ಕುಮಟಾ : ಪಟ್ಟಣದ ಮೂರೂರು ಗುಡ್ಡದ ವಿಶ್ವಕರ್ಮ ಹಾಲ್ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನ ಬಂಧಿಸಿ ಗಾಂಜಾ ವಶಕ್ಕೆ ಪಡೆದು ಆರೋಪಿಗಳನ್ನ ಬಂಧಿಸಲಾಗಿದೆ.
ಪ್ರಕರಣದಲ್ಲಿ ಮೂರೂರು ಅಂಗಡಿಕೇರಿ ನಿವಾಸಿ ಪ್ರಸಾದ ಹೊಸಳ್ಳಿ (24) ಮತ್ತು ಕಲ್ಲಬ್ಬೆ ನಿವಾಸಿ ಸುನೀಲ ಸತ್ಯನಾರಾಯಣ ಮುಕ್ರಿ (30) ಬಂಧಿತ ಆರೋಪಿಗಳಾಗಿದ್ದಾರೆ.
ಬಂಧಿತ ಆರೋಪಿಗಳು ಮೂರೂರು ಗುಡ್ಡದ ವಿಶ್ವಕರ್ಮ ಸಮಾಜದ ಹಾಲ್ ಬಳಿ ನಿಂತಿರುವಾಗ ಪೊಲೀಸರು ದಾಳಿ ನಡೆಸಿದ್ದಾರೆ. ದಾಳಿಯ ವೇಳೆ ಬಂಧಿತರಿಂದ ಸುಮಾರು 10 ಸಾವಿರ ರೂ ಮೌಲ್ಯದ 230 ಗ್ರಾಂ ಗಾಂಜಾ ಪತ್ತೆಯಾಗಿದೆ.
ತಕ್ಷಣ ಆರೋಪಿಗಳನ್ನು ಬಂಧಿಸಿದ ಪೊಲೀಸರು ಗಾಂಜಾವನ್ನು ವಶ ಪಡಿಸಿಕೊಂಡಿದ್ದಾರೆ. ಆರೋಪಿತರ ವಿರುದ್ಧ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನ ನ್ಯಾಯಾಲಯಕ್ಕೆ ಹಾಜರುಪಡಿಸಲಾಹಿದ್ದು ನ್ಯಾಯಾಲಯವು ಆರೋಪಿಗಳಿಗೆ 15 ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಿದೆ.
ಸಿಪಿಐ ತಿಮ್ಮಪ್ಪ ನಾಯ್ಕ ನೇತೃತ್ವದಲ್ಲಿ ಹವಾಲ್ದಾರ್ ಗಣೇಶ ನಾಯ್ಕ, ರಾಜು ನಾಯ್ಕ ಕಾನಸ್ಟೇಬಲ್ಗಳಾದ ಗುರು ನಾಯಕ, ಶಿವಾನಂದ, ಪ್ರದೀಪ, ಹುಚ್ಚಪ್ಪ, ಮಲ್ಲಿಕಾರ್ಜುನ, ಪ್ರೇಮಾನಂದ, ಸಾಧನಾ, ಕ್ಷೇತ್ರ ಶಿಕ್ಷಣಾಧಿಕಾರಿ ರಾಜೇಂದ್ರ ಭಟ್ ಭಾಗವಹಿಸಿದ್ದರು. ಪಿಎಸ್ಐ ಮಂಜುನಾಥ ಗೌಡರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.