೋರಾಟಗಾರರ ವೇದಿಕೆಗೆ ಮಾಹಿತಿ ನೀಡಿದ್ದು, ಇಂತಹ ಅರಣ್ಯ ಸಿಬ್ಬಂದಿಗಳ ಕಾನೂನು ಬಾಹಿರ ಕೃತ್ಯವನ್ನ ತೀವೃವಾಗಿ ಖಂಡಿಸುವುದಾಗಿ ಅರಣ್ಯ ಹೋರಾಟಗಾರರ ವೇದಿಕೆ ಜಿಲ್ಲಾಧ್ಯಕ್ಷ ರವೀಂದ್ರನಾಥ್ ನಾಯ್ಕ ಎಚ್ಚರಿಸಿದ್ದಾರೆ.
ಅರಣ್ಯ ಹಕ್ಕು ಕಾಯಿದೆಯಲ್ಲಿ ಅರ್ಜಿ ಸಲ್ಲಿಸಿ, ವಿಚಾರಣೆ ಹಂತದ ಸಂದರ್ಭದಲ್ಲಿ ಅರಣ್ಯವಾಸಿಗಳಿಗೆ ನೋಟಿಸ್ ನೀಡದೇ, ದಾಖಲೆ ಪರಿಶಿಲಿಸದೇ, ಅವಕಾಶಗಳನ್ನ ನೀಡದೇ, ಏಕಾಎಕಿಯಾಗಿ ಅರಣ್ಯವಾಸಿಗಳ ಅತಿಕ್ರಮಣ ಕ್ಷೇತ್ರದಲ್ಲಿ ಅರಣ್ಯವಾಸಿಗಳು ಬೆಳೆಸಿರುವ ಗಿಡ ಮರಗಳನ್ನ ಕಡಿದು ದ್ವಂಸಗೊಳಿಸುತ್ತಿರುವ(forest encroachment clearance) ಅರಣ್ಯ ಸಿಬ್ಬಂದಿಗಳ ಕೃತ್ಯ ಖಂಡನಾರ್ಹ ಎಂದಿದ್ದಾರೆ.
ಅಸಮರ್ಪಕ ಜಿಪಿಎಸ್ (GPS) ಮಾನದಂಡದಡಿಯಲ್ಲಿ ಅರಣ್ಯವಾಸಿಗಳ ಸಾಗುವಳಿ ಕ್ಷೇತ್ರದ ಗಡಿಯನ್ನ ಅರಣ್ಯ ಸಿಬ್ಬಂದಿಗಳು ಗುರುತಿಸುತ್ತಿರುವುದು ಹಾಗೂ ಒಕ್ಕಲೆಬ್ಬಿಸುತ್ತಿರುವುದು ಅರಣ್ಯ ಹಕ್ಕು ಕಾಯಿದೆಗೆ (Forest Rights Act) ವ್ಯತಿರಿಕ್ತವಾಗಿರುತ್ತದೆ ಎಂದು ಅವರು ಹೇಳಿದರು.
ಹೊನ್ನಾವರ ತಾಲೂಕಿನ ಚಿಕ್ಕನಗೋಡ ಗ್ರಾಮ ಪಂಚಾಯತ್ ವ್ಯಾಪ್ತಿಯ ಈಶ್ವರ ಗೌಡ ಹಾಗೂ ಮಾಗೋಡ ಗ್ರಾಮ ಪಂಚಾಯಿತಿಯ ರಾಮ ಪಕ್ಯ ಮರಾಠಿ, ಮತ್ತು ಮಂಜುನಾಥ ನಾಯ್ಕ ಮೊದಲಾದ ಅರಣ್ಯವಾಸಿಗಳಿಗೆ ಅರಣ್ಯ ಸಿಬ್ಬಂದಿಗಳು(Forest Guards) ಕಿರುಕುಳ ನೀಡಿದ್ದಾರೆ.
ಆರ್ಥೀಕವಾಗಿ ಬಲಿಷ್ಟವಾಗಿರುವಂತಹ ಅರಣ್ಯವಾಸಿಗಳಿಗೆ ವಿಶೇಷ ಸೌಲಭ್ಯಗಳು ನೀಡುವ ಅರಣ್ಯ ಸಿಬ್ಬಂದಿಗಳು, ಬಡ ಅನಕ್ಷರಸ್ಥ ಅರಣ್ಯವಾಸಿಗಳಿಗೆ ವಿನಾಕಾರಣ ಕಾನೂನು ಬಾಹಿರವಾಗಿ ಕಿರುಕುಳ ಜರುಗಿಸುತ್ತಿರುವುದು ಖಂಡನಾರ್ಹ ಎಂದು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಅರಣ್ಯ ಸಿಬ್ಬಂದಿಗಳ ಕ್ರಮವನ್ನ ಟೀಕಿಸಿರುವುದಲ್ಲದೆ ಮುಂದಿನ ದಿನದಲ್ಲಿ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.