ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ : ನಿನ್ನೆ ಸುರಿದ ಭಾರೀ ಮಳೆಯಿಂದಾಗಿ ಕಾರವಾರ ನಗರ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಸಾಕಷ್ಟು ಅವಾಂತರಗಳು ಸೃಷ್ಟಿಯಾಗಿ‌ ಜನಜೀವ ಅಸ್ತವ್ಯಸ್ತವಾಗಿದೆ.ನಗರದ ಹಬ್ಬುವಾಡದ ರಾಘವೇಂದ್ರ ಮಠದ ಬಳಿ ಗುಡ್ಡಕುಸಿತ ಉಂಟಾಗಿದ್ದರಿಂದ ಸ್ಥಳೀಯರನ್ನ ಸ್ಥಳಾಂತರ ಮಾಡಲಾಗಿದೆ.

ಉತ್ತರಕನ್ನಡದಲ್ಲಿ ನಿನ್ನೆ ಸುರಿದ ಭಾರಿ ಮಳೆಗೆ ಜಿಲ್ಲೆಯ ಕರಾವಳಿ ತಾಲೂಕಿನ ಕಾರವಾರ ಸೇರಿ ಬಹುತೇಕ ಕಡೆಯಲ್ಲಿ ಜಲಾವೃತ ಉಂಟಾಗಿತ್ತು. ಅದರಲ್ಲೂ ಕಾರವಾರ ನಗರ ಪ್ರದೇಶದಲ್ಲಿ ಜಲಕಂಟಕ ಉಂಟಾಗಿತ್ತು.ಭಾರೀ ಮಳೆಯಿಂದಾಗಿ ಬೈಕ್ ಸೇರಿದಂತೆ ಕೆಲ ವಾಹನಗಳು ನೀರಲ್ಲಿ ಮುಳುಗಡೆಯಾಗಿದ್ದವು ಕಾರವಾರದಲ್ಲಿ ಕಡಿಮೆಯಾದ ಮಳೆಯ ಪ್ರಮಾಣ ನಿನ್ನೆ ಸಂಜೆ ವೇಳೆ ನಗರದ ಹಬ್ಬುವಾಡ ರಸ್ತೆಯ ರಾಘವೇಂದ್ರ ಮಠದ ಬಳಿ ಗುಡ್ಡ ಕುಸಿತ ಉಂಟಾಗಿದೆ.

ಗುಡ್ಡಕುಸಿತದಿಂದಾಗಿ ಮಣ್ಣ ಹಾಗೂ ಕಲ್ಲು ಬಂಡೆಗಳು ಮನೆಯ ಕೌಂಪೌಂಡಗೆ ಅಪ್ಪಳಿಸಿ ಹಾನಿ ಉಂಟಾಗಿದೆ.ತಕ್ಷಣ ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಮುಂಜಾಗೃತ ಕ್ರಮವಾಗಿ ಐದು ಮನೆಗಳ ಜನರನ್ನ ಸ್ಥಳಾಂತರ ಮಾಡಿದ್ದಾರೆ. ಗುಡ್ಡ ಕುಸಿತವಾಗಿರುವ ರಸ್ತೆಯಲ್ಲಿ ಯಾರು ತೆರಳದಂತೆ ಬ್ಯಾರಿಗೇಟ್‌ಗಳನ್ನ ಹಾಕಲಾಗಿದೆ. ನಿನ್ನೆ ಸುರಿದ ಮಳೆಗೆ ಅಪಾರ ಪ್ರಮಾಣದಲ್ಲಿ‌ ಹಾನಿಯಾಗಿದೆ.ನಗರದ ಹಲವೆಡೆ ನೀರು ನುಗ್ಗಿ ಅವಾಂತರ ಸೃಷ್ಠಿಯಾಗಿದ್ದು,ಇನ್ನೂ ಮಳೆ‌ ಜೋರಾದಲ್ಲಿ ರಾಘವೇಂದ್ರ‌ ಮಠದ ಬಳಿಯ ಗುಡ್ಡ ಮತ್ತಷ್ಟು ಕುಸಿತ ಉಂಟಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಇದನ್ನೂ ಓದಿ