ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ : ಮೂವರು ಸ್ನೇಹಿತರು ಸೇರಿ ಕೆರೆಯಲ್ಲಿ ಈಜಲು ಹೋಗಿದ್ದ ವೇಳೆ ಓರ್ವ ವಿದ್ಯಾರ್ಥಿ ಕೆರೆಯಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ವಾಲಗಳ್ಳಿಯ ಜಡ್ಡಿಕೆರೆಯಲ್ಲಿ ನಡೆದಿದೆ.

ಪ್ರಶಾಂತ ಕೇಶವ ಮುಕ್ರಿ (18) ಮೃತ ವಿದ್ಯಾರ್ಥಿಯಾಗಿದ್ದಾನೆ. ಈತ ಹೆಗಡೆ ಗ್ರಾಮದ ಗುನಗನಕೊಪ್ಪದ ನಿವಾಸಿಯಾಗಿದ್ದು, ಹೆಗಡೆಯಿಂದ ಮೂವರು ವಿದ್ಯಾರ್ಥಿಗಳು ಈಜಾಡುವುದಕ್ಕಾಗಿ ವಾಲಗಳ್ಳಿ ಜಡ್ಡಿಕೆರೆಗೆ ತೆರಳಿದ್ದರು. ಮೂವರು ಸೇರಿ ಕೆರೆಯಲ್ಲಿ ಈಜುವ ವೇಳೆ ಪ್ರಶಾಂತ ಮುಕ್ರಿ ಎಂಬಾತ ಕೆರೆಯಲ್ಲಿ ಮುಳುಗಿ ಮೃತಪಟ್ಟಿದ್ದಾನೆ.

ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯರು ಸ್ಥಳಕ್ಕೆ ತೆರಳಿ ಕೆರೆಯಲ್ಲಿ‌ ಮುಳುಗಡೆಯಾಗಿರುವ ವಿದ್ಯಾರ್ಥಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಇನ್ನೂ ಕುಮಟಾ ಪೊಲೀಸರು ಹಾಗೂ ಅಗ್ನಿಶಾಮ ದಳ ಸಿಬ್ಬಂದಿಗಳು ಸಹ ಘಟನಾ ಸ್ಥಳಕ್ಕೆ ತೆರಳಿ ಪತ್ತೆ ಕಾರ್ಯ ನಡೆಸುತ್ತಿದ್ದಾರೆ.