ಸುದ್ದಿಬಿಂದು ಬ್ಯೂರೋ ವರದಿ(Suddibinndu Digital News)
ಕಲಬುರಗಿ:ವಾರದ ಹಿಂದಷ್ಟೇ ಜನಿಸಿದ ಮಗು ಹಾಗೂ, ಬಾಣಂತಿ ಪತ್ನಿಯನ್ನು ಬಿಟ್ಟು ವೀರಯೋಧ ಯೋಧ ನೋರ್ವ ಯುದ್ಧ ಭೂಮಿಗೆ ತೆರಳಿದ್ದು, ತೆರಳುವ ಮುನ್ನ ಆಗಷ್ಟೆ ಜನಿಸಿದ ಮಗುವಿಗೆ ಮುತ್ತುಕೊಟ್ಟು ಸೇನೆಗೆ ಸೇರಿಕೊಂಡಿದ್ದಾರೆ.

ಕಲಬುರಗಿ ಜಿಲ್ಲೆ ಆಳಂದ ತಾಲೂಕಿನ ದುತ್ತರಗಾಂವ್ ನಿವಾಸಿ ಹಣಮಂತರಾಯ ಅವಸೆ ಎಂಬುವವರೆ ಯುದ್ದ ಭೂಮಿಗೆ ಮರಳಿದ ಯೋಧನಾಗಿದ್ದಾನೆ. ಇವರು ಕಳೆದ 20 ವರ್ಷಗಳಿಂದ CRPF ನಲ್ಲಿ ಸೇವೆ ಸಲ್ಲಿಸುತ್ತಿದ್ದು, ಇವರು ಪತ್ನಿಯ ಡೆಲೆವರಿ ಹಿನ್ನಲೆಯಲ್ಲಿ ಒಂದು ತಿಂಗಳ ರಜೆಯ ಮೇಲೆ ತವರಿಗೆ ಬಂದಿದ್ದರು.ವಾರದ ಹಿಂದಷ್ಟೇ ಹಣಮಂತರಾಯ ಅವರಿಗೆ ಗಂಡು ಮಗು ಜನಿಸಿದ್ದು, ಆದರೆ‌ ಹತ್ತು ದಿನ ಅಷ್ಟೆ ಇವರು ಮನೆಯವರೊಂದಿಗೆ ಉಳಿದು ಇದೀಗ ವಾಪಸ್‌ ಸೇನೆಗೆ ಮರಳಿದ್ದಾರೆ.

ಭಾರತೀಯ ಸೇನೆ ತುರ್ತು ಸೇವೆಗೆ ಆಗಮಿಸುವಂತೆ ಸೂಚನೆ ನೀಡಿರುವ ಹಿನ್ನಲೆಯಲ್ಲಿ ದೇಶ ಸೇವೆಗೆ ತೆರಳಿದ್ದು, ನನಗೆ ಮಗು, ಮನೆ, ಕುಟುಂಬಕ್ಕಿಂತ ದೇಶ ಮುಖ್ಯವಾಗಿದೆ ಹಣಮಂತರಾಯ ಅವರು ನನಗೆ ಸೇವೆ ಸೇರುವ ಮುನ್ನ ಕಲಿಸಿದ್ದೇ ಇದೇ ವಾಕ್ಯ, ಹಾಗಾಗಿ ದೇಶ ಸೇವೆಗಾಗಿ ತೆರಳುತ್ತಿದ್ದೇನೆ ಎಂದಿದ್ದಾರೆ. ಇನ್ನೂ ಯೋಧನ ಪತ್ನಿ ಸ್ನೇಹಾ ಕೂಡ ನನ್ನ ಗಂಡ ನಮಗೆ ಈ ಸ್ಥಿತಿ ಬಿಟ್ಟು ಹೋಗುತ್ತಿರುವ ಬಗ್ಗೆ ಬೇಜಾರಿಲ್ಲ. ನನಗೆ ನನ್ನ ಗಂಡನ ಬಗ್ಗೆ ಹೆಮ್ಮೆ ಇದೆ.

ಇನ್ನೂ ಬಾಣಂತಿ ಪತ್ನಿ ಸ್ನೇಹಾ ಭಾರವಾದ ಮನಸ್ಸಿನೊಂದಿಗೆ ಪತಿಗೆ ನಗುತ್ತಲೇ ಸೈನ್ಯಕ್ಕೆ ಕಳುಹಿಸಿದ್ದಾರೆ. ಅಷ್ಟೆ ಅಲ್ಲದೆ‌ ಯೋಧನ ಸ್ನೇಹಿತರು ಸಹ ಕಾಶ್ಮೀರಕ್ಕೆ ತೆರಳಿದ ಯೋಧನಿಗೆ ಸತ್ಕರಿಸಿ ಶುಭ ಹಾರೈಸಿದ್ದಾರೆ.

ಇದನ್ನೂ ಓದಿ