ಸುದ್ದಿಬಿಂದು ಬ್ಯೂರೋ ವರದಿ
ಅಂಕೋಲಾ: ಉತ್ತರ ಕನ್ನಡ ಜಿಲ್ಲೆಯನ್ನು ನಡುಗಿಸಿದ್ದ ಕಾಂಗ್ರೆಸ ಮುಖಂಡ ಗೋಪಾಲಕೃಷ್ಣ ನಾಯಕ ಅವರ. ಹತ್ಯೆಗೆ ಸಂಚು ರೂಪಿಸಿದ್ದ ಆರೋಪಿಗಳ ಫೋಟೋಗಳು ವೈರಲ್ ಆಗಿದೆ.
ಮಾರ್ಚ್ 25ರಂದು ಬೆಳಗ್ಗೆ ಪಟ್ಟಣದ ಹೃದಯ ಭಾಗದಲ್ಲೇ ನಡೆದ ರಕ್ತಸಿಕ್ತ ದಾಳಿ ಜಿಲ್ಲೆಯನ್ನೇ ಬೆಚ್ಚಿಬೀಳಿಸಿತ್ತು. ಕಾರಿನಲ್ಲಿ ಬಂದ ದುಷ್ಕರ್ಮಿಗಳು ಕ್ಷಣಾರ್ಧದಲ್ಲಿ ದಾಳಿ ನಡೆಸಿ ಪರಾರಿಯಾಗಿದ್ದರು. ಆದರೆ ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಪೊಲೀಸರು ಚಾಕಚಕ್ಯತೆ ತೋರಿಸಿ ಮಾಜಾಳಿ ಚೆಕ್ಪೋಸ್ಟ್ ಬಳಿ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಗ್ಯಾಂಗ್ ಸದಸ್ಯರ ಫೋಟೋಗಳು ಈಗ ಹೊರಬಿದ್ದಿದ್ದು, ಈ ಕೃತ್ಯದ ಹಿಂದೆ ದೊಡ್ಡ ಸಂಚು ಇರಬಹುದೇ ಎಂಬ ಅನುಮಾನ ಗಟ್ಟಿಯಾಗುತ್ತಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ನೇತೃತ್ವದ ವಿಶೇಷ ತಂಡ ಪರಾರಿಯಾಗಿರುವ ಇನ್ನಿಬ್ಬರಿಗಾಗಿ ತೀವ್ರ ಶೋಧ ಕಾರ್ಯ ನಡೆಸುತ್ತಿದೆ.
ಸುಪಾರಿ ಕಿಂಗ್ಗಾಗಿ ಬಲೆ ಬೀಸಿದ ಪೊಲೀಸ್!
ಈ ದಾಳಿಯ ಹಿಂದೆ ಸುಪಾರಿ ಗ್ಯಾಂಗ್ ಕೈವಾಡ ಇರಬಹುದೆಂಬ ಶಂಕೆ ವ್ಯಕ್ತವಾಗಿದ್ದು, ಹತ್ಯೆಗೆ ಸೂಪಾರಿ ನೀಡಿದ ‘ಮಾಸ್ಟರ್ಮೈಂಡ್’ನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಆತನನ್ನು ಯಾವುದೇ ಕ್ಷಣದಲ್ಲಿ ವಶಕ್ಕೆ ಪಡೆಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಇದು ಪೂರ್ವ ಯೋಜಿತ ಕೃತ್ಯ ಎನ್ನಲಾಗಿದೆ.

