ಸುದ್ದಿಬಿಂದು ಬ್ಯೂರೋ
ಬೆಂಗಳೂರು: ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಇದ್ದಾಗ ಕಾಂಗ್ರೆಸ್ ಗೆ ಕೈ ಕೊಟ್ಟು ಬಿಜೆಪಿ ಸೇರಿಕೊಂಡಿದ್ದ 17ಮಂದಿ ಮುಂಬೈ ಬಾಯ್ಸ್ ಗಳ ಶಾಸಕ‌ ಪೈಕಿ ಶಿವರಾಮ ಹೆಬ್ಬಾರ್ ಹಾಗೂ ಎಸ್.ಟಿ ಸೋಮಶೇಖರ್ (ST Somasekhar) ಕಾಂಗ್ರೆಸ್ ಸೇರ್ಪಡೆ(Congress Party Joined)ಬಹುತೇಕ ಖಚಿತವಾಗಿದೆ
.

ಆಪರೇಷನ್ ಕಾಂಗ್ರೆಸ್ ಮೂಲಕ ಇದೀಗ ಇವರಿಬ್ಬರೂ ಶಾಸಕರು ಯಾವುದೇ ಸಂದರ್ಭದಲ್ಲಿಯಾದರೂ ಬಿಜೆಪಿ ತೊರೆದು ಕೈ ಹಿಡಿಯಲಿದ್ದಾರೆಂಷು ಇದೀಗ ವಿಧಾನಸೌಧದ ಪಡಸಾಲೆಯಲ್ಲಿ ವ್ಯಾಪಕವಾಗಿ ಕೇಳಿಬರುತ್ತಿದೆ. ಈ ಇಬ್ಬರೂ ಶಾಸಕರ ಸೇರ್ಪಡೆಯನ್ನು ಸಿಎಂ (C M) ಸಿದ್ದರಾಮಯ್ಯನವರು ಹಾಗೂ ಡಿಸಿಎಂ ಡಿ ಶಿವಕುಮಾರ್ ಅವರು ಅಂತಿಮಗೊಳಿಸಿದ್ದಾರೆ ಎಂದು ತಿಳಿದುಬಂದಿದೆ.

ಕಳೆದ ಕೆಲ ದಿನಗಳ ಹಿಂದೆ ತಡರಾತ್ರಿಯವರೆಗೂ ಇಬ್ಬರ ಜೊತೆಯೂ ಪ್ರತ್ಯೇಕವಾಗಿ ಈ ಇಬ್ಬರೂ ಶಾಸಕರು ಮಾತನ್ನಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನೂ ಶಿವರಾಮ ಹೆಬ್ಬಾರ್ ಹಾಗೂ ಎಸ್ ಟಿ ಸೋಮಶೇಖರ್ ಇವರಿಬ್ಬರೂ ಆತ್ಮೀಯರಾಗಿದ್ದು, ಒಂದು ವೇಳೆ ಶಿವರಾಮ ಹೆಬ್ಬಾರ್ ಕಾಂಗ್ರೆಸ್ ಸೇರ್ಪಡೆಯಾದರೆ ಅವರ ಜೊತೆಯಲ್ಲಿಯೇ ಎಸ್ ಟಿ ಸೋಮಶೇಖ ಸಹ ಬಿಜೆಪಿಯಿಂದ ನಿರ್ಗಮಿಸಲಿದ್ದಾರೆ. ಇಬ್ಬರ ಬಳಿ ಚರ್ಚಿಸಿದ ಬಳಿಕ ಅಂತಿಮವಾಗಿ ಹೈಕಮಾಂಡ್ (High Command,)ಜೊತೆಯೂ ಸಮಾಲೋಚನೆ ನಡೆಸಿರುವ ಸಿಎಂ, ಡಿಸಿಎಂ ಅವರಿಬ್ಬರಿಗೆ ಪಕ್ಷ ಸೇರ್ಪಡೆಗೆ ಹಸಿರು ನಿಶಾನೆ ತೋರಿಸಿದ್ದಾರೆ ಎನ್ನಲಾಗಿದೆ.

ಕಾಂಗ್ರೆಸ್ಸಿಗೆ ಬಂದರೆ ಸ್ವಾಗತ ನಿರ್ಧಾರಗಳೂ ಅವರೆಲ್ಲ ಕಾಂಗ್ರೆಸ್ ಗೆ ಬರ್ತಾರೆ ಅಂದ್ರೆ ಸ್ವಾಗತ ಇದೆ ಎಂದು ಹೇಳಿದ ಸಚಿವ ರಾಮಲಿಂಗಾರೆಡ್ಡಿ, ಕಾಲ ಬದಲಾವಣೆ ಆಗುತ್ತಾ ಹೋಗತ್ತೆ ಅದೇ ರೀತಿಯಲ್ಲಿ ಬದಲಾಗುತ್ತೆ ಸೇರಿಸಿಕೊಳ್ಳೋದಿಲ್ಲ ಅಂದಿದ್ದರು. ಆದರೆ ಇವತ್ತಿನ ಕಾಲಕ್ಕೆ ನಿರ್ಧಾರ ಬದಲಾಗಿದೆ ಎಂದು ವಿವರಿಸಿದರು. ಸಿದ್ದರಾಮಯ್ಯನವರು ಅವತ್ತಿನ ಸಂದರ್ಭಕ್ಕೆ ಅವರೆಲ್ಲಾ ತಪ್ಪು ತಿಳುವಳಿಕೆಯಿಂದ ಬಿಜೆಪಿಗೆ ಹೋಗಿದ್ದರು,

ಇದೀಗ ಅವರಿಗೆ ಕಾಂಗ್ರೆಸ್ ಪಕ್ಷವೇ ಸರಿ ಅಂತ ಅನ್ನಿಸಿದೆ, ಬಿಜೆಪಿಯಲ್ಲಿ ಉಸಿರುಗಟ್ಟಿಸುವ ವಾತಾವರಣ ಇದೆ, ಬಿಜೆಪಿಯಲ್ಲಿ ಬೋನಿನಲ್ಲಿ ಹಾಕಿದಂತೆ ಇರುತ್ತದೆ, ಬಿಜೆಪಿಯವರಿಗೆ ಅಲ್ಲಿನ ವಾತಾವರಣ ರೂಢಿಯಾಗಿದೆ, ಇಲ್ಲಿಂದ ಹೋದ ನಮ್ಮವರಿಗೆ ಅದು ಇನ್ನೂ ರೂಢಿ ಇಲ್ಲ ಎಂದು ಬಿಜೆಪಿಯಲ್ಲಿನ ಪರಿಸ್ಥಿತಿಯನ್ನು ವಿವರಿಸಿದರು. ಯಾರ್ಯಾರು ಬಿಜೆಪಿಗೆ ಹೋಗಿದ್ದರೋ ಅವರೆಲ್ಲಾ ಬಂದರೆ ಲೋಕಸಭೆ ಮತ್ತು ಬಿಬಿಎಂಪಿ ಚುನಾವಣೆಗೆ ಸಹಕಾರಿಯಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.