ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ: ಕ್ಷಲ್ಲಕ ವಿಚಾರಕ್ಕೆ ಸಂಬಂಧಿಸಿದಂತೆ ಪತಿಯೇ ತನ್ನ ಸಹೋದರ, ಸಹೋದರಿಯೊಂದಿಗೆ ಸೇರಿಕೊಂಡು ಪತ್ನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಕಟ್ಟಿಗೆಯಿಂದ ಹಲ್ಲೆ ನಡೆಸಿದ ಆರೋಪದ ಮೇಲೆ ಮೂವರ ವಿರುದ್ಧ ಗೋಕರ್ಣ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ.
ಕುಮಟಾ ತಾಲೂಕಿನ ಮೊರಬಾ ಗ್ರಾಮದ ಚಂದ್ರಕಲಾ ರಮೇಶ ಹರಿಕಂತ್ರ ಎಂಬಾಕೆಯೇ ಹಲ್ಲೆಗೆ ಒಳಗಾಗಿರುವ ಮಹಿಳೆಯಾಗಿದ್ದಾಳೆ, ಮನೆಯಲ್ಲಿರುವ ನಲ್ಲಿಯಿಂದ ತೆಗೆದುಕೊಂಡ ಬಳಿಕ ನಲ್ಲಿ ಬಂದ್ ಮಾಡಿಲ್ಲ ಎನ್ನುವ ಕ್ಷುಲ್ಲಕ ಕಾರಣಕ್ಕೆ ಆಕೆಯ ಮೇಲೆ ಹಲ್ಲೆ ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ನೀರಿನ ವಿಚಾರವಾಗಿ ಆರೋಪಿಗಳು ಮಹಿಳೆಯೊಂದಿಗೆ ವಾಗ್ವಾದ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಎಳೆದಾಡಿ ಕಟ್ಟಿಗೆಯಿಂದ ಹೊಡೆದು ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಹಲ್ಲೆಯಿಂದ ಚಂದ್ರಕಲಾ ರಮೇಶ ಹರಿಕಂತ್ರ ಅವರಿಗೆ ಗಾಯಗಳಾಗಿದ್ದು, ಅವರನ್ನು ಕುಮಟಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ರಮೇಶ ರಾಮಚಂದ್ರ ಹರಿಕಂತ್ರ, ರಾಘವೇಂದ್ರ ರಾಮಚಂದ್ರ ಹರಿಕಂತ್ರ ಹಾಗೂ ಸುಲೋಚನಾ ರಾಮಚಂದ್ರ ಹರಿಕಂತ್ರ ಎಂಬುವವರ ವಿರುದ್ಧ ಗೋಕರ್ಣ ಪೊಲೀಸ್ ಪ್ರಕರಣ ದಾಖಲಾಗಿದೆ. ದೂರು ದಾಖಲಿಸಿಕೊಂಡಿರುವ ಗೋಕರ್ಣ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ / ಕಡಜದ ಹುಳುಗಳ ದಾಳಿಗೆ 8 ವರ್ಷದ ಬಾಲಕ ಸಾ*ವು : ತಂದೆಗೆ ಗಂಭೀರ ಗಾಯ

