ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ: ಮಾನವ ಸಂಪತ್ತು,ಸಾಮಾಜಿಕ ವ್ಯವಸ್ಥೆ ಸುಲಲಿತವಾಗಿ ನಡೆಯಲು ಶಿಕ್ಷಣ,ಮೌಲ್ಯಗಳು, ಸಂಸ್ಕಾರವನ್ನು ರೂಡಿಸಿಕೊಳ್ಳಬೇಕು’ಎಂದು ನಾಮಧಾರಿ ಸಮಾಜದ ಕುಲಗುರುಗಳಾದ ಮಹಾಮಂಡಲೇಶ್ವರ 1008 ಶ್ರೀ ಸದ್ಗುರು ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ನುಡಿದರು.

ಪಟ್ಟಣದ ಬಗ್ಗೋಣ ಕ್ರಾಸ್‌ನಲ್ಲಿರುವ ನಾಮಧಾರಿ ಸಭಾಭವನದ ಮೇಲಂತಸ್ಥಿನ ಕಟ್ಟಡ ಉದ್ಘಾಟನಾ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.ಮಾನವೀಯ ಮೌಲ್ಯಗಳು ನಮ್ಮ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದ್ದು, ಇದನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಂಡು ಜೀವನ ಸಾರ್ಥಕಗೊಳಿಸಿಕೊಳ್ಳಬೇಕು. ಜನರ ಸುಖವೇ ಪರಮ ಸುಖವಾಗಿರಬೇಕು ಎಂದರು.

ರಾಜಕೀಯ ಇರಬೇಕು ಆದರೆ ರಾಜಕೀಯ ದ್ವೇಷ ಇರಬಾರದು. ಯಾರಲ್ಲೂ ಧ್ವೇಷ ಸಾಧಿಸದೆ ಸಮಾಜಮುಖಿ ಚಿಂತನೆಯ ನಾಯಕರಾಗಿದ್ದ ಎಸ್ ಬಂಗಾರಪ್ಪನವರು ಜಾರಿಗೊಳಿಸಿದ ಜನಪರ ಕಾರ್ಯಗಳು ಇಂದಿಗೂ ಬಡ ಜನರ ಕಣ್ಣೀರು ಒರೆಸಿದೆ. ಸಭಾಭವನದ ಮೇಲ್ಮಹಡಿ ಕಟ್ಟಡ ಉದ್ಘಾಟನೆ ಅವರ ಪುತ್ರರಿಂದ ನೆರವೇರುವ ಮೂಲಕ ಅವರ ಜನಮಾನಸದಲ್ಲಿ ನೆಲೆಯೂರುವಂತೆ ಮಾಡಿದ್ದಾರೆ. ಗುರು ಪೀಠದ ಜೊತೆಗೆ ಬಂಗಾರಪ್ಪದ ಕುಟುಂಬಕ್ಕೆ ಅವಿನಾಭಾವ ಸಂಬಂಧ ಇದೆ ಎಂದರು.ಈ ಸಮಾಜ ಶಕ್ತಿಯುತವಾಗಿದೆ.ಸಣ್ಣಪುಟ್ಟ ಎಲ್ಲಾ ಸಮಾಜಗಳನ್ನು ಒಗ್ಗೂಡಿವಿಕೆಯ ಮೂಲಕ ಕೊಂಡೊಯ್ಯಬೇಕು.ಸ್ವೀಕಾರವಾಗುವುದು ಧರ್ಮ ಅಸ್ವೀಕಾರವಾಗುವುದು ಅಧರ್ಮ. ಹಾಗಾಗಿ ಸನಾತನ ಧರ್ಮದ ಪಾಲನೆಯಾಗಬೇಕು. ಧಾರ್ಮಿಕ ಸಂಸ್ಕಾರ ಬೆಳೆಸಲು ಚಾತುರ್ಮಾಸ್ಯ ಹಮ್ಮಿಕೊಂಡಿದ್ದೇವೆ.ಈ ಧಾರ್ಮಿಕ ಕೈಂಕರ್ಯಕ್ಕೆ ಎಲ್ಲೆ ಸಹಕಾರ ಅಗತ್ಯ ಎಂದರು.

ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಯಾಗಿದೆ
ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾತನಾಡಿ, ನಾರಾಯಣ ಗುರುಗಳು ಶಿಕ್ಷಣದಿಂದ ಸ್ವಾತಂತ್ರ‍್ಯ ಸಿಗುತ್ತದೆ ಎಂಬ ಸಂದೇಶ ಸಾರಿದರು.ಅದರಂತೆ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಿದ್ದೇವೆ. ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆ ಮಾಡಿದ್ದೇವೆ. ಉಚಿತ ಪರೀಕ್ಷೆ ವ್ಯವಸ್ಥೆ ರಿಪೀಟರ್ಸ್ ಅವಕಾಶ. ಮೊಟ್ಟೆ,ಹಾಲು, ಬಾಳೆಹಣ್ಣು, ನೀಡುತ್ತಿದ್ದೇವೆ.ವೈಯಕ್ತಿಕ ಸಹಾಯದ ಜೊತೆಗೆ ಸರ್ಕಾರದಿಂದಲೂ ಸಹಕಾರ ಕೊಡಿಸುತ್ತೇನೆ.ನಮ್ಮ ತಂದೆಯ ಹೆಸರನ್ನು ನಿಮ್ಮ ಸಮಾಜದ ಮಂತ್ರಿಯಾದ ನಮ್ಮನ್ನು ಉಪಯೋಗಿಸಿಕೊಳ್ಳಿ ಎಂದರು.

ಬಂಗಾರಪ್ಪನವರು ನೆನೆಸಿರುವುದು ಖುಷಿ ಇದೆ : ಮಂಕಾಳ್ ವೈದ್ಯ
ಸಚಿವ ಮಂಕಾಳು ವೈದ್ಯ ಮಾತನಾಡಿ, ಸಮುದಾಯಕ್ಕೆ ಹಣ ಬೇಕೆಂದು ಎಂದಾಗ ನಾವು ಕೊಡುವಂತಹ ಕೆಲಸ ಮಾಡುತ್ತೇವೆ. ಮತ್ತೆ 50ಲಕ್ಷ ಬೇಕು ಎಂದರೆ ನಾವು ಕೊಡುತ್ತೇವೆ. ಬಂಗಾರಪ್ಪನವರು ನೆನೆಸಿರುವುದು ಖುಷಿ ಇದೆ. ಬಂಗಾರಪ್ಪನವರ ಜನಪರ ಕೆಲಸ ಇಂದಿಗೂ ಜನ ನೆನೆಯುತ್ತಿದ್ದಾರೆ.ಬಂಗಾರಪ್ಪ ಅವರು ರೈತರಿಗೆ ಉಚಿತ ಕರೆಂಟ್ ಕೊಟ್ಟಿದ್ದರು. ಅದರಂತೆ ಪುತ್ರ ಮಧು ಎಲ್ಲಾ ಶಾಲೆಗೆ ಉಚಿತ ಕರೆಂಟ್ ಕೊಡಿಸುವ ಕೆಲಸ ಮಾಡಿದ್ದಾರೆ. ಸಮಾಜ ಆರ್ಥಿಕ, ಶೈಕ್ಷಣಿಕ, ರಾಜಕೀಯವಾಗಿ ಬೆಳೆಯಬೇಕು. ನಾವು ಮಾಡಿದ ಕೆಲಸ ಎಂದಿಗೂ ಶಾಶ್ವತ. ಹಾಗಾಗಿ ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು. ಅದರ ಜೊತೆಗೆ ಶೈಕ್ಷಣಿಕ ಸಾಧನೆ ಬಹುಮುಖ್ಯ. ಅಂಥ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಿ ಎಂದು ಕರೆ ನೀಡಿದರು.
ಶಾಸಕ ಭೀಮಣ್ಣ ನಾಯ್ಕ ಮಾತನಾಡಿ, ಸಮಾಜವು ಗುರುಗಳ ಮಾರ್ಗದರ್ಶನದಲ್ಲಿ ಮುನ್ನಡೆಯುವ ಜೊತೆಗೆ ಅಭಿವೃದ್ಧಿಯಾಗಬೇಕು. ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು.ಆ ನಿಟ್ಟಿನಲ್ಲಿ ಮಧು ಶಿಕ್ಷಣ ಮಂತ್ರಿಯಾಗಿ ಅತ್ಯುತ್ತಮ ಕೆಲಸ ಮಾಡುತ್ತಿದ್ದಾರೆ. ಈ ಭಾರಿಯ ಎಸ್‌ಎಸ್‌ಎಲ್‌ಸಿ ಫಲಿತಾಂಶ ಚೆನ್ನಾಗಿ ಬಂದಿದೆ. ಕುಮಟಾದಲ್ಲಿ ಸಮಾಜ ಸದೃಢವಾಗಿರುವುದು ನಿಜಕ್ಕೂ ಖುಷಿ ನೀಡಿದೆ ಎಂದರು.
ಶಾಸಕ ದಿನಕರ ಶೆಟ್ಟಿ ಮಾತನಾಡಿ, ಅಭಿವೃದ್ಧಿ ವಿಚಾರದಲ್ಲಿ ಸಚಿವ ಮಂಕಾಳು ವೈದ್ಯ ಕೈಜೋಡಿಸಿದ್ದಾರೆ. ಶಿಕ್ಷಣ ಸಚಿವ ಮಧು ಅವರಿಗೆ ನಮ್ಮ ಕ್ಷೇತ್ರದ ಬಗ್ಗೆ ವಿಶೇಷ ಕಾಳಜಿ ವಹಿಸಿರುವುದು ಖಷಿ ಇದೆ. ಹಲವು ಸಮಸ್ಯೆಗಳಿರುವ ಇಲಾಖೆಯನ್ನು ಸಮರ್ಥವಾಗಿ ನಿಬಾಯಿಸುತ್ತಿದ್ದಾರೆ. ಸಭಾಭವನ ಕಟ್ಟಡ ಚೆನ್ನಾಗಿ ಕಟ್ಟಿದ್ದಾರೆ ಅಧ್ಯಕ್ಷರ ತಂಡ ಕೆಲಸ ಮಾಡಿದೆ. ಎಲ್ಲ ಸಮಾಜದ ಅಭಿವೃದ್ಧಿಗೆ ಸಹಕಾರ ನೀಡುವ ಭರವಸೆ ನೀಡಿದರು.

ಕುಮಟಾ ಆರ್ಯ ಈಡಿಗ ನಾಮಧಾರಿ ಸಂಘದ ಅಧ್ಯಕ್ಷ ಮಂಜುನಾಥ ನಾಯ್ಕ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಮಮತಾ ನಾಯ್ಕ ನಿರೂಪಿಸಿದರು. ಕಿರಣ ನಾಯ್ಕ ವಂದಿಸಿದರು. ದವಳಾಕ್ಷಿ ಮತ್ತು ಬಿಳಿಯಪ್ಪ ನಾಯ್ಕ ದಂಪತಿ ಶ್ರೀಗಳ ಪಾದಪೂಜೆ ನೆರವೇರಿಸಿದರು.

ಇದನ್ನೂ ಓದಿ