ಸುದ್ದಿಬಿಂದು ವಿಶೇಷ ವರದಿ
ಕಾರವಾರ : ರಾಜ್ಯದಲ್ಲಿ ಸಾಮಾಜಿಕ ಭದ್ರತಾ ಯೋಜನೆಗಳಾದ ವೃದ್ಧಾಪ್ಯ ವೇತನ ಹಾಗೂ ವಿಧವಾ ವೇತನಕ್ಕೆ ಸಂಬಂಧಿಸಿದಂತೆ ಮಹತ್ವದ ಬದಲಾವಣೆಗಳು ಆಗಲಿದೆ ಎನ್ನಲಾಗುತ್ತಿದ್ದು, (Karnataka pension scheme)ಈ ಬಗ್ಗೆ ಚರ್ಚೆಗಳು ಜೋರಾಗಿವೆ. ಈ( pension update)/ಹಿನ್ನೆಲೆಯಲ್ಲಿ ಅನರ್ಹ ಫಲಾನುಭವಿಗಳಿಗೆ ಕಡಿವಾಣ ಹಾಕಲು ಸರಕಾರ ಎಲ್ಲಾರೀತಿಯ ಸಿದ್ದತೆ ಮಾಡಿಕೊಳ್ಳುತ್ತಿದೆ ಎನ್ನಲಾಗುತ್ತಿದೆ.

ವಿಶೇಷವಾಗಿ ಒಂದೇ ಕುಟುಂಬದ ರೇಷನ್ ಕಾರ್ಡ್‌ನಲ್ಲಿ ಇಬ್ಬರು ಅಥವಾ ಹೆಚ್ಚು ಮಂದಿ ಅನುದಾನ ಪಡೆಯುತ್ತಿರುವುದು ಕಂಡುಬಂದಲ್ಲಿ, (ration card pension rule) ಅಂತಹವರಿಗೆ ಕಡಿವಾಣ ಹಾಕುವ ಬಗ್ಗೆ ಸರ್ಕಾರ ಗಂಭೀರವಾಗಿ ಪರಿಶೀಲನೆ ನಡೆಸುತ್ತಿದೆ ಎನ್ನಲಾಗುತ್ತಿದೆ. ಸದ್ಯ ರಾಜ್ಯದಲ್ಲಿ ವೃದ್ಧಾಪ್ಯ ವೇತನವಾಗಿ ತಿಂಗಳಿಗೆ ಸುಮಾರು 1200 ಹಾಗೂ ವಿಧವಾ ವೇತನವಾಗಿ 1200 (pension amount) ನೀಡಲಾಗುತ್ತಿದೆ. ಈ ಯೋಜನೆಗಳು ಹಿರಿಯ ನಾಗರಿಕರು ಮತ್ತು ವಿಧವೆಯರ ಆರ್ಥಿಕತೆಗೆ (support) ಸಹಕಾರಿಯಾಗಿತ್ತು.

ಆದರೆ ಈಗಿನ ಸರಕಾರ ಅದಕ್ಕೂ ಕಡಿವಾಣ ಹಾಕಲು ಮುಂದಾಗಿದೆ ಎನ್ನಲಾಗುತ್ತಿದೆ. ಒಂದು ರೇಷನ್ ಕಾರ್ಡ್‌ನಲ್ಲಿ ಒಂದಕ್ಕಿಂತ ಹೆಚ್ಚು ಮಂದಿ ಈ ಸೌಲಭ್ಯ ಪಡೆಯುತ್ತಿರುವ ಬಗ್ಗೆ (pension eligibility rule) ಸರ್ಕಾರದ ಗಮನಕ್ಕೆ ಬಂದಿದೆ ಎನ್ನಲಾಗಿದೆ.
ಇದರಿಂದ ಯೋಜನೆಗಳ ಮೇಲಿನ ಹಣಕಾಸು ಒತ್ತಡ ಹೆಚ್ಚುತ್ತಿದೆ ಎಂಬ ಅಂಶವನ್ನು ಅಧಿಕಾರಿಗಳು ಉಲ್ಲೇಖಿಸುತ್ತಿದ್ದಾರೆನ್ನಲಾಗಿದೆ. ಹೀಗಾಗಿ, ಒಂದು ಕುಟುಂಬಕ್ಕೆ ಒಬ್ಬರಿಗಷ್ಟೇ ಅನುದಾನ ಸೀಮಿತಗೊಳಿಸುವ ಬಗ್ಗೆ (family pension limit)  ಸರಕಾರದಲ್ಲಿ ಚರ್ಚೆಗಳು ನಡೆಯುತ್ತಿವೆ ಎಂದು ತಿಳಿದುಬಂದಿದೆ.

ಇದರ ಭಾಗವಾಗಿ ಅರ್ಹತೆ ಪರಿಶೀಲನೆ, (data verification) ಹಾಗೂ ನಕಲಿ ಅಥವಾ duplicate entries ಪತ್ತೆಹಚ್ಚುವ ಕಾರ್ಯವೂ ಆರಂಭಗೊಂಡಿದೆ. ಈಗಾಗಲೇ ಕೆಲವು ಜಿಲ್ಲೆಗಳಲ್ಲಿ ಈ ಪರಿಶೀಲನಾ ಪ್ರಕ್ರಿಯೆ ತೀವ್ರಗೊಂಡಿದ್ದು, ಮುಂದಿನ ದಿನಗಳಲ್ಲಿ ಹೊಸ (guidelines) ನಿಯಮ ಹೊರಬರುವ ಸಾಧ್ಯತೆ ಇದೆ.
ಈ ಬೆಳವಣಿಗೆಯಿಂದಾಗಿ ಸಹಜವಾಗಿ ಫಲಾನುಭವಿಗಳಲ್ಲಿ ಆತಂಕ‌ (concern) ಹೆಚ್ಚಾಗುತ್ತಿದೆ. ಒಂದೇ ಕುಟುಂಬದಲ್ಲಿ ಇಬ್ಬರು ಹಿರಿಯರು ಅಥವಾ ವಿಧವೆಯರು ಇದ್ದಲ್ಲಿ, ಸರಕಾರದ ಈ ನಿರ್ಧಾರದಿಂದಾಗಿ ಅವರ ಜೀವನೋಪಾಯದ ಮೇಲೆ (financial impact) ಪರಿಣಾಮ ಬೀರುವ ಸಾಧ್ಯತೆ ಇದೆ.

ಒಟ್ಟಾರೆ, ವೃದ್ಧಾಪ್ಯ ಹಾಗೂ ವಿಧವಾ ವೇತನ ಯೋಜನೆಗಳಲ್ಲಿ (transparency) ಹೊಸ ಬದಲಾಬಣೆಗೆ ಸರಕಾರ( strict control) ಮುಂದಾಗಿದ್ದು, ಒಂದೇ ರೇಷನ್ ಕಾರ್ಡ್‌ನಲ್ಲಿ ಬಹುಜನರಿಗೆ ಅನುದಾನ ನೀಡುವ ಪದ್ಧತಿಗೆ ಕತ್ತರಿ ಬೀಳುವ ಸಾಧ್ಯತೆ ಹೆಚ್ಚಿದೆ. ಈ ಕುರಿತು ಸರ್ಕಾರದ (final decision) ಗೆ ಎಲ್ಲರ ಕಣ್ಣು ನೆಟ್ಟಿದೆ.

ಇದನ್ನೂ ಓದಿ/ ಸ್ವಂತ ಉದ್ಯೋಗಕ್ಕೆ ಹೆಜ್ಜೆ ಇಡಿ: ಮಹಿಳೆಯರಿಗೆ  ಶಾಸಕ ಭೀಮಣ್ಣ ನಾಯ್ಕ ಕರೆ