ಸುದ್ದಿಬಿಂದು ಬ್ಯೂರೋ ವರದಿ
ಸಿದ್ದಾಪುರ :ವಸಂತ್ ನಾಯ್ಕ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯಾಗಿರುವ ಸುಚಿತ್ರಾ ಹಾಗೂ ಕಮಲಾಕರ ಭಟ್ ನಡುವಿನ ಸಂಬಂಧದ ಒಂದೊಂದಾಗಿಯೇ ಬೆಳಕಿಗೆ ಬರುತ್ತಲೆ.

ಮೊದಲ ಭೇಟಿಯಲ್ಲಿ ಹತ್ತು ಸಾವಿರ ನಿರೀಕ್ಷೆಯಲ್ಲಿದ್ದ, ಸುಚಿತ್ರಗೆ ಕಮಲಾಕರ ಭಟ್‌ ಆಕೆಯಿಂದ ಸುಖ ಪಡೆಯಲು ಮೊದಲ‌ ಭೇಟಿಯಲ್ಲೆ ಆಕೆಗೆ 35 ಸಾವಿರ ರೂ. ಪಡೆದಿದ್ದ ವಿಚಾರ ಇದೀಗ ಚರ್ಚೆಗೆ ಗ್ರಾಸವಾಗಿದೆ., ಕಮಲಾಕರ ಭಟ್ ಜೊತೆ ಮೊದಲ ಬಾರಿಗೆ ಸುಚಿತ್ರಾ, ಕೇವಲ 10 ಸಾವಿರ ರೂ. ಸಿಗುವ ನಿರೀಕ್ಷೆಯಲ್ಲಿದ್ದಳು. ಆದರೆ ಸುಚಿತ್ರಾಳ ಸೌಂದರ್ಯ ಹಾಗೂ ವರ್ತನೆಗೆ ಮನಸೋತ ಕಮಲಾಕರ ಭಟ್, ಮೊದಲ ಭೇಟಿಯಲ್ಲೇ 35 ಸಾವಿರ ರೂ. ನೀಡಿದ್ದಾನೆ ಎನ್ನಲಾಗಿದೆ.

ಈ ಹಣದಿಂದ ಉತ್ಸಾಹಗೊಂಡ ಸುಚಿತ್ರಾ, ನಂತರ ನಿರಂತರವಾಗಿ ಕಮಲಾಕರ ಭಟ್‌ನ ಸಂಪರ್ಕದಲ್ಲೇ ಇದ್ದಳು ಎನ್ನಲಾಗಿದೆ. ಮೊದಲ ಭೇಟಿಯಲ್ಲೇ ಭಟ್‌ನ ಹಿನ್ನೆಲೆ, ಆರ್ಥಿಕ ಸ್ಥಿತಿಗತಿಗಳನ್ನು ತಿಳಿದುಕೊಂಡಿದ್ದ ಸುಚಿತ್ರಾ, ಕೇವಲ ಮೂರು ತಿಂಗಳ ಅವಧಿಯಲ್ಲೇ ಕಮಲಾಕರ ಭಟ್‌ನನ್ನು ಸಂಪೂರ್ಣವಾಗಿ ತನ್ನ ವಶಕ್ಕೆ ತೆಗೆದುಕೊಂಡಿದ್ದಾಳೆ.

ಸುಚಿತ್ರಳ ಪತಿ ಮಹೇಶ್ ನಾಯ್ಕ್ ನೀಡಿರುವ ಹೇಳಿಕೆ ಪ್ರಕಾರ, ಈ ಸಂಬಂಧ ಆಕಸ್ಮಿಕವಾಗಿರಲಿಲ್ಲ. ಕಮಲಾಕರ ಭಟ್ ಸಂಪರ್ಕಕ್ಕೆ ಬಂದ ಬಳಿಕ, ಆತನ ಬಗ್ಗೆ ಸುಮಾರು ಒಂದು ವಾರಗಳ ಕಾಲ ಸುಚಿತ್ರಾ ಸೂಕ್ಷ್ಮವಾಗಿ ಮಾಹಿತಿ ಸಂಗ್ರಹಿಸಿ. ಆರಂಭದಲ್ಲಿ 1 ರಿಂದ 2 ಲಕ್ಷ ರೂ.ಹಣದ ಲಾಭದ ಉದ್ದೇಶದಿಂದಲೇ ಆಕೆ ಈ ಸಂಬಂಧಕ್ಕೆ ಮುಂದಾಗಿದ್ದಾಳೆ ಎಂಬ ಗಂಭೀರ ಆರೋಪವಿದೆ.

ಇನ್ನು, ಕಮಲಾಕರ ಭಟ್ ಜೊತೆ ಏಕಾಂತದಲ್ಲಿದ್ದ ವೇಳೆ, ಆತನಿಗೆ ತಿಳಿಯದಂತೆ ಸುಚಿತ್ರಾ ಮೊಬೈಲ್‌ನಲ್ಲಿ ಗುಪ್ತವಾಗಿ ವಿಡಿಯೋ ದಾಖಲಿಸಿಕೊಂಡಿದ್ದಾಳೆ‌ ಎನ್ನಲಾಗಿದೆ.ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರಿಸಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಸತ್ಯಾಂಶಗಳು ಹೊರಬೀಳುವ ಸಾಧ್ಯತೆ ಇದೆ.

ಇದನ್ನೂ ಓದಿ/ಸುಚಿತ್ರಾ ಯಾರು? ಸುರೇಖಾ ಯಾರು? ವಸಂತ್ ನಾಯ್ಕ್ ಕೊಲೆ ಪ್ರಕರಣದಲ್ಲಿ ಸ್ಫೋಟಕ ಸತ್ಯಗಳು ಒಂದೊಂದಾಗಿ ಬಹಿರಂಗ!