ಹಳಿಯಾಳ: ಹಳಿಯಾಳ–ಕಲಘಟಗಿ ರಾಜ್ಯ ಹೆದ್ದಾರಿಯ ತೆಗ್ನಳ್ಳಿ ಕ್ರಾಸ್ ಸಮೀಪ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಭಾರೀ ಪ್ರಮಾಣದ ಸ್ಫೋಟಕ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದು. ಆರೋಪಿಯನ್ನು ಬಂಧಿಸುವಲ್ಲಿ ಹಳಿಯಾಳ ಪೊಲೀಸರು ಯಶಸ್ವಿಯಾಗಿದ್ದಾರೆ. (illegal explosives trafficking, explosives seizure India, police operation Karnataka, crime news Karnataka, law enforcement action

ಖಚಿತ ಮಾಹಿತಿಯ ಆಧಾರದಲ್ಲಿ ಹಳಿಯಾಳ ತಹಸಿಲ್ದಾರ ರ್ಫಿರೋಜ್ ಷಾ ಸೋಮನಕಟ್ಟಿ ಅವರು ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದರು. ತಕ್ಷಣ ಕಾರ್ಯಾಚರಣೆಗಿಳಿದ ಪೊಲೀಸರು, ಪಟ್ಟಣದಿಂದ ಸುಮಾರು ಎರಡು ಕಿಲೋಮೀಟರ್ ದೂರದಲ್ಲಿರುವ ಕಲ್ಲು ಕ್ವಾರಿ ಸಮೀಪ ಹೆದ್ದಾರಿಯಲ್ಲಿ ಸ್ಕೂಟಿಯಲ್ಲಿ ಯಾವುದೇ ಪರವಾನಿಗೆ ಇಲ್ಲದೆ ಸಾಗಿಸುತ್ತಿದ್ದ ವ್ಯಕ್ತಿಯನ್ನು ತಡೆದು ಪರಿಶೀಲನೆ ನಡೆಸಿದ್ದಾದರೆ.(government intelligence input, police investigation India, illegal transport case, quarry explosives case, highway crime news)

ಪರಿಶೀಲನೆಯ ವೇಳೆ ಧಾರವಾಡ ಜಿಲ್ಲೆಯ ಅಮ್ಮಿನಭಾವಿ ಗ್ರಾಮದ ನಾಗರಾಜ್ ಸಿದ್ದಕನವರ್ ಎಂಬಾತನ ಬಳಿ 72 ಜಿಲೆಟಿನ್ ಕಡ್ಡಿಗಳು ಮತ್ತು 50 ಡಿಟೋನೇಟರ್‌ಗಳು ಪತ್ತೆಯಾಗಿವೆ. ಆರೋಪಿಯನ್ನು ಸ್ಥಳದಲ್ಲೇ ಬಂಧಿಸಿ, ಸ್ಫೋಟಕಗಳ ಜೊತೆಗೆ ಬಳಸುತ್ತಿದ್ದ ಸ್ಕೂಟಿಯನ್ನೂ ವಶಕ್ಕೆ ಪಡೆಯಲಾಗಿದೆ. (detonators seizure, gelatin sticks explosives, arrest news India, criminal case Karnataka, illegal materials transport)

ಈ ಸಂಬಂಧ ಸ್ಫೋಟಕ ವಸ್ತುಗಳ ಕಾಯ್ದೆಯಡಿ ಹಳಿಯಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಶಪಡಿಸಿಕೊಂಡ ಸ್ಫೋಟಕಗಳ ಸ್ವರೂಪ ಹಾಗೂ ಪ್ರಮಾಣವನ್ನು ಪರಿಶೀಲಿಸಲು ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ಭೇಟಿ ನೀಡಿ ತಪಾಸಣೆ ನಡೆಸಿದ್ದು, ಸ್ಫೋಟಕಗಳನ್ನು ವಶಕ್ಕೆ ಪಡೆದಿದ್ದಾರೆ.( explosives act India, bomb disposal squad, security investigation, hazardous materials handling, public safety news)

ಪ್ರತಿ ಜಿಲೆಟಿನ್ ಕಡ್ಡಿಯನ್ನು ರೂ.50ಕ್ಕೆ ಖರೀದಿಸಿದ್ದಾಗಿ ಬಂಧಿತ ಆರೋಪಿ ಮಾಹಿತಿ ನೀಡಿದ್ದಾನೆ ಎನ್ನಲಾಗಿದೆ.‌ ಕೇವಲ ಏಳು ರಿಂದ ಎಂಟು ಸಾವಿರ ರೂಪಾಯಿಗೆ ಇಷ್ಟು ದೊಡ್ಡ ಪ್ರಮಾಣದ ಸ್ಫೋಟಕಗಳನ್ನು ಪಡೆದಿರುವುದಾಗಿ ಬಂಧಿತ ನೀಡಿರುವುದು ಪ್ರಕರಣದ ಗಂಭೀರತೆ ಹೆಚ್ಚಿಸಿದೆ. (black market explosives, illegal purchase explosives, crime investigation report, shocking crime news, underground supply chain)

ಈ ಪ್ರಮಾಣದ ಸ್ಫೋಟಕಗಳಿಂದ ದೊಡ್ಡ ಕಟ್ಟಡವನ್ನೇ ಧ್ವಂಸಗೊಳಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಹೀಗಾಗಿ, ಆರೋಪಿಯು ಈ ಸ್ಫೋಟಕಗಳನ್ನು ಯಾವ ಉದ್ದೇಶಕ್ಕಾಗಿ ಸಾಗಿಸುತ್ತಿದ್ದ ಎಂಬುದರ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ. security threat analysis, explosive risk assessment, building destruction risk, forensic investigation India, terror risk prevention

ಪ್ರಾಥಮಿಕ ತನಿಖೆಯಲ್ಲಿ ಕಲ್ಲು ಕ್ವಾರಿ ಕೆಲಸಕ್ಕೆ ಬಳಸುವ ಉದ್ದೇಶದಿಂದ ಇರಬಹುದು ಎಂಬ ಶಂಕೆ ವ್ಯಕ್ತವಾಗಿದ್ದರೂ, ಪರವಾನಿಗೆ ಇಲ್ಲದೆ ಇಷ್ಟು ಪ್ರಮಾಣದ ಸ್ಫೋಟಕಗಳನ್ನು ಯಾರು ಪೂರೈಸಿದ್ದಾರೆ ಎಂಬುದರ ಬಗ್ಗೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ( illegal quarry explosives, supply chain investigation, criminal network India, mining explosives law, illegal business racket)

ಡಿವೈಎಸ್ಪಿ ಶಿವಾನಂದ ಮದರ್ಖಂಡಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತಹಸಿಲ್ದಾರ್ ಫಿರೋಜ್ ಷಾ ಸೋಮನಕಟ್ಟಿ ಅವರು ನೀಡಿದ ದೂರಿನ ಮೇರೆಗೆ ಪಿಎಸ್ಐ ಬಸವರಾಜ್ ಮಬನೂರ್ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ. (police case filing India, FIR registration, criminal investigation process, law enforcement officers, district police action)

ಇದನ್ನೂ ಓದಿ/ಶಿರಸಿಯಲ್ಲಿ ಪತ್ನಿಯ ತಂಗಿ ಜೊತೆ ಮದುವೆಗೆ ಸಿದ್ಧವಾಗಿದ್ದ ವೈದ್ಯನ ಹ**ತ್ಯೆ