ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ : ಕಳೆದ ವರ್ಷದ ಹಿಂದೆ ಕುಮಟಾ ಪುರಸಭಾ ಮುಖ್ಯಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದ ಸ್ವಾಮಿಗೆ ದಿಢೀರ್ ವರ್ಗಾವಣೆ ಮಾಡಲಾಗಿದೆ ಎನ್ನಲಾಗಿದ್ದು, ಅವರ ಜಾಗಕ್ಕೆ ಬಸವನವಾಗೇವಾಯ ಕಲಾದಗಿಯವರು ಅಧಿಕಾರ ವಹಿಸಿಕೊಂಡಿದ್ದು. ಈ ನಡುವೆ ಹಿಂದಿ ಮುಖ್ಯಾಧಿಕಾರಿಯಾಗಿದ್ದ ಸ್ವಾಮಿಯವರು ನ್ಯಾಯಾಲಯದ ಮೊರೆ ಹೋಗಿದ್ದು ಅವರ ವರ್ಗಾವಣೆಗೆ ತಡೆಯಾಜ್ಞೆ ಸಿಕ್ಕಿದೆ ಎನ್ನಲಾಗಿದೆ.

ಕೆಲವೇ ತಿಂಗಳ‌ ಹಿಂದೆ ಬಂದ ಸ್ವಾಮಿ ಕುಮಟಾದಲ್ಲಿ ನಾನಾ ಕಾರಣಕ್ಕೆ ಸದ್ದು ಮಾಡಿ ಸುದ್ದಿ ಆಗಿದ್ದರು. ಆದರೆ ವರ್ಷದ ಹಿಂದಷ್ಟೇ ವರ್ಗಾವಣೆಯಾದಗಿದ್ದ ಕಲಾದಗಿಯವರು ಮತ್ತೆ ಕುಮಟಾಕ್ಕೆ ಯಾಕೆ ಬಂದರು? ಕುಮಟಾ ಪುರಸಭೆಯಲ್ಲಿ ಅಂಥಾದ್ದೇನಿದೆ ? ಪುರಸಭಾ ವ್ಯಾಪ್ತಿಯಲ್ಲಿ ನಿಧಿ ಇದೆಯೇ? ಇಂತಹ ಆನೇಕ ಪ್ರಶ್ನೆಗಳು ಕುಮಟಾದ ಜನಸಾಮಾನ್ಯರಲ್ಲಿ ಮೂಡುವಂತಾಗಿದೆ. ಆದರೆ ಕೋರ್ಟ್ ತಡೆಯಿಂದ ಮುಖ್ಯಾಧಿಕಾರಿ ಖುರ್ಚಿ ಕುತೂಹಲ ಹುಟ್ಟಿಸಿದೆ. ಅದರ ಮೇಲೆ ಮತ್ತೆ ಕೂರುವವರು ಯಾರು? ಎನ್ನುವ ಪ್ರಶ್ನೆ ಸಾರ್ವಜನಿಕರಲ್ಲಿ ಹುಟ್ಟಿಕೊಳ್ಳುವಂತಾಗಿದೆ.

ಇದನ್ನೂ ಓದಿ/ ಕೈಗಾ ಸಮೀಪ ಬೃಹತ್ ಯಂತ್ರ ಹೊತ್ತ ವಾಹನ ಪಲ್ಟಿ