ಸುದ್ದಿಬಿಂದು ಬ್ಯೂರೋ ವರದಿ
ಶಿರಸಿ: ಬೆಳಗಾದರೆ ಎರಡನೇ ಮದುವೆಯಾಗಲು ಸಿದ್ಧತೆ ನಡೆಸಿದ್ದ ಆಯುರ್ವೇದ ವೈದ್ಯರೊಬ್ಬರನ್ನ ತಲೆಗೆ ಮಾರಕ ಅಸ್ತ್ರಗಳಿಂದ ಹೊಡೆದು ಕೊ*ಲೆ ಮಾಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರದ ನ್ಯೂ ಕೆ.ಎಚ್.ಬಿ. ಕಾಲೋನಿಯ 9ನೇ ಕ್ರಾಸ್, ಎರಡನೇ ಮುಖ್ಯ ರಸ್ತೆಯಲ್ಲಿ ನಡೆದಿದೆ.( Sirsi doctor murder | Crime news Karnataka | Breaking news Uttara Kannada)
ಡಾ. ರಮೇಶ್ ಕಲಘುಟಕರ್ (51) ಕೊಲೆಯಾದ ವೈದ್ಯ ಎಂಬುದಾಗಿ ಗೊತ್ತಾಗಿದೆ. ಶನಿವಾರ ರಾತ್ರಿ ಕೊಲೆ ನಡೆದಿರುವ ಸಾಧ್ಯತೆ ಇದ್ದು, ಭಾನುವಾರ (ಇಂದು) ಸಾಯಂಕಾಲ ಘಟನೆ ಬೆಳಕಿಗೆ ಬಂದಿದೆ. ಒಬ್ಬರೇ ವಾಸಿಸುತ್ತಿದ್ದ ವೈದ್ಯರ ಮನೆಗೆ ಸಂಬಂಧಿಕರು ಭೇಟಿ ನೀಡಿದಾಗ ಬಾಗಿಲು ತೆರೆಯದ ಹಿನ್ನೆಲೆಯಲ್ಲಿ ಅನುಮಾನಗೊಂಡು ಬಾಗಿಲು ಒಡೆದು ಒಳಗೆ ಪ್ರವೇಶಿಸಿದಾಗ ಕೊ*ಲೆಯಾದ ಘಟನೆ ಪತ್ತೆಯಾಗಿದೆ.( Ramesh Kalaghutkar murder | Ayurveda doctor killed | Sirsi crime case]
ಕಳೆದ ಐದು ತಿಂಗಳ ಹಿಂದೆ ಡಾ. ರಮೇಶ್ ಅವರ ಪತ್ನಿ ಹೃದಯಾಘಾತದಿಂದ ಮೃತಪಟ್ಟಿದ್ದರು. ನಾಳೆ ಶಿರಸಿ ತಾಲೂಕಿನ ಮಂಜಗುಣಿಯಲ್ಲಿ ಪತ್ನಿಯ ತಂಗಿಯೊಂದಿಗೆ ಮದುವೆ ನಿಗದಿಯಾಗಿತ್ತು. ಮದುವೆ ಹಿನ್ನೆಲೆ ಸಂಬಂಧಿಕರು ಭಾನುವಾರ ಮನೆಗೆ ಭೇಟಿ ನೀಡಿದಾಗ ಈ ದುರ್ಘಟನೆ ಬೆಳಕಿಗೆ ಬಂದಿದೆ.
( Second marriage tragedy | Pre wedding murder | Karnataka shocking crime)
ಘಟನೆ ತಿಳಿದ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಶ್ವಾನ ದಳದೊಂದಿಗೆ ಡಿಎಸ್ಪಿ ಗೀತಾ ಪಾಟೀಲ್, ಸಿಪಿಐ ಶಶಿಕಾಂತ ವರ್ಮ ಹಾಗೂ ಮಾರುಕಟ್ಟೆ ಠಾಣೆಯ ಪಿಎಸ್ಐ ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.( Police investigation Sirsi | DSP Geetha Patil | Dog squad probe)
ಮೃತರಿಗೆ ಇಬ್ಬರು ಮಕ್ಕಳು ಇದ್ದು, ಒಬ್ಬರು ಬೆಂಗಳೂರಿನಲ್ಲಿ ಹಾಗೂ ಇನ್ನೊಬ್ಬರು ಉತ್ತರ ಪ್ರದೇಶದಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದಾರೆ. ಶಿರಸಿ ಮಾರುಕಟ್ಟೆ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದ್ದು, ಹತ್ಯೆಗೆ ನಿಖರ ಕಾರಣ ಎನ್ನು ಎಂಬುದು ಪೊಲೀಸ್ ತನಿಖೆಯಿಂದ ತಿಳಿದು ಬರಬೇಕಿದೆ..
ಇದನ್ನೂ ಓದಿ/ಕಾರವಾರದ ಸಾಧ್ವಿ ಸೈಲ್ ಮಿಸ್ ಇಂಡಿಯಾ 2026 ಕಿರೀಟ ವಿಜೇತೆ

