ಸುದ್ದಿಬಿಂದು ವಿಶೇಷ ವರದಿ
ಕಾರವಾರ: ರಾಜ್ಯ ಸರ್ಕಾರ ಪೊಲೀಸ್ ಸಿಬ್ಬಂದಿಗಳಿಗೆ ವಾರದ ರಜೆ ನೀಡುವಂತೆ ನೀಡಿದ ಆದೇಶವನ್ನು ಉತ್ತರ ಕನ್ನಡ ಜಿಲ್ಲೆಯ ಕೆಲವು ಪೊಲೀಸ್ ಠಾಣೆಗಳಲ್ಲಿ ಉಲ್ಲಂಘಿಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ವಿಶೇಷವಾಗಿ ಕರಾವಳಿ ತಾಲೂಕಿನ ಮಧ್ಯವರ್ತಿ ತಾಲೂಕಿನ ಠಾಣೆಯೊಂದರಲ್ಲಿ ಹಿರಿಯ ಅಧಿಕಾರಿಯೊಬ್ಬರು ಸಿಬ್ಬಂದಿಗಳ “ಯೋಗಕ್ಷೇಮ” ವಿಚಾರಿಸದೆ ವಾರದ ರಜೆ ನೀಡದೇ ದುಡಿಸಿಕೊಳ್ಳುತ್ತಿದ್ದಾರೆನ್ನಲಾಗಿದೆ..
ಇದರಿಂದಾಗಿ ಸಿಬ್ಬಂದಿಗಳಲ್ಲಿ ಮಾನಸಿಕ ಒತ್ತಡ ಹೆಚ್ಚುತ್ತಿದ್ದು, ಅವರ ಯೋಗಕ್ಷೇಮ ಹಾಗೂ ಆರೋಗ್ಯದ ಬಗ್ಗೆ ಈ ಅಧಿಕಾರಿ “ಯೋಗ್ಯವಾಗಿ” ಕಾಳಜಿ ತೋರಿಸುತ್ತಿಲ್ಲ ಎಂಬ ಮಾತುಗಳು ಪೊಲೀಸ್ ಸಿಬ್ಬಂದಿಗಳಿಂದಲ್ಲೆ ಕೇಳಿಬರುತ್ತಿವೆ. ಪ್ರತಿಯೊಂದು ಠಾಣೆಯಲ್ಲಿನ ಸಿಬ್ಬಂದಿಗಳ ಸಮಸ್ಯೆಗಳು ಹಾಗೂ ಅವರ ಯೋಗಕ್ಷೇಮ ವಿಚಾರಣೆಗಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಆಯಾ ಠಾಣೆಯ ಹಿರಿಯ ಅಧಿಕಾರಿಗಳೊಂದಿಗೆ ಪ್ರತಿನಿತ್ಯ ವಿಡಿಯೋ ಕಾನ್ಫರೆನ್ಸ್ ನಡೆಸುತ್ತಿದ್ದಾರೆ. ಆದರೆ ಸಿಬ್ಬಂದಿಗಳಿಗೆ ವಾರದ ರಜೆ ನೀಡಲು ಕೆಲವು ಠಾಣೆಗಳ ಅಧಿಕಾರಿಗಳು ನಿರಾಕರಿಸುತ್ತಿರುವುದು ಅವರ ಗಮನಕ್ಕೆ ಬಂದಿರುವಂತಿಲ್ಲ. ಈ ಬಗ್ಗೆ ಹಿರಿಯ ಅಧಿಕಾರಿಗಳು ತಮ್ಮ ಕೆಳಹಂತದ ಸಿಬ್ಬಂದಿಗಳ ಬಗ್ಗೆ ಸಹ ಕಾಳಜಿ ತೋರಬೇಕಿದೆ.
ಇನ್ನೂ ಕೆಲ ಸಿಬ್ಬಂದಿಗಳ ಹೇಳಿಕೊಳ್ಳುತ್ತಿರುವ ಪ್ರಕಾರ, “ನಮಗೆ ವಾರದ ರಜೆ ನೀಡಲು ನಮ್ಮ ಠಾಣೆಯ ಯೋಗಕ್ಷೇಮ ವಿಚಾರಿಸಬೇಕಾದ ಅಧಿಕಾರಿಗಳೇ ಮನಸ್ಸು ಮಾಡುತ್ತಿಲ್ಲ. ನಾವೇಲ್ಲಾ ನಮ್ಮ ವಾರದ ರಜೆ ನೀಡುವಂತೆ ಎಷ್ಟೇ ಕೇಳಕೊಂಡರು ಎಲ್ಲಿದ್ದಲೋ ಜಿಲ್ಲೆಗೆ ಬಂದು ವಾರ ಪೂರ್ತಿ ಕೆಲಸ ಮಾಡುತ್ತೇವೆ ನೀವು ಕೆಲಸಮಾಡಬೇಕು ಎಂಬ ಒತ್ತಡವನ್ನು ಹಾಕುತ್ತಿದ್ದಾರಂತೆ
ಆದರೆ ನಮ್ಮ ಮೇಲಾಧಿಕಾರಿಗಳು ಸರಕಾರದ ಆದೇಶವಿದ್ದರೂ ನಮ್ಮಗೆ ರಜೆ ಕೊಡತ್ತಾ ಇಲ್ಲ. ನೀವು ಯಾರಿಗೆ ಬೇಕಾದರೂ ನಮ್ಮ ಬಗ್ಗೆ ದೂರು ನೀಡಿದರು, ನಮ್ಮಗೆನು ತೊಂದರೆ ಇಲ್ಲ ಎಂದು ಹೇಳುತ್ತಿದ್ದಾರೆನ್ನಲಾಗಿದೆ.
ನಮ್ಮ ಸಮಸ್ಯೆ ಮೇಲಧಿಕಾರಿಗಳ ಗಮನಕ್ಕೆ ಬಂದಿಲ್ಲವೋ?” ಎಂಬ ಮಾತುಗಳೂ ಕೇಳಿಬರುತ್ತಿವೆ.ಸಿಬ್ಬಂದಿಗಳಿಗೆ , ವಾರದ ರಜೆ ನೀಡದೇ ದುಡಿಸಿಕೊಳ್ಳುತ್ತಿರುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಕೆಲ ಸಿಬ್ಬಂದಿಗಳು ಠಾಣೆಯಲ್ಲಿ ಕಣ್ಣೀರು ಹಾಕುವ ಪರಿಸ್ಥಿತಿ ಸಹ ನಿರ್ಮಾಣವಾಗಿದೆ, ಇನ್ನೂ ಕೆಲ ಸಿಬ್ಬಂದಿಗಳು ನಾವು ಠಾಣೆಗೆ ಬಂದು ದೊಡ್ಡ ತಪ್ಪು ಮಾಡಿಬಿಟ್ಟತಾಗಿದೆ” ಎಂದು ತಮ್ಮ ಅಳಲನ್ನು ತೋಡಿಕೊಳ್ಳುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಸರ್ಕಾರದ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಹಾಗೂ ಪೊಲೀಸ್ ಸಿಬ್ಬಂದಿಗಳ ಹಿತಾಸಕ್ತಿಯನ್ನು ಕಾಪಾಡಲು ಜಿಲ್ಲಾ ಹಿರಿಯ ಅಧಿಕಾರಿಗಳು ಇನ್ನಾದರೂ ಮುಂದಾಗತ್ತಾರ ಎನ್ನುವುದನ್ನ ಕಾದು ನೋಡಬೇಕಿದೆ.
ಇದನ್ನೂ ಓದಿ/ಯಶಸ್ವಿನಿ ಆರೋಗ್ಯ ಕಾರ್ಡ್ ಹಗರಣ : ಕಾರ್ಡ್ ನವೀಕರಣಕ್ಕೆ ಜನರ ಹಿಂದೇಟು



