ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ: ಕಾಂಗ್ರೆಸ್ ಪಕ್ಷದ ರಾಷ್ಟ್ರಿಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆಯನ್ನು ತಿರುಚಿ ಅಪಪ್ರಚಾರ ಮಾಡುತ್ತಿರುವ ಬಿಜೆಪಿ ನಾಯಕರುಗಳು ತಮ್ಮ ಬೆನ್ನ ಹಿಂದಿನ ಘಟನೆಗಳನ್ನು ನೋಡಿಕೊಳ್ಳಬೇಕಿದೆ.ಎಂದು ಕಾಂಗ್ರೇಸ ಜಿಲ್ಲಾಧ್ಯಕ್ಷ ಸಾಯಿ ಗಾಂವ್ಕರ್ ಬಿಜೆಪಿಗೆ ತಿರುಗೇಟು ನೀಡಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ಅವರು ಚುನಾವಣ ಪ್ರಚಾರ ಭಾಷಣ ಮಾಡುವ ವೇಳೆ ಈ ಆರ್ ಎಸ್ ಎಸ್ ಮತ್ತು ಬಿಜೆಪಿ ಈ ದೇಶದಲ್ಲಿ ಹಾವುಗಳಿಗಿಂತ ವಿಷಕಾರಿಯಾಗಿವೆ, ಈ ಚುನಾವಣೆ ಸಮಯದಲ್ಲಿ ನೀವು ಎಷ್ಟೇ ಮುಖ್ಯವಾದ ಕೆಲಸದಲ್ಲಿದ್ದರು ಸಹ ಚುನಾವಣೆಯಲ್ಲಿ ಆರ್ ಎಸ್ಎಸ್ ಬಿಜೆಪಿಯ ವಿರುದ್ಧ ಮತ ನೀಡುವುದರ ಮುಖೆನ ಈ ವಿಷ ವರ್ತೂಲಗಳನ್ನ ಕಿತ್ತೊಗೆಯಬೇಕು ಎಂಬ ರೀತಿಯ ಹೇಳಿಕೆಯನ್ನು ತಿರುಚಿ ಪ್ರಚಾರ ಮಾಡುತ್ತಿರುವ ಬಿಜೆಪಿಯವರ ಹತಾಶ ಮನಸ್ಥಿತಿಯಾಗಿದೆ.
ನಿನ್ನೆ ಮಾಜಿ ಶಾಸಕ ಸುನಿಲ್ ಹೆಗ್ಡೆ ಅವರು ಮಲ್ಲಿಕಾರ್ಜುನ ಖರ್ಗೆ ಅವರ ದೇಶದ್ರೋಹದಡಿ ಬಂಧನ ಮಾಡಬೇಕೆಂದು ಅಗ್ರಹಿಸಿದ್ದಾರೆ,
ಒಂದು ರಾಜಕೀಯ ಪಕ್ಷ ಅಥವಾ ಯಾವುದೊ ಒಂದು ಸಂಘಟನೇ ಅಥವಾ ರಾಜಕೀಯ ಪಕ್ಷದ ನಾಯಕರು ವಿರುದ್ಧ ಹೇಳಿಕೆ ನೀಡುವುದು ದೇಶ ದ್ರೋಹವಾಗುವುದಿಲ್ಲ ಎಂದು ತಿಳಿಕೊಳ್ಳಬೇಕು,
ದೇಶದ ಹಿತಾಸಕ್ತಿ ವಿರುದ್ಧ ಚಟುವಟಿಕೆ ಮಾಡುವುದು ಅಥವಾ ದೇಶದ ಆಂತರಿಕ ಭದ್ರತೆಗೆ ಸವಾಲಗುವುದು ದೇಶದ್ರೋಹದಡಿಯಲ್ಲಿ ಬರುತ್ತದೆ.
ರಾಜಕೀಯ ಪಕ್ಷಗಳು ಅಥವಾ ಅಧಿಕಾರದಲ್ಲಿರುವ ನಾಯಕರ ವಿರುದ್ಧ ಮಾತನಾಡುವುದು ದೇಶದ್ರೋಹದಡಿಯಲ್ಲಿ ಬರುವುದಾದರೆ ಬಿಜೆಪಿಯ ಬಹುಪಾಲು ಕಾರ್ಯಕರ್ತರು ಜೈಲಿನಲ್ಲೇ ಇರಬೇಕಾಗುತ್ತದೆ ಎಂಬುದನ್ನು ಸುನಿಲ್ ಹೆಗ್ಡೆ ಅವರು ಅರ್ಥ ಮಾಡಿಕೊಳ್ಳಬೇಕು.
ತಾವೇ ಈ ಹಿಂದೆ ದೇಶಪಾಂಡೆ ಅವರ ವಿರುದ್ಧ ನಾಲಿಗೆ ಹರಿಬಿಟ್ಟಿದ್ದನ್ನು ಮರೆತ ಸುನಿಲ್ ಅವರಿಗೆ ಅರ್ಗ ಜ್ನ್ಯಾನೇಂದ್ರ ಅವರ ಹೇಳಿಕೆ, ಸಿಟಿ ರವಿ ಅವರ ಸದನದಲ್ಲಿ ಮಾತನಾಡಿರುವುದು, ಮೊನ್ನೆ ಪ್ರತಾಪ್ ಸಿಂಹ ನೀಡಿರುವ ಹೇಳಿಕೆ ಹೀಗೆ ಸಾಲು ಸಾಲು ಬಿಜೆಪಿ ನಾಯಕರ ಹೇಳಿಕೆಗಳ ಬಗ್ಗೆ ಸುನಿಲ್ ಹೆಗ್ಡೆ ಅವರು ಪ್ರತಿಕ್ರಿಯೆ ನೀಡಬೇಕು, ತಮ್ಮ ತಟ್ಟೆಯಲ್ಲಿ ಆನೆ ಬಿದ್ದಿದೆ ಬೇರೆಯವರ ತಟ್ಟೆಯಲ್ಲಿನ ನೊಣದ ಚಿಂತೆ ಯಾಕೆ?
ಬೇಕಾಬಿಟ್ಟಿ ಮಾತನಾಡುವ, ಸುದ್ದಿಗಳನ್ನು ತಿರುಚುವುದು,ಸುಳ್ಳು ಸುದ್ದಿ ಹರಿಬಿಡುವುದು ಬಿಜೆಪಿ ನಾಯಕರುಗಳಿಗೆ ಅದು ಅವರ ಪಕ್ಷೇದಿಂದ ಬಂದ ಉಡುಗೊರೆಯಾಗಿದೆ. ಜಿಲ್ಲೆಯಲ್ಲಿ ಜ್ವಲಂತ ಸಮಸ್ಯೆಗಳಿವೆ,ಹೆದ್ದಾರಿ ಯೋಜನೆಗಳು ಪೂರ್ಣಗೊಂಡಿಲ್ಲ,ರೈಲ್ವೆ ಯೋಜನೆಗಳು ನೆನೆಗುದಿಗೆ ಬಿದ್ದಿವೆ, ರೈತರಿಗೆ ಪೂರ್ಣ ಪ್ರಮಾಣದ ಬೆಳೆ ವಿಮೆ ಜಮೆಯಾಗಿಲ್ಲ, ಇಷ್ಟೆಲ್ಲ ಸಮಸ್ಯೆಗಳು ಕೇಂದ್ರಸರ್ಕಾರದ ಬುಡದಲ್ಲೇ ಇರುವುದು ಹಾಗಿದ್ದರು ಸಹ ಬಿಜೆಪಿಯ ಯಾವ ನಾಯಕರು ಇದರ ಬಗ್ಗೆ ತುಟಿ ಬಿಚ್ಚುತ್ತಿಲ್ಲ.
ಸುನಿಲ್ ಹೆಗ್ಡೆ ಮತ್ತು ಬಿಜೆಪಿ ನಾಯಕರುಗಳು ಈ ನಿಟ್ಟಿನಲ್ಲಿ ಜವಾಬ್ದಾರಿಯುತ ವಿರೋಧ ಪಕ್ಷವಾಗಿ ನಡೆಕೊಳ್ಳಬೇಕು ಎಂದು ಸಾಯಿ ಗಾವಂಕರ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ಇದನ್ನೂ ಓದಿ/Big Breaking/ಕಾಂಗ್ರೇಸ ಮುಖಂಡನ ಮನೆಗೆ ನುಗ್ಗಿ ಹತ್ಯೆ ಮಾಡಿದ ದುಷ್ಕರ್ಮಿಗಳು



