ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ : ಉದ್ಯಮಿ ಒಬ್ಬರು ಸರ್ಕಾರದ ಜಾಗವನ್ನ ಬಾಡಿಗೆ ಪಡೆದು, ಲಕ್ಷ ಲಕ್ಷ ಸಂಪಾದನೆ ಮಾಡಿ ಸರ್ಕಾರಕ್ಕೆ ಪಂಗನಾಮ ಹಾಕುತ್ತಿರುವ ಘಟನೆ ಈಗ ಕಾರವಾರದಲ್ಲಿ ಬೆಳಕಿಗೆ ಬಂದಿದೆ
ನಗರದ ರವೀಂದ್ರನಾಥ ಕಡಲತೀರದ ಒಂದು ಭಾಗದಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ 2017ರಲ್ಲಿ ಇಲ್ಲಿ ಕಡಲತೀರದ ಅಂಚಿನಲ್ಲಿ ರೆಸ್ಟೋರೆಂಟ್ ನಿರ್ಮಿಸಲಾಗಿತ್ತು..ಇದನ್ನ 15ವರ್ಷಕ್ಕೆ ಇಲ್ಲಿನ ಉದ್ಯಮಿ ರಾಜೇಶ್ ಕಾಮತ್ ಎಂಬುವವರಿಗೆ ಲೀಸ್ ಗೆ ನೀಡಲಾಗಿತ್ತು..ರೆಸ್ಟೋರೆಂಟ್ ನಿರ್ಮಾಣವಾದ ಬಳಿಕ ಇದಕ್ಕೆ ಅಜ್ವಿ ಓಶಿಯನ್ ಹೊಟೇಲ್ ಎಂದು ಹೆಸರಿಡಲಾಗಿತ್ತು..ಆದರೆ ಈಗ ಕಳೆದ ಎರಡು ವರ್ಷಗಳಿಂದ ಸರ್ಕಾರಕ್ಕೆ ಬಾಡಿಗೆ ನೀಡದೇ ಹೋಟೆಲ್ ನಡೆಸುತ್ತಿರುವ ಬಗ್ಗೆ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳೆ ಒಪ್ಪಿಕೊಂಡಿದ್ದಾರೆ.
ಅಜ್ವಿ ಓಶಿಯನ್ ಹೊಟೇಲ್ ಮಾಲೀಕ ರಾಜೇಶ ಕಾಮತ್ ಗೆ ಪ್ರವಾಸೋದ್ಯಮ ಇಲಾಖೆಯಿಂದ ನೋಟಿಸ್ ಜಾರಿ ಮಾಡಿದರು ಕೂಡಾ ಖ್ಯಾರೇ ಎನ್ನದೆ ಉದ್ಯಮ ಮುಂದುವರಿಸಿದ್ದಾರೆ.ಕಾರವಾರದ ರವಿಂದ್ರನಾಥ ಕಡಲತೀರದ ಜಾಗವನ್ನು ರೆಸ್ಟೋರೆಂಟ್ ನಡೆಸುವ ಉದ್ದೇಶದಿಂದ 2017 ರಲ್ಲಿ ತಿಂಗಳಿಗೆ 28300 ರೂಪಾಯಿಗೆ ಲೀಸ್ ಗೆ ನೀಡಲಾಗಿತ್ತು, ರೆಸ್ಟೋರೆಂಟ್ ಹೆಸರಲ್ಲಿ ಬೃಹತ್ ಪಾರ್ಟಿ ಹಾಲ್ ನಿರ್ಮಾಣ ಮಾಡಲಾಗಿದೆ, ರೆಸ್ಟೋರೆಂಟ್ ಹೆಸರಲ್ಲಿ ಪಡೆದ ಜಾಗದಲ್ಲಿ ಮದುವೆ ಸೇರಿದಂತೆ ಬೃಹತ್ ಸಮಾರಂಭ ಆಯೋಜನೆಮಾಡಿ ಲಕ್ಷ ಲಕ್ಷ ಗಳಿಗೆ ಮಾಡಲಾಗುತ್ತಿದೆ ಆದರೆ ಪ್ರವಸೋದ್ಯಮ ಇಲಾಖೆಗೆ ನೀಡಬೇಕಾದ ಹಣ ಮಾತ್ರ ಕಟ್ಟುತ್ತಿಲ್ಲ.
ಇನ್ನು ಸರ್ಕಾರಿ ಜಾಗದಲ್ಲಿ ಸಿಆರ್ಝಡ್ ನಿಯಮ ಉಲ್ಲಂಘಿಸಿ ಕಟ್ಟಡ ನಿರ್ಮಾಣ ಮಾಡಲಾಗಿದೆ ಎಂಬ ಆರೋಪ ಮುಂದಿಟ್ಟು ಕಾರವಾರದ ಕೆಲವು ಹಿತಾಸಕ್ತಿಗಳು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಇದಕ್ಕೆ ಸಂಬಂಧಿಸಿ ಹೈ ಕೋರ್ಟ್ ಕೂಡ ಈಗಾಗಳೆ ಕಟ್ಟಡ ತೆರವು ಮಾಡುವಂತೆ ಜಿಲ್ಲಾಡಳಿತಕ್ಕೆ ಆದೇಶ ಕೂಡಾ ನೀಡಿದೆ, ಹೈ ಕೋರ್ಟ್ ಆದೇಶದಂತೆ ಜಿಲ್ಲಾಡಳಿತ ಅಜ್ವಿ ಓಶಿಯನ್ ಹೋಟೆಲ್ ಕಟ್ಟಡ ತೆರವಿಗೆ ಸೂಚಿಸಿತ್ತು.
ಆ ಸಂದರ್ಭದಲ್ಲಿ ಕಟ್ಟಡ ತೆರವು ಮಾಡದಂತೆ ನ್ಯಾಯಾಲಯದ ಮೊರೆ ಹೋಗಿದ್ದ ಮಾಲಿಕ ರಾಜೇಶ ಕಾಮತ್ ತಡೆಯಾಜ್ಞೆ ತಂದಿದ್ದರು..ಈಗ ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿದ್ದು ಕಟ್ಟಡ ತೆರವು ಪ್ರಕರಣ ನ್ಯಾಯಾಲಯದಲ್ಲಿ ಇರುವುದರಿಂದ ಬಾಡಿಗೆ ನೀಡಲ್ಲ ಎಂದು ಉದ್ಯಮಿ ಹೇಳಿಕೊಳ್ಳುತ್ತಿದ್ದಾರೆನ್ನಲಾಗಿದೆ. ಸರಕಾರದ ಬೊಕ್ಕಸಕ್ಕೆ ವಂಚಿಸುತ್ತಿರುವ ಉದ್ಯಮಿ ಬಗ್ಗೆ ಕ್ರಮ ಜರುಗಿಸಬೇಕು ಎಂದು ಸಾರ್ವಜನಿಕರ ಒತ್ತಾಯ ಕೂಡ ಹೆಚ್ಚಾಗಿದೆ.
ಇದನ್ನೂ ಓದಿ/”ನಾರಿ ಶಕ್ತಿ” ಬಲಪಡಿಸಲು ಮಹಿಳಾ ಮೀಸಲಾತಿ ಅಗತ್ಯ: ರೂಪಾಲಿ ನಾಯ್ಕ

