ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕಾರವಾರ ಕ್ಷೇತ್ರದ ಶಾಸಕ  ಸತೀಶ್ ಸೈಲ್ ಅವರನ್ನು ಇಂದು ಸಂಜೆ  ಜಾರಿ ನಿರ್ದೇಶನಾಲಯದ ವಿಚಾರಣೆ ಬಳಿಕ ಇಡಿ (ED) ಅಧಿಕಾರಿಗಳು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.ಬಂಧನಕ್ಕೆ ಒಳಗಾಗಿರುವ ಸೈಲ್‌ ಅವರನ್ನ ಜಡ್ಜ್‌ ಎದುರು ಹಾಜರು ಮಾಡಲಿದ್ದಾರೆ.

ಆಗಸ್ಟ್ 13-14ರಂದು ಕಾರವಾರ ತಾಲೂಕಿನ ಸದಾಶಿವಗಡದಲ್ಲಿರುವ ಸತೀಶ್ ಸೈಲ್ ಅವರ ನಿವಾಸದ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದರು. ಬೇಲೇಕೇರಿ ಅದಿರು ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆಯ ವಿಚಾರದಲ್ಲಿ ಈ ದಾಳಿ ನಡೆಸಲಾಗಿದಿತ್ತು. ದಾಳಿಯ ವೇಳೆ ಮನೆಯಲ್ಲಿ ಸುಮಾರು 1.41 ಕೋಟಿ ರೂ. ನಗದು ಹಾಗೂ ಬ್ಯಾಂಕ್ ಲಾಕರ್‌ನಲ್ಲಿ ಸುಮಾರು 6.75 ಕೆ.ಜಿ ಚಿನ್ನಾಭರಣ ಪತ್ತೆಯಾಗಿತ್ತು.

ಅನಾರೋಗ್ಯದ ಕಾರಣಕ್ಕೆ ಚಿಕಿತ್ಸೆ ಪಡೆಯುತ್ತಿದ್ದ ಸತೀಶ್ ಸೈಲ್ ಅವರನ್ನು ನಿನ್ನೆ ವಿಚಾರಣೆಗೆ ಕರೆದ ಇಡಿ ಅಧಿಕಾರಿಗಳು, ಇಂದು ಸಹ  ದಿನಪೂರ್ತಿ ವಿಚಾರಣೆ ನಡೆಸಿ ಬಳಿಕ ೮-೩೦ರ ಸುಮಾರಿಗೆ ಬಂಧಿಸಿದ್ದಾರೆ. ಶಾಸಕ ಸತೀಶ್ ಸೈಲ್ ಅವರನ್ನು ಜನಪ್ರತಿನಿಧಿ ನ್ಯಾಯಾಲಯದ ಮುಂದೆ ಹಾಜರುಪಡಿಸುವ ಸಾಧ್ಯತೆ ಇದೆ. ಅದಿರು ನಾಪತ್ತೆ ಪ್ರಕರಣದಲ್ಲಿ ಶಾಸಕ ಸತೀಶ ಸೈಲ್‌ ಇದುವರೆಗೆ ಮೂರು ಬಾರಿ ಬಂಧನಕ್ಕೆ ಒಳಗಾದಂತಾಗಿದೆ. ಸೈಲ್‌ ಬಂಧನಕ್ಕೆ ಒಳಗಾಗುತ್ತಿದ್ದಂತೆ ಅವರ ಅಭಿಮಾನಿಗಳಲ್ಲಿ ಬೇಸರ ಉಂಟಾಗುವಂತೆ ಮಾಡಿದೆ..

ಇದನ್ನೂ ಓದಿ: ಆರ್.ವಿ. ದೇಶಪಾಂಡೆ ವಿವಾದಾತ್ಮಕ ಹೇಳಿಕೆಗೆ ನಾನು ಕ್ಷಮೆ ಕೇಳತ್ತಿನಿ ಎಂದ ಸಚಿವ ಮಂಕಾಳ್ ವೈದ್ಯ